ಶುಖವನ ಗಿಳಿಗಳೊಂದಿಗೆ ಸಮಯ ಕಳೆದ ರಾಜ್ಯಪಾಲರು
1 min read
ಮೈಸೂರು: ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಮಂಗಳವಾರ ಭೇಟಿ ನೀಡಿದರು.
ಭೇಟಿ ವೇಳೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ನಿರ್ಮಿಸಿರುವ ಶುಕವನ’ ಮತ್ತು ಬ್ನೊಸಾಯಿ ಉದ್ಯಾನವನ್ನು ವೀಕ್ಷಣೆ ಮಾಡಿದರು. ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿರ್ಮಿಸಿರುವ ಭುವಿ ವನವನ್ನು ಅನಾವರಣಗೊಳಿಸಿದರು. ಬಳಿಕ ವಿವಿಧ ಜಾತಿಯ ಗಿಳಿಗಳ ಕಲರವ ಆಲಿಸಿದರು. ತದನಂತರ ಪಕ್ಷಿಗಳಿಗೆ ಬೀಜಗಳು, ಕಾಳುಗಳನ್ನು ನೀಡಿದರು.





ಈ ಸಂದರ್ಭದಲ್ಲಿ ದತ್ತಪೀಠದ ಕಿರಿಯ ಸ್ವಾಮೀಜಿಗಳಾದ ಶ್ರೀ ದತ್ತ ವಿಜಯನಂದ ತೀರ್ಥ ಸ್ವಾಮೀಜಿ, ಡಾ. ನಿತ್ಯಾನಂದ ರಾವ್, ಬಿಜೆಪಿ ಮುಖಂಡ ಕೇಬಲ್ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.