ಲಾರಿ ಡಿಕ್ಕಿ ಜಿಂಕೆ ಸಾವು

1 min read

ಮೈಸೂರು,ಅ.13- ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಣ್ಣು ಜಿಂಕೆಯೊಂದು ಮೃತ್ನಪಟ್ಟಿರುವ ಘಟನೆ ನಡೆದಿದೆ.

ನಿನ್ನೆ ಬೆಳಿಗ್ಗೆ 8.45 ಸುಮಾರಿಗೆ ಅರಬ್ಬಿತಿಟ್ಟು ವನ್ಯಧಾಮದ ಗಡಿಯಲ್ಲಿ ಹಾದು ಹೋಗುವ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರ ರಂಗಯ್ಯನಕೊಪ್ಪಲು ಗೇಟ್ ಬಳಿ ಲಾರಿಯೊಂದು 3 ವರ್ಷದ ಹೆಣ್ಣು ಜಿಂಕೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಜಿಂಕೆ ಮೃತಪಟ್ಟಿದೆ.

ಜಿಂಕೆ ಸಾವಿಗೆ ಕಾರಣನಾಗಿ ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ ಗಣೇಶ್ ಎಸ್. ಸುವರ್ಣ ಬಿನ್ ಶಂಭುಬಂಗೇರ (42) ನನ್ನು ಬಂಧಿಸಲಾಗಿದೆ. ಜೊತೆಗೆ ಲಾರಿ (ಕೆಎ-19-ಎಸಿ-0943) ವಶಪಡಿಸಿಕೊಳ್ಳಲಾಗಿದೆ.

ಕಾರ್ಯಚರಣೆಯನ್ನು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ.ವಿ.ಕರಿಕಾಳನ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕೆ.ಸುರೇಂದ್ರ, ಉಪ ವಲಯ ಅರಣ್ಯಾಧಿಕಾರಿಗಳಾದ ಎಸ್.ಎಸ್.ರಾಘವೇಂದ್ರ, ಲಕ್ಷ್ಮಿದೇವಿ, ಅರಣ್ಯ ರಕ್ಷಕರಾದ ಜೆ.ರೋಹಿತ್,  ಎಸ್.ವಿ.ರಾಜೇಶನಾಯಕ, ವಿರೇಶ್ ಅಂಗಡಿ ಅವರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *