ಸಮಾಜ ಒಡೆಯುವ ಪ್ರಯತ್ನ ಮಾಡಬೇಡಿ: ಜಯಮೃತ್ಯುಂಜಯಶ್ರೀ
1 min read
ಬೆಂಗಳೂರು,ಜ.22-ಸಮಾಜವನ್ನು ಒಗ್ಗೂಡಿಸಲು ಪೀಠ ಕಟ್ಟಿದ್ದು, ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಜಯಮೃತ್ಯುಂಜಯಶ್ರೀ ಹೇಳಿದ್ದಾರೆ.
ಇಂದು ಜಂಟಿ ಸುದ್ದಿಗೋಷ್ಠೀ ನಡೆಸಿ ಮಾತನಾಡಿದ ಅವರು, ಪೀಠಗಳು ಸ್ಥಾಪನೆಯಾದ ನಂತರ ವೈಯುಕ್ತಿಕಕ್ಕೆ ಬಳಕೆ
ಸಚಿವರನ್ನ,ಸಿಎಂ ಮಾಡೋಕೆ ಎಂಬ ತಪ್ಪು ಕಲ್ಪನೆ ಬಂದಿದೆ
ನಮ್ಮ ಮೂಲ ಉದ್ದೇಶ ಸಾಮಾಜಿಕ ನ್ಯಾಯಕ್ಕಾಗಿ. ಸಿಎಂ,ಮಂತ್ರಿ ಸ್ಥಾನಕ್ಕಿಂತ ಸಮುದಾಯದ ಹಿತ ಮುಖ್ಯ ಎಂದು ಹೇಳಿದ್ದಾರೆ.
೭೧೨ ಕಿ.ಮೀ ದೊಡ್ಡ ಪಾದಯಾತ್ರೆ ಮಾಡಿದ್ದೆವು.ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದೆವು. ಸಮುದಾಯದ ಬೇರೆಬೇರೆಯವರ ಒಗ್ಗೂಡಿಕೆ ಪ್ರಯತ್ನ. ಮೈಸೂರಿನಿಂದ ನಾವು ಮತ್ತೆ ಹೋರಾಟ ನಡೆಸಿದ್ವಿ. ಆದರೆ ಇತ್ತೀಚೆಗೆ ಪೀಠ ಸ್ಥಾಪನೆ ಕೇಳಿಬರ್ತಿದೆ
ಗ್ರಾಮಕ್ಕೊಂದು,ಮನೆಗೊಂದು ಪೀಠ ಮಾಡಲಿ.
ನಿರಾಣಿಯವರು ಮೂರನೇ ಪೀಠಕ್ಕೆ ಬೆಂಬಲ ಇದೆ ಅಂದಿದ್ದಾರೆ. ತಮ್ಮ ಬೆಂಬಲ ಇದೆ ಎಂದಿದ್ದು ನೋವಾಗಿದೆ. ನಾವು ಬಹಳ ಕಷ್ಟ ಪಟ್ಟು ಸಮುದಾಯ ಕಟ್ಟುತ್ತಿದ್ದೇವೆ. ಸಮಾಜ ಒಡೆಯುವ ಕೆಲಸ ಯಾರು ಮಾಡ್ತಿದ್ದಾರೆ. ಯಾರು ಸಮಾಜ ಕಟ್ತಿದ್ದಾರೆ ಎಲ್ಲರಿಗೆ ಗೊತ್ತಿದೆ. ನೀವು ಎಂಎಲ್ ಎ ಆಗಬೇಕ ಅಲ್ಲಿ ಪೀಠ ಮಾಡಿಕೊಳ್ಳಿ. ಸಿಎಂ ಆಗ್ಬೇಕಾ ರಾಜ್ಯದಲ್ಲಿ ಪೀಠ ಮಾಡಿಕೊಳ್ಳಿ. ನಿರಾಣಿಯವರು ಮಾಡಿಕೊಳ್ಳಲಿ. ನಮ್ಮದೇನು ಇದಕ್ಕೆ ಅಭ್ಯಂತರವಿಲ್ಲ ಎಂದಿದ್ದಾರೆ
ಸಮಾಜ ಕುಗ್ಗಿಸುವ ಕೆಲಸ ಮಾಡಬೇಡಿ. ಸಮಾಜ ಕಟ್ಟುವ ಕೆಲಸ ನಾವು ಮಾಡ್ತೇವೆ. ನೀವು ಏನು ಬೇಕಾದರೂ ಮಾಡಿಕೊಳ್ಳಿ. ಸರ್ಕಾರದ ಅನುದಾನವನ್ನ ವಾಪಸ್ ಕೊಟ್ಟಿದ್ದೇವೆ. ನಮಗೆ ಮೀಸಲಾತಿ ಮುಖ್ಯ ಎಂದು ಹೊರಟಿದ್ದೇವೆ. ನಿಮ್ಮಸ್ವಾರ್ಥಕ್ಕೆ ಮಠ ದುರ್ಬಳಕೆ ಮಾಡಿಕೊಳ್ಳಬೇಡಿ ಎಂದಿದ್ದಾರೆ.
ಮೀಸಲಾತಿ ಕೊಡುವ ಬಗ್ಗೆ ಕೈ ನಾಯಕರ ಹೋರಾಟ ವಿಚಾರ
ನಾವು ಒಬಿಸಿಯಲ್ಲೇ ಇದ್ದೇವೆ. ನಮಗೆ ಮೀಸಲಾತಿ ಪ್ರಮಾಣ ಕಡಿಮೆಯಾಗಿದೆ. ೩ಬಿ ಯಿಂದ ೨ಎ ಗೆ ನಾವು ಕೇಳ್ತಿದ್ದೇವೆ. ನಮ್ಮ ಸಮಾಜದ ಸತ್ಯಾಸತ್ಯತೆ ಬಗ್ಗೆ ನಾವು ಹೇಳ್ತಿದ್ದೇವೆ. ದಾಸೋಹ,ತೆರಿಗೆ ಕಟ್ಟೋದಕಷ್ಟೇ ನಾವಿಲ್ಲ. ನಿಮಗೆ ಅನ್ಯಾಯವಾದರೆ ಕೋರ್ಟ್ ಮೂಲಕ ಹೋಗಿ ಬುದ್ಧಿ ಜೀವಿಗಳು ಗೊಂದಲ ಮಾಡುವುದು ಬೇಡ. ಪಿಸಿಕಲಿ ಈಗ ಸಭೆಗಳನ್ನ ಆಯೋಗ ಮಾಡ್ತಿದೆ. ಸತ್ಯಾಸತ್ಯತೆ ನೋಡಿಯೇ ತೀರ್ಮಾನ ಮಾಡಲಿ ಎಂದರು.
ಕೂಡಲಸಂಗಮ ಶ್ರೀ ಏನುಅನ್ನುವುದು ಜನರಿಗೆ ಗೊತ್ತಿದೆ
ಪೀಠ ಕಟ್ಟಿದ್ದು ಸಮುದಾಯದ ಒಗ್ಗಟ್ಟಿಗಾಗಿ
ಅನೇಕ ಶಾಸಕರು ನಮ್ಮಹೋರಾಟಕ್ಕೆ ಬೆಂಬಲಕೊಟ್ಟಿದ್ದಾರೆ. ಮೀಸಲಾತಿ ಬಗ್ಗೆ ಸಿಎಂ ಭರವಸೆ ಕೊಟ್ಟಿದ್ದಾರೆ. ಮೀಸಲಾತಿ ಹೋರಾಟದಿಂದ ಹೆಸರು ಬರುತ್ತದೆ. ಶ್ರೀಗಳು,ಯತ್ನಾಳ್,ಕಾಶಪ್ಪಗೆ ಬರುತ್ತೆ ಅಂದುಕೊಂಡಿದ್ದಾರೆ. ಸಮಾಜ ಒಡೆಯುವ ಕೆಲಸ ಮಾಡ್ತಿದ್ದಾರೆ ಎಂದರು.
ಸಮಾಜ ಯಾರು ಒಡೆಯುತ್ತಿದ್ದಾರೆ. ಯಾರು ಸಮಾಜ ಕಡ್ತಾರೆ ನೀವೆ ಗಮನಿಸಿ. ನಮ್ಮಬಗ್ಗೆ ಇಡೀ ಜಗತ್ತಿಗೇ ಗೊತ್ತಿದೆ. ಸಮಾಜದಲ್ಲಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಹೇಳಿದರು.