ಮಾದಪ್ಪನ ದರ್ಶನಕ್ಕೆ ಷರತ್ತು ಬದ್ಧ ಅನುಮತಿ!

1 min read

ರಾಜ್ಯ ಸರ್ಕಾರವು ವಾರಾಂತ್ಯದ ಕರ್ಫ್ಯೂ ರದ್ದುಪಡಿಸಿದೆ. ಈ ಹಿನ್ನಲೆಯಲ್ಲಿ ಪ್ರತಿದಿನ‌ ರಾತ್ರಿ ಕರ್ಫ್ಯೂ ಮಾತ್ರ ಇರುವುದರಿಂದ, ಈ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಸರ್ಕಾರದ ಆದೇಶದವರೆಗೆ ಪ್ರಾಧಿಕಾರದ ಶ್ರೀ ಮಲೈ ಮಹದೇಶ್ವರ ದೇವಾಲಯವು ಶನಿವಾರ ಮತ್ತು ಭಾನುವಾರಗಳೂ ಸೇರಿದಂತೆ ವಾರದ ಎಲ್ಲಾ ದಿನಗಳಂದು ಬೆಳಿಗ್ಗೆ 5 ರಿಂದ ರಾತ್ರಿ 10ರವರೆಗೆ ಭಕ್ತಾದಿಗಳ ದರ್ಶನಕ್ಕೆ ತೆರೆದಿರುತ್ತದೆ.

ಯಾವುದೇ ಉತ್ಸವಗಳು ಇರುವುದಿಲ್ಲ. ಸೇವೆಗಳು ಇರುವುದಿಲ್ಲ. ದಾಸೋಹದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ತಿಂಡಿ ಪ್ರಸಾದ ನೀಡಲಾಗುತ್ತದೆ. ದೇವಾಲಯದ ಗರ್ಭಗುಡಿಯ ಮುಂಭಾಗ ಒಂದು ಬಾರಿಗೆ 50 ಜನರಿಗೆ ಮಾತ್ರ ಪ್ರವೇಶ.

ಉಳಿದಂತೆ ಭಕ್ತಾದಿಗಳಿಗೆ ರಂಗಮಂದಿರದಲ್ಲಿ ಕ್ಯೂ ಹಾಗೂ ಕುಳಿತುಕೊಳ್ಳಯವ ವ್ಯವಸ್ಥೆ ಮಾಡಲಾಗಿದೆ. ಲಾಡು ಪ್ರಸಾದ ವ್ಯವಸ್ಥೆ ನಿಯಮಾನುಸಾರ ಇದೆ. ಭಕ್ತಾದಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್‌ ಬಳಸಿ ದೇವಾಲಯದೊಳಗೆ ಪ್ರವೇಶಿಸಲು ಕೋರಿದೆ. ಕೋವಿಡ್ ಲಕ್ಷಣಗಳಿದ್ದಲ್ಲಿ ಪ್ರವೇಶ ನೀಡಲಾಗುವುದಿಲ್ಲ. ಭಕ್ತಾದಿಗಳು ಸಹಕರಿಸಲು ಕೋರಲಾಗಿದೆ.

About Author

Leave a Reply

Your email address will not be published. Required fields are marked *