ಅಬಕಾರಿ ಇಲಾಖೆ ಜಪ್ತಿ ಮಾಡಿದ್ದ ಬೈಕ್, ಕಾರು ಹರಾಜು
1 min read
ಟಿ.ನರಸೀಪುರ: ವಿವಿಧ ಪ್ರಕರಣಗಳಲ್ಲಿ ಅಬಕಾರಿ ಇಲಾಖೆ ಜಪ್ತಿ ಮಾಡಿದ್ದ ಬೈಕ್ ಮತ್ತು ಕಾರು ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಟಿ.ನರಸೀಪುರ ಪಟ್ಟಣದ ಅಬಕಾರಿ ವಲಯ ಕಚೇರಿಯಲ್ಲಿ ಈ ಪ್ರಕ್ರಿಯೆ ನಡೆದಿದ್ದು, ನಂಜನಗೂಡು ಉಪವಿಭಾಗ ಅಬಕಾರಿ ಉಪ ಅಧಿಕ್ಷರಾದ ವಿಕ್ರಮ್ ಎಲ್.ಬಿ ನೇತೃತ್ವದಲ್ಲಿ ನಡೆದ ಹರಾಜು ಪ್ರಕ್ರಿಯೆ ನೆರವೇರಿಸಲಾಯಿತು. 5 ಬೈಕ್ ಮತ್ತು ಒಂದು ಕಾರನ್ನ ಹರಾಜು ಮಾಡಲಾಯಿತು.

ಈ ವೇಳೆ ಮಾತನಾಡಿದ ನಂಜನಗೂಡು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ವಿಕ್ರಮ್ ನರಸೀಪುರ ತಾಲ್ಲೂಕಿನದ್ಯಂತ ಹಲವು ಅಬಕಾರಿ ಪ್ರಕರಣಗಳಲ್ಲಿ ಬೈಕ್ ಮತ್ತು ಕಾರನ್ನ ವಶಪಡಿಸಿಕೊಳ್ಳಲಾಗಿತ್ತು. ಅಬಕಾರಿ ಉಪ ಆಯುಕ್ತರ ಮೈಸೂರು ಗ್ರಾಮಾಂತರ ಇವರ ನಿರ್ದೇಶನದಂತೆ ವಾಹನಗಳನ್ನ ಹರಾಜು ಮಾಡಲಾಗಿದೆ ಎಂದರು.
ಈ ಸಂದರ್ಭ ನರಸೀಪುರ ವಲಯ ಅಬಕಾರಿ ನಿರೀಕ್ಷಕ ಎನ್.ರಾಜೇಶ್, ಸಿಬ್ಬಂದಿಗಳಾದ ಪರಶಿವಮೂರ್ತಿ, ಮಹಾಲಿಂಗಪ್ಪ ಎಂ,ಇರ್ಫಾನ್ ಅಹಮ್ಮದ್, ಸೇರಿದಂತೆ ಮತ್ತಿತರರು ಹಾಜರಿದ್ದರು.