31 ಅಡಿ ಏಕಶಿಲಾ ಹನುಮಂತನ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ದ
1 min read
ಮೈಸೂರು: 31 ಅಡಿ ಎತ್ತರದ ಏಕಶಿಲಾ ಹನುಮಂತನ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ದವಾಗಿದ್ದು ಯದುವಂಶದ ಯದುವೀರ್ ಒಡೆಯರ್ ಅವರು ಇಂದು ಮೂರ್ತಿ ವೀಕ್ಷಣೆ ಮಾಡಿದರು.

40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮೂರ್ತಿಯನ್ನ ಕೆ ಆರ್ ನಗರದ ಚುಂಚನಕಟ್ಟೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಉತ್ತರಾಖಂಡದ ಕೇದಾರನಾಥ ಕ್ಷೇತ್ರದಲ್ಲಿ ನಿರ್ಮಿಸಿರುವ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆ ಕೆತ್ತನೆ ಮಾಡಿದ್ದ ಶಿಲ್ಪಿ ಮೈಸೂರಿನ ಅರುಣ್ & ತಂಡ ಕೆತ್ತನೆ ಮಾಡಿದೆ.

ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ನಿರ್ಮಾಣವಾಗಿರುವ ಈ ಮೂರ್ತಿ ಪ್ರತಿಷ್ಠಾಪನೆಗೆ ಶಾಸಕ ಸಾ ರಾ ಮಹೇಶ್ ಪ್ರವಾಸೋದ್ಯಮ ಸಚಿವರಾಗಿದ್ದಾಗ ಅನುದಾನ ನೀಡಿದ್ದರು. ಇಂದು ಮೈಸೂರಿನಿಂದ ಕೆ ಆರ್ ನಗರದ ಚುಂಚನ ಕಟ್ಟೆಗೆ ಮೂರ್ತಿ ಸ್ಥಳಾಂತರಿಸಲಾಗಿದೆ. ಕ್ರೇನ್ ಮೂಲಕ ತೆರದ ಲಾರಿಯಲ್ಲಿ ಮೂರ್ತಿ ಸ್ಥಳಾಂತರ ಮಾಡಲಾಗಿದೆ. 31 ಅಡಿ ಎತ್ತರ 35 ಟನ್ ತೂಕದ ಏಕ ಶಿಲಾ ಮೂರ್ತಿ ಇದಾಗಿದೆ.