ಹಣಕ್ಕಾಗಿ ಪತ್ನಿಯನ್ನೇ ಕೊಂದ ಪತಿ: ಕೆಲವೇ ಗಂಟೆಗಳಲ್ಲಿ ಅಂದರ್

1 min read

ನಂಜನಗೂಡು: ಹಣಕ್ಕಾಗಿ ಪೀಡಿಸುತ್ತಿದ್ದ ಪತಿರಾಯ ಪತ್ನಿಯನ್ನ ಉಸಿರುಕಟ್ಟಿಸಿ ಕೊಂದ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.ದೇವೀರಮ್ಮ(45) ಮೃತ ದುರ್ದೈವಿ.

ಪತಿ ವೆಂಕಟೇಶ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇಬ್ಬರು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ ವೆಂಕಟೇಶ್ ಹಣಕ್ಕಾಗಿ ಗಲಾಟೆ ಮಾಡಿಕೊಂಡು ಪತ್ನಿಯಿಂದ ಬೇರೆಯಾಗಿ ಹೆಚ್.ಡಿ.ಕೋಟೆ ಹಂಪಾಪುರದಲ್ಲಿ ನೆಲೆಸಿದ್ದ. ಇತ್ತೀಚೆಗೆ ರಾಂಪುರ ಗ್ರಾಮಕ್ಕೆ ಬಂದು ಮತ್ತೆ ಪತ್ನಿ ಜೊತೆ ಸೇರಿಕೊಂಡಿದ್ದ. ಹೀಗಿದ್ದೂ ಹಣಕ್ಕಾಗಿ ಆಗಾಗ ಗಲಾಟೆ ಮಾಡುತ್ತಿದ್ದ. ಮೇ 6 ರಂದು ರಾತ್ರಿ ಇದೇ ವಿಚಾರದಲ್ಲಿ ದಂಪತಿ ನಡುವೆ ಜಗಳ ಆಗಿದೆ. ಮಗ ಮನು ಮಧ್ಯ ಪ್ರವೇಶಿಸಿ ತಂದೆಯನ್ನ ಸಮಾಧಾನಪಡಿಸಿ ಕೆಸಕ್ಕೆ ತರಳಿದ್ದ ಇಂದು ಬೆಳಿಗ್ಗೆ ಮನೆಗೆ ಬಂದಾಗ ತಾಯಿ ದೇವೀರಮ್ಮ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮುಖದ ಮೇಲೆ ಗಾಯದ ಗುರುತುಗಳಾಗಿದೆ.ಕುತ್ತಿಗೆಯನ್ನ ಸೀರೆಯಿಂದ ಬಿಗಿಯಲಾಗಿದೆ. ತಂದೆ ವೆಂಕಟೇಶ್ ಕೊಲೆ ಮಾಡಿದ್ದಾನೆಂದು ಮಗ ಮನು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಗೋವಿಂದರಾಜು ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ್ ತಳವಾರ್ ಹುಲ್ಲಹಳ್ಳಿ ಪಿಎಸ್ ಐ ಮಹೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯವೆಸಗಿ ತಲೆ ಮರೆಸಿಕೊಂಡಿದ್ದ ಆರೋಪಿ ವೆಂಕಟೇಶ್ ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Author

Leave a Reply

Your email address will not be published. Required fields are marked *