ಅರಮನೆ ದ್ವಾರಕ್ಕೆ ಪೇಟಿಂಗ್ ಮಾಡುವಾಗ ಆಯತಪ್ಪಿ ಬಿದ್ದ ಕಾರ್ಮಿಕ!
1 min read
ಮೈಸೂರು ದಸರಾ ಹಿನ್ನಲೆಯಲ್ಲಿ ಪೇಟಿಂಗ್ ಮಾಡುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಮೈಸೂರು ಅರಮನೆ ಆವರಣದಲ್ಲಿ ನಡೆದಿದೆ.

ಜಯಮಾರ್ತಾಂಡ ಗೇಟ್ನ ಗೋಪುರಕ್ಕೆ ಪೇಂಟ್ ಮಾಡುವ ವೇಳೆ ಗೌಸಿಯಾನಗರದ ನಿವಾಸಿ ಆಪ್ತಾಬ್ 20 ಅಡಿ ಮೇಲಿಂದ ಬಿದ್ದು ಗಾಯಾಗೊಂಡಿದ್ದಾರೆ. ಸದ್ಯ ರಕ್ತ ಸ್ರಾವದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಗೆ ಕರೆಸಿಕೊಂಡು ಹೋಗಿದ್ದು ಚಿಕಿತ್ಸೆ ಮುಂದುವರೆದಿದೆ.