ಮೈಸೂರಲ್ಲಿ ಗುಂಡೇಟಿಗೆ ಆನೆ ಬಲಿ!
1 min read
ಮೈಸೂರು : ಮೈಸೂರಿನಲ್ಲಿ ಗುಂಡೇಟಿಗೆ ಕಾಡಾನೆ ಬಲಿಯಾಗಿದ್ದು ನಾಗರಹೊಳೆ ಉದ್ಯಾನವನದಿಂದ ನಾಡಿಗೆ ಬಂದಿದ್ದ ಆನೆ ಮೃತಪಟ್ಟಿದೆ. ಪಿರಿಯಾಪಟ್ಟಣ ತಾಲ್ಲೂಕಿನ ಸೂಳಗೋಡು ಗ್ರಾಮದಲ್ಲಿ ಘಟನೆ ನಡೆದಿದ್ದು, ಕಾಡಿನಿಂದ ಸುಮಾರು 500 ಮೀಟರ್ ದೂರದಲ್ಲಿರುವ ಗ್ರಾಮದ ರೈತ ರೇವಣ್ಣ ಜಮೀನಿನಲ್ಲಿ ಆನೆ ಶವ ಪತ್ತೆಯಾಗಿದೆ. ಆಹಾರ ಹುಡುಕಿಕೊಂಡು ನಾಡಿಗೆ ಬಂದಿದ್ದ 5 ಆನೆಗಳ ಗುಂಪಿಗೆ ಗುಂಪಿನತ್ತ ಅಪರಿಚಿತರಿಂದ ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ. ಗುಂಡೇಟಿಗೆ ಬಲಿಯಾಗಿರುವ ಸುಮಾರು 20 ವರ್ಷದ ಹೆಣ್ಣಾನೆ ಶವವನ್ನ ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.