ಶುಠಿಯ ಪ್ರಯೋಜನ ಕೇಳಿದ್ರೆ ನಿತ್ಯವೂ ಬಳಕೆ ಮಾಡ್ತೀರಾ ನೋಡಿ!
1 min read
ಶುಂಠಿ ಜೌಷಧಿಯ ಗುಣಗಳಿಗೆ ಹೆಸರುವಾಸಿ. ಶುಂಠಿಯಲ್ಲಿ ಹಲವಾರು ರೀತಿಯ ವೈದ್ಯಕೀಯ ಗುಣ ಲಕ್ಷಣಗಳಿವೆ. ಹೀಗಾಗಿ ಇದನ್ನು ಮನೆಮದ್ದಾಗಿ ಬಳಸಲಾಗುತ್ತದೆ. ಭಾರತೀಯರು ತಮ್ಮ ದಿನನಿತ್ಯದ ಬಹುತೇಕ ಆಹಾರ ಪದಾರ್ಥಗಳಲ್ಲಿ ಶುಂಠಿಯನ್ನು ಬಳಸುತ್ತಾರೆ.

ಶುಂಠಿ ಯಾವಾಗ ಬಳಕೆ ಮಾಡ್ತಾರೆ ಗೊತ್ತಾ?
ಹೌದು ಶುಂಠಿಯನ್ನ ಚಳಿಗಾಲದಲ್ಲಿ, ಮಳೆಗಾಲದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಕೆಮ್ಮು ,ಶೀತ ,ಜ್ವರ ಇತ್ಯಾದಿಗಳು ಬರುವ ಸೂಚನೆ ಇದ್ದರೆ ಅಥವಾ ಈ ಲಕ್ಷಣಗಳು ಇದ್ದರೆ ಶುಂಠಿಯನ್ನು ಬಳಸುತ್ತೇವೆ. ಈ ರೀತಿಯ ಸಮಸ್ಯೆಗಳಿಗೆ ನಮ್ಮ ಪೂರ್ವಜರು ನೀಡುತ್ತಿದ್ದ ತುಳಸಿ, ಬೆಲ್ಲ, ಶುಂಠಿ ಕಷಾಯಗಳು ನೆನಪಾಗುತ್ತದೆ. ಒಟ್ಟಿನಲ್ಲಿ ಶುಂಠಿ ಶೀತ ಸಂಬಂಧಿ ರೋಗಗಳಿಗೆ ಉತ್ತಮ.
ಇಂತಹ ಔಷಧೀಯ ಗುಣಗಳುಳ್ಳ ಶುಂಠಿಯನ್ನು ಕೊರೊನಾ ಬಂದ ಮೇಲಂತೂ ಎಲ್ಲರೂ ಮತ್ತಷ್ಟು ಉಪಯೋಗಿಸಲು ಪ್ರಾರಂಭಿಸಿದರು. ಶುಂಠಿ ಟೀ, ಶುಂಠಿ ಕಷಾಯ ಹೀಗೆ ದಿನನಿತ್ಯ ಉಪಯೋಗಿಸಲು ಶುರು ಮಾಡಿದರು. ಶುಂಠಿ ಎಂದರೆ ಮೂಗು ಮುರಿಯುತ್ತಿದ್ದವರು ಸಹ ಕೊರೊನಾ ಸಂದರ್ಭದಲ್ಲಿ ವಿಧಿಯಿಲ್ಲದೆ ಶುಂಠಿಯನ್ನು ಬಳಸಲು ಪ್ರಾರಂಭಿಸಿದರು.
ಶುಂಠಿ ಬಹು ಉಪಯೋಗಿ ಬಳಕೆಯಾಗುತ್ತದೆ. ಇದನ್ನು ಮಧುಮೇಹ, ಋತುಚಕ್ರದಲ್ಲಿ ಬರುವಂತಹ ನೋವು, ಮೈಗ್ರೇನ್, ತಲೆನೋವು ಮತ್ತು ಸಂಧಿವಾತಗಳ ನೋವಿಗೆ ಬಳಸಲಾಗುತ್ತದೆ. ಶುಂಠಿಯಲ್ಲಿರುವ `ರೈಜೋಮೋ’ ಎಂಬ ರಾಸಾಯನಿಕ ಒಂದನ್ನು ಔಷಧಿಗಳಲ್ಲಿಯು ಸಹ ಬಳಸಲಾಗುತ್ತದೆ. ಸಾಂಬಾರು ಪದಾರ್ಥಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಪದಾರ್ಥ ಇದಾಗಿದೆ.

ಸಾಮಾನ್ಯವಾಗಿ ಶುಂಠಿಯನ್ನು ಆರೋಗ್ಯ ಸರಿಯಿಲ್ಲದಿದ್ದಾಗ ಚೇತರಿಕೆಗಾಗಿ ಬಳಸಲಾಗುತ್ತದೆ. ಇದರಲ್ಲಿ ಅಪಾರ ಪ್ರಮಾಣದ ವೈದ್ಯಕೀಯ ಗುಣಲಕ್ಷಣಗಳಿವೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ ಅಗತ್ಯ ಪ್ರಮಾಣದಲ್ಲಿ ಶುಂಠಿಯನ್ನು ಉಪಯೋಗಿಸಬೇಕು. ಆಗ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಿಸರ್ಗ ನೀಡಿರುವ ನೈಸರ್ಗಿಕ ಪದಾರ್ಥಗಳನ್ನು ಉತ್ತಮ ರೀತಿಯಲ್ಲಿ ಬಳಸೋಣ.
ಶುಂಠಿ ಸೇವಿಸುವುದರಿಂದ ಆಗುವ ಪ್ರಯೋಜನಗಳು
ಜೀರ್ಣಕ್ರಿಯೆಯಲ್ಲಿ ಶುಂಠಿ, ವಾಕರಿಕೆ ತಡೆಯುತ್ತದೆ ಮತ್ತು ಉರಿಯೂತದ ಗುಣಗಳನ್ನು ಹೋಗಲಾಡಿಸುತ್ತದೆ. ಶುಂಠಿಯಲ್ಲಿರುವ ಜಿಂಜರಾಲ್ ಎಂಬ ಅಂಶವು ಜೀರ್ಣಕ್ರಿಯೆಗೆ.

ಪ್ರತಿದಿನ ಶುಂಠಿಯ ಸೇವನೆಯಿಂದ ಚಯಾಪಚಯ ಕ್ರಿಯೆಯು ಉತ್ತಮವಾಗಿರುತ್ತದೆ. ಪ್ರತಿದಿನ ಸುಮಾರು 120 ಮಿಗ್ರಾಂ ಶುಂಠಿ ಸಾರವನ್ನು 21 ದಿನಗಳವರೆಗೆ ನೀಡುವುದರಿಂದ ವೆಂಟಿಲೇಟರ್ ಬೆಂಬಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಮಧುಮೇಹ ಇರುವವರು ಅಗತ್ಯ ಪ್ರಮಾಣದ ಶುಂಠಿ ಸೇವನೆಯಿಂದ ರಕ್ತದೊತ್ತಡ ಪ್ರಮಾಣವನ್ನು ಕಡಿಮೆ ಮಾಡಬಹುದು. ದಿನವೊಂದಕ್ಕೆ ಮೂರು ಗ್ರಾಂ ನಷ್ಟು ಶುಂಠಿ ಸೇವನೆ ಇದಕ್ಕೆ ಸೂಕ್ತವಾಗಿದೆ. ಪ್ರತಿದಿನ ಮೂರು ಗ್ರಾಂ ಶುಂಠಿಯನ್ನು, ಮೂರು ತಿಂಗಳವರೆಗೆ ಸೇವಿಸಿದರೆ ಉತ್ತಮ ಫಲಿತಾಂಶ ದೊರೆಯುವುದು.

ಅಜೀರ್ಣವಾದಾಗ ಶುಂಠಿ ಬೇರಿನ ಪುಡಿಯನ್ನು 1.2 ಗ್ರಾಂ ನಷ್ಟ್ಟು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.
ಮಕ್ಕಳಿಗೆ ಶೀತವಾದಾಗ, ಜ್ವರ ಬಂದಾಗ 3 ರಿಂದ 6 ಹನಿ ಹಸಿ ಶುಂಠಿ ರಸ, ಒಂದು ಚಮಚ ಜೇನುತುಪ್ಪ ಮತ್ತು 2-3 ಹನಿ ತುಳಸಿ ರಸ ಬೆರೆಸಿಕೊಟ್ಟರೆ ಮಕ್ಕಳಿಗೆ ಬೇಗ ಆರಾಮವೆನಿಸುತ್ತದೆ.
ಒಂದು ಲೋಟ ಕಡಿದ ಮಜ್ಜಿಗೆಗೆ 2 ಚಮಚ ಶುಂಠಿ ರಸ ಹಾಗೂ ಸ್ವಲ್ಪ ಸೈಂಧವ ಲವಣವನ್ನು ಬೆರೆಸಿ ಪ್ರತಿದಿನ ಕುಡಿದರೆ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ.
ಗಂಟಲು ನೋವು, ಕೆರೆತ, ಕೆಮ್ಮಿಗೆ ಹಸಿಶುಂಠಿಗೆ ಉಪ್ಪು ಹಾಕಿ ಸೇವಿಸಿದರೆ ಒಳ್ಳೆಯದು. ಅತಿಯಾದ ಕೆಮ್ಮಿದ್ದರೆ ಶುಂಠಿ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿ.
ಊಟ ಮಾಡುವುದಕ್ಕೂ ಮೊದಲು ಸ್ವಲ್ಪ ಶುಂಠಿಯನ್ನು ಜಗಿದು ತಿಂದರೆ ಹಸಿವು ಹೆಚ್ಚಾಗುತ್ತದೆ. ಶುಂಠಿ ಟೀ ಸೇವಿಸುವುದರಿಂದ ಗಂಟಲು ಬೇನೆ, ಕಟ್ಟಿದ ಮೂಗಿನಿಂದ ಆರಾಮ್ ಸಿಗಲಿದೆ.
ಶುಂಠಿ ಸೇವನೆಯ ಅಡ್ಡಪರಿಣಾಮಗಳು
ಸೂಕ್ತವಾಗಿ ಸೇವಿಸಿದಾಗ ಶುಂಠಿ ಸೇವನೆಯು ಸುರಕ್ಷಿತವಾಗಿರುತ್ತದೆ. ಕೆಲವೊಮ್ಮೆ ಎದೆಯುರಿ, ಅತಿಸಾರ, ಬರ್ಪಿಂಗ್ ಮತ್ತು ಕೆಲವು ಹೊಟ್ಟೆಯ ಅಸ್ವಸ್ಥತೆ ಸೇರಿದಂತೆ ಸೌಮ್ಯ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ಶುಂಠಿಯನ್ನು ಬಳಸಿ.
ಸಂಶೋಧನೆಗಳ ಪ್ರಕಾರ ಗರ್ಭಿಣಿಯರು ಶುಂಠಿಯನ್ನು ಬಳಸದಿರುವುದು ಸೂಕ್ತ. ಶುಂಠಿಯನ್ನು ಸೇವಿಸುವುದರಿಂದ ಅಪಾರ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಗರ್ಭಿಣಿಯರು ಇದರ ಬಗ್ಗೆ ಗಮನ ಹರಿಸಬೇಕು.