ಮತ್ತೇ ಒಂದಾಗಲಿ ದಚ್ಚು-ಕಿಚ್ಚ! ಇವರಿಬ್ಬರು ಸ್ಯಾಂಡಲ್‌ವುಡ್‌‌‌ನ ಕಳಶ!

1 min read

ಸಿನಿಮಾ: ಸ್ಯಾಂಡಲ್‌ವುಡ್‌‌‌ನ ಸೂಪರ್ ಸ್ಟಾರ್ ಅಂದ್ರೆ ಥಟನೇ ನೆನಪಾಗೋದು ಉಪೇಂದ್ರ ಅಂತ. ಅದೇ ನಂಬರ್ ಒನ್ ಯಾರು ಅನ್ನೋ ಪ್ರಶ್ನೆಗೆ ಮಾತ್ರ ಎಲ್ಲ ಹೇಳೋದು. ಡಿ ಬಾಸ್, ಸುದೀಪ್, ಪುನೀತ್, ಯಶ್, ಶಿವಣ್ಣ… ಅರೆ ಎಲ್ರುನಾ ಅಂತ ಕೇಳೆ‌ ಕೇಳ್ತೀರಾ. ಅಲ್ಲದೆ ಈ ರೀತಿ ಗೊಂದಲ ಕೂಡ ಖಂಡಿತ ಹಾಗೆ ಆಗುತ್ತೆ.

ಆದ್ರೆ ಅತೀ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಲೀಸ್ಟ್‌ಗೆ ಬಂದಾಗ ಮಾತ್ರ ದಚ್ಚು ಮತ್ತು ಕಿಚ್ಚ ಇಬ್ಬರು ಇದ್ದಾರೆ ಅನ್ನೋದನ್ನ ಮರೆಯುವಂತಿಲ್ಲ. ಹೌದು, ದರ್ಶನ್ ಮತ್ತು ಸುದೀಪ ಇಬ್ಬರು ಕೂಡ ಕುಚುಕು ಸ್ನೇಹಿತರು. ಈ ಹಿಂದೆ ಒಟ್ಟೊಟ್ಟಿಗೆ ಸಿಸಿಎಲ್‌ನಲ್ಲಿ ಕ್ರಿಕೆಟ್ ಆಡ್ತಿದ್ರು. ಯಾವುದೇ ಸಮಯದಲ್ಲಿ ಒಬ್ಬರನ್ನೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ‌. ಅಂತಹ ಸ್ನೇಹ ಇವರಿಬ್ಬರದ್ದು.

ದಚ್ಚುಗೆ ಲಾಂಗ್ ಡ್ರೈವ್ ಮೆಚ್ಚು’ ಕಿಚ್ಚಾಗೆ ದಚ್ಚು ಹಿಂದೆ ಕುಳಿತುಕೊಳ್ಳೋ ಆಸೆ

ಹೌದು ನಟ ದರ್ಶನ್ ಬಳಿ ಸಾಕಷ್ಟು ಕಾರುಗಳಿವೆ. ಅದರ ಜೊತೆಗೆ ಅದ್ಭುತವಾದ ಬೈಕ್‌ಗಳು ಸಹ ಇದೆ. ಇನ್ನು ಸೇಮ್ ಅನ್ನೋ ಹಾಗೆ ಕಿಚ್ಚನ ಬಳಿಯು ಕೂಡ ಸಾಕಷ್ಟು ಕಾರುಗಳಿವೆ, ಬೈಕ್ ಇವೆ. ಆದರೆ ದರ್ಶನ್ ಜೊತೆ ಬೈಕ್ ಹಿಂಬದಿ ಕುಳಿತು ಹೋಗುವ ಕಿಚ್ಚನ ಆದೆ ಹೆಚ್ಚು. ಇವತ್ತಿಗು ದರ್ಶನ್ ತನ್ನ ಹಿಂಬದಿಯ ಸೀಟ್‌ನಲ್ಲಿ ಯಾರಿಗು ಕುಳಿಸಿಕೊಂಡಿಲ್ಲ‌‌ ಅಲ್ಲಿ ಇದ್ದದ್ದು ಮಾತ್ರ ಕಿಚ್ಚ ಒನ್ಲಿ. ಅಷ್ಟರ ಮಟ್ಟಿಗೆ ಇವರಿಬ್ಬರ ಸ್ನೇಹ ಅದ್ಭುತವಾಗಿದ್ದು ಅನನ್ಯವಾಗಿದೆ.

ಅಂಬಿ ವಿಷ್ಣು ಹಂಗೆ, ದಚ್ಚು ಕಿಚ್ಚ!

ಹಿಂದೆ ನಮಗೆ ಸ್ಯಾಂಡಲ್‌ವುಡ್‌‌ ನಲ್ಲಿ ಅಂಬಿ ವಿಷ್ಣು ಹೇಗಿದ್ರೋ, ಈಗ ದಚ್ಚು ಮತ್ತು ಕಿಚ್ಚ ಇಬ್ಬರು ಕುಚುಕುಗಳು. ಈ ಖುಷಿಯಲ್ಲೇ ಈ ಹಿಂದೆ ಇಬ್ಬರು ಅಂಬಿಯ 60ನೇ ವರ್ಷದ ಸಂಭ್ರಮದಲ್ಲಿ ಇಬ್ಬರು ಕುಚುಕು ಕುಚುಕು ಹಾಡಿಗೆ ಡ್ಯಾನ್ಸ್ ಮಾಡಿ ಇಡೀ ಭಾರತೀಯ ಚಿತ್ರರಂಗವನ್ನ ಬೆರಗುಗೊಳಿಸಿದ್ದರು. ಆ ರೀತಿ ಇವರಿಬ್ಬರ ಸ್ನೇಹ ಸಾಗಿತ್ತು. ಅದ್ಯಾಕೋ ಏನೋ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಇವರಿಬ್ಬರು ಕೇವಲ ಒಂದೇ ಒಂದು ವಿಚಾರಕ್ಕೆ ದೂರವಾಗೋದ್ರು. ಕಿಚ್ಚನನ್ನ ಫಾಲೋ ಮಾಡ್ತಿದ್ದ ಸಾಮಾಜಿಕ ಜಾಲತಾಣದಿಂದ ದಚ್ಚು ಹಿಂದೆ ಸರಿದರು. ಮಾತುಗಳನ್ನು ಆಡದೆ, ಫೋನ್ ಕಾಲ್ ರಿಸೀವ್ ಮಾಡದೆ ಇಬ್ಬರು ಸುಮ್ಮನಾದರು. ಎಷ್ಟೋ ಬಾರಿ ಮಾಧ್ಯಮದಲ್ಲಿ ಕೇಳಿದ ವೇಳೆಯು ಸಹ ಈ ಬಗ್ಗೆ ಸರಿಯಾದ ಉತ್ತರ ಬರುತ್ತಿರಲಿಲ್ಲ. ಸ್ನೇಹಿತರಾಗಿದ್ದವರು ಪೈಪೋಟಿಗೆ ಬಿದ್ದು ಸಿನಿಮಾ ಮಾಡಲು ಶುರು ಮಾಡಿದ್ದರು. ಹೀಗೆ ಇಬ್ಬರ ಸ್ನೇಹ ದೂರವಾದರು ಆ ಪ್ರೀತಿ ಮಾತ್ರ ಹೃದಯದಲ್ಲೇ ಇತ್ತು.

ಇಬ್ಬರು ಒಂದಾಗೋ ಸಮಯ ಮತ್ತೇ ಬಂದಿದೆ!?

ಹೌದು ಜಗಳವಾಡಿ ದೂರವಾಗಿರೋ ಇವರಿಬ್ಬರನ್ನು ಒಂದು ಮಾಡುವ ಕಡೆಯ ಆಶಾಭಾವನೆಯೊಂದು ಚಿಗುರೊಡೆದಿದೆ. ಅದೇ ಜೀ ವಾಹಿನಿಯ ಅವಾರ್ಡ್ ಫಂಕ್ಷನ್ ಕಾರ್ಯಕ್ರಮದಲ್ಲಿ ಇಂತಹದೊಂದು ಸಾರ್ಥಕತೆಯ ಪ್ರಯತ್ನ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಅನುಶ್ರೀ ಮತ್ತು ವಿಜಯ ರಾಘವೇಂದ್ರ ಸುದೀಪ್‌ಗೆ ಪ್ರಶ್ನೆ ಕೇಳುತ್ತಾರೆ. ಡಿಸ್ಪ್ಲೇಯಲ್ಲಿ ಅಂಬಿ ಅವರ ಫೋಟೋ ಹಾಕಿ ರಿಯಾಕ್ಷನ್ ಕೇಳ್ತಾರೆ. ವಿಷ್ಣುವರ್ಧನ್ ಅವರ ಫೋಟೋ ಹಾಕಿ ರಿಯಾಕ್ಷನ್ ಕೇಳ್ತಾರೆ. ಕೊನೆಯಲ್ಲಿ ದರ್ಶನ್ ಹಾಗೂ ಸುದೀಪ ಇವರು ಫೋಟೋ ಹಾಕಿ ರಿಯಾಕ್ಷನ್ ಕೇಳ್ತಾರೆ. ಈ ವೇಳೆ ಅದನ್ನ ಕಂಡ ಸುದೀಪ್ ಒಂದು ಕ್ಷಣ ಸುಮ್ಮನಾಗುತ್ತಾರೆ. ಏನು ಮಾತನಾಡಿದೆ ಭಾವನಾತ್ಮಕವಾಗಿ ನಂತರ ಮಾತು ಶುರು ಮಾಡುತ್ತಾರೆ. ದರ್ಶನ್ ನನಗೆ ಫ್ರೆಂಡ್, ನನ್ನ ಜೀವನದ ಗೆಳೆಯ. ಯಾವುದೋ ಒಂದು ಕಾರಣಕ್ಕೆ ಮಾತಾಡಿಲ್ಲ ಅಂತ. ನಾನು ಅವನನ್ನ ಎಂದು ದ್ವೇಷದ ಮಾಡಿಲ್ಲ, ಮಾಡೋದು ಇಲ್ಲ. ದೇವರಲ್ಲಿ ಎಂದಿಗು ನಾನು ಅವನು ಚೆನ್ನಾಗಿರಬೇಕೆಂದು ಬಯಸುತ್ತೇನೆ ಎಂದರು. ಇದು ನೆರೆದಿದ್ದ ಎಲ್ಲ ಜನರಿಗು, ನಟರಿಗು ಕಲಾವಿದರಿಗು ಅಚ್ಚರಿ ತಂದಿತ್ತು. ಮಾತ್ರವಲ್ಲ ಎಲ್ಲರು ಮತ್ತೇ ಈ ಸ್ನೇಹ ಒಂದಾಗಬೇಕೆಂದು ಪ್ರಾರ್ಥಿಸಿಕೊಂಡಿದ್ದಾರೆ.

ಸದ್ಯ ದಚ್ಚು ಮತ್ತು ಕಿಚ್ಚ ಮತ್ತೇ ಒಂದಾಗಲಿ, ಸ್ಯಾಂಡಲ್‌ವುಡ್‌‌ ದೇಶದಲ್ಲಿ ಕೀರ್ತಿ ಪತಾಕೆ ಹಾರಿಸಲಿ.

ಈ ಇಬ್ಬರ ಸ್ನೇಹ ಚಿರಕಾಲ ಉಳಿಯಲಿ ಎಂಬುದು ಕೂಡ ನಮ್ಮ ಅತಿ ಆಸೆಯಷ್ಟೇ.

ನನ್ನೂರು ಮೈಸೂರು ಟೀಂ…

About Author

Leave a Reply

Your email address will not be published. Required fields are marked *