ತರಗತಿಗೆ ಚಕ್ಕರ್, ಪಾರ್ಕ್’ಗೆ ಹಾಜರ್: ಮೈಸೂರಿನಲ್ಲಿ ಮುಂದುವರಿದ ಪ್ರಿನ್ಸಿಪಾಲ್’ರ ಕಾರ್ಯಾಚರಣೆ
1 min read
ಮೈಸೂರು: ಮೈಸೂರಿನಲ್ಲಿ ಪ್ರಿನ್ಸಿಪಾಲ್ ರ ಕಾರ್ಯಾಚರಣೆ ಮುಂದುವರಿದಿದೆ. ಪಾರ್ಕ್ ನಲ್ಲಿ ಸುತ್ತುವ ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲ್ ಶಾಕ್ ನೀಡಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳಿಗೆ ಗೈರಾಗುತ್ತಿದ್ದರು. ತರಗತಿಗೆ ವಿದ್ಯಾರ್ಥಿಗಳನ್ನ ಕರೆದೊಯ್ಯಲು ಪ್ರಿನ್ಸಿಪಾಲ್, ಉಪನ್ಯಾಸಕರು ಹರಸಾಹಸ ಪಡುತ್ತಿದ್ದಾರೆ. ವಿದ್ಯಾರ್ಥಿಗಳು ಗುಂಪು ಸೇರುವ ಕಡೆಗಳಿಗೆ ತೆರಳಿ ಬೈದು ಬುದ್ದಿ ಹೇಳಿ ತರಗತಿಗಳಿಗೆ ಕರೆದೊಯ್ಯುತ್ತಿದ್ದಾರೆ.
ಇನ್ನು ಪ್ರಿನ್ಸಿಪಾಲ್ ರನ್ನ ಕಂಡೊಡನೆ ವಿದ್ಯಾರ್ಥಿಗಳು ಬಿದ್ದು ಬಿದ್ದು ಓಡಿದ್ದಾರೆ. ತರಗತಿಯ ಮೊದಲ ಕ್ಲಾಸ್ ಗೆ ವಿದ್ಯಾರ್ಥಿಗಳು ಬಂಕ್ ಹಾಕುತ್ತಿದ್ದಾರೆ. ಪಾರ್ಕ್ ಹಾಗೂ ಓವಲ್ಸ್ ಗ್ರೌಂಡ್ ಗೆ ತೆರಳಿ ವಿದ್ಯಾರ್ಥಿಗಳನ್ನ ಅಟ್ಟಾಡಿಸಿಕೊಂಡು ಪ್ರಿನ್ಸಿಪಾಲ್ ಎಚ್ಚರಿಸಿದ್ದಾರೆ. ಉಪನ್ಯಾಸಕರು, ಪ್ರಿನ್ಸಿಪಾಲ್ ರನ್ನ ಕಂಡು ಹೆದರಿ ವಿದ್ಯಾರ್ಥಿಗಳು ಓಡಿದ್ದಾರೆ.