ಸೇವೆಯಿಂದ ವಯೋ ನಿವೃತ್ತಿ ಹೊಂದಿದ ನೌಕರರಿಗೆ ಅಭಿನಂದನ ಸಮಾರಂಭ
1 min read
ಮೈಸೂರು: ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ಮಂಡಳಿಯ ಸಿಬ್ಬಂದಿ ವರ್ಗದವರಿಗೆ ಅಭಿನಂದನ ಸಮಾರಂಭ ಏರ್ಪಡಿಸಲಾಗಿತ್ತು.
ಮಾನಂದವಾಡಿ ರಸ್ತೆಯಲ್ಲಿರುವ ಕೆ ಎಸ್ ಐ ಸಿ ಆವರಣದಲ್ಲಿ ಕರ್ನಾಟಕ ರೇಷ್ಮೆ ನೆಯ್ಕ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾದ ಸಿದ್ದಲಿಂಗಪ್ರಸಾದ್ ರವರ ಅಧ್ಯಕ್ಷತೆಯಲ್ಲಿ 40 ವರ್ಷಗಳಿಂದ ಸೇವೆ ಸಲ್ಲಿಸಿದ ನಿವೃತ್ತಿಗೊಂಡ ನೌಕರರುಗಳಾದ ಪ್ರೊಡಕ್ಷನ್ ಮ್ಯಾನೆಜರ್ ಆಗಿ ಸಂಗಮ್, ಎಂ ಮಹಾದೇವಯ್ಯ, ಗೋಪಿಕೃಷ್ಣ, ಮುರುಳಿ,ಧರ್ಮಲಿಂಗು ಲಕ್ಷ್ಮಣ್ ಸ್ವಾಮಿ, ಗೋಪಿನಾಥ್ ರವರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ ಮಾತನಾಡಿದ ಅವರು ಸರ್ಕಾರಿ ಸೇವೆಗೆ ಸೇರಿದ ನಂತರ ನಿವೃತ್ತಿ ಕಡ್ಡಾಯ, ಅದರಲ್ಲೂ ಇಂದಿನ ಕೆಲಸ ಒತ್ತಡದಲ್ಲಿ ಬೇಗ್ ನಿವೃತ್ತಿ ಹೊಂದುವುದೇ ಸೂಕ್ತ. ಇಲಾಖೆಯಲ್ಲಿ ಅವರು ಸುದೀರ್ಘ ಸೇವೆ ಸಲ್ಲಿಸಿದ್ದು ಹರ್ಷದಾಯಕವಾಗಿದೆ. ಸೇವೆಯಿಂದ ನಿವೃತ್ತಿ ಹೊಂದಿದ ನೌಕರ ಅವರ ನಿವೃತ್ತಿ ಜೀವನ ಆರೋಗ್ಯಮಯವಾಗಿರಲಿ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕೃಷ್ಣರಾಜ ಕ್ಷೇತ್ರದ ಯೂಥ್ ಕಾಂಗ್ರೆಸ್ ನ ಉಪಾಧ್ಯಕ್ಷ ನವೀನ್.ಎಂ. ಕೆಂಪಿ, ಕೆ. ಆರ್. ಬ್ಯಾಂಕ್ ನ ಉಪಾಧ್ಯಕ್ಷರಾದ ಬಸವರಾಜು ಬಸಪ್ಪ ಹಾಗೂ ನಿವೃತ್ತಿ ಹೊಂದಿದ ಸಿಬ್ಬಂದಿ ವರ್ಗದವರ ಕುಟುಂಬಸ್ಥರು ಉಪಸ್ಥಿತರಿದ್ದರು.