ಜಮೀರ್ ಅಹ್ಮದ್ ಖಾನ್ ಹರಕೆಯ ಕುರಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
1 min read
ವಿಜಯಪುರ,ಅ.22- ಶಾಸಕ ಜಮೀರ್ ಅಹ್ಮದ್ ಖಾನ್ ಅವರನ್ನು ಹರಕೆಯ ಕುರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಸಿಂದಗಿ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ತೊಡಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು 2004ರ ಉಪ ಚುನಾವಣೆಯಲ್ಲಿ ಜಮೀರ್ ಅಹ್ಮದ್ ಖಾನ್ ಗೆ ಟಿಕೆಟ್ ನೀಡಿದ್ದವು. ಆಗ ಸಿದ್ಧರಾಮಯ್ಯ ನಮ್ಮ ಪಕ್ಷದಲ್ಲಿ ಡಿಸಿಎಂ ಆಗಿದ್ದರು. ಆ ವೇಳೆ ಹರಕೆ ಕುರಿ ಕರೆದುಕೊಂಡು ಹೋಗಿ ನಿಲ್ಸಿದ್ದಾರೆ ಎಂದಿದ್ದರು. ಈಗ ಅದೇ ಹರಕೆಯ ಕುರಿಯನ್ನ ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂದರು.
ಹಾಗೆಯೇ ಅವರಪ್ಪನಾಣೆ ಸಿಎಂ ಆಗಲ್ಲ ಅಂತಿದ್ರು. ನಂತರ ನಮ್ಮ ಮನೆಗೆ ಅವರೇ ಬಂದ್ರು. ನಾನು ಸಿಎಂ ಆದೆ. ಮತಪಡೆಯಲಷ್ಟೇ ಕಾಂಗ್ರೆಸ್ ನವರು ಆರೋಪ ಮಾಡ್ತಾರೆ. ಜೆಡಿಎಸ್ ಕೆಣಕಿದಷ್ಟು ಕಾಂಗ್ರೆಸ್ ಮುಗಿಯುತ್ತೆ ಎಂದು ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಸಿದರು.