ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್​ ಕಳ್ಳತನ:ಸಬ್​​ ಇನ್ಸ್​​​ಪೆಕ್ಟರ್​ ಅಮಾನತು

1 min read

ತಿರುವನಂತಪುರಂ(ಕೇರಳ),ಅ.10-ರೈಲು ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯೋರ್ವನ ಮೊಬೈಲ್​ ಕಳ್ಳತನ ಮಾಡಿ, ಅದರ ಬಳಕೆ ಮಾಡ್ತಿದ್ದ ಸಬ್​​ ಇನ್ಸ್​ಪೆಕ್ಟರ್​ ನನ್ನು ಅಮಾನತುಗೊಳಿಸಲಾಗಿದೆ.
ಚತನ್ನೂರು ಸಬ್​ ಇನ್ಸ್​​ಪೆಕ್ಟರ್​​ ಜ್ಯೋತಿ ಸುಧಾಕರ್​ ಅವರನ್ನು ಅಮಾನತುಗೊಳಿಸಲಾಗಿದೆ.
ಇತ್ತೀಚೆಗೆ ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್​ ಫೋನ್​ ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು, ವಿಚಾರಣೆ ಬಳಿಕ
ಜ್ಯೋತಿ ಸುಧಾಕರ್​ ಅವರನ್ನು ಅಮಾನತುಗೊಳಿಸಲಾಗಿದೆ. ಮಂಗಳಾಪುರಂ ಪೊಲೀಸ್​ ಠಾಣೆಯಲ್ಲಿ ಸಬ್​​ಇನ್ಸ್​​ಪೆಕ್ಟರ್​​​ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಮೊಬೈಲ್​​ ಫೋನ್ ಪಡೆದುಕೊಂಡಿದ್ದರು. ಅಪಘಾತಕ್ಕೀಡಾಗಿ ಸಾವನ್ನಪ್ಪಿದ ವ್ಯಕ್ತಿಯ ಸಂಬಂಧಿಕರು ಮೊಬೈಲ್​ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಸೈಬರ್​ ಕ್ರೈಂ ವಿಭಾಗ ಐಎಂಇಐ ಸಂಖ್ಯೆಯೊಂದಿಗೆ ತನಿಖೆ ನಡೆಸಿತ್ತು. ಈ ವೇಳೆ, ಸಬ್​ ಇನ್ಸ್​​ಪೆಕ್ಟರ್​​ ಜ್ಯೋತಿ ಸುಧಾಕರ್ ಈ ಫೋನ್​​ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ದುಬಾರಿ ಬೆಲೆಯ ಫೋನ್​ ಇದಾಗಿದ್ದ ಕಾರಣ ಸಬ್​ ಇನ್ಸ್​​ಪೆಕ್ಟರ್ ಬಳಕೆ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.
ಜೂನ್​​ 18ರಂದು ಕನಿಯಪುರಂ ರೈಲ್ವೆ ನಿಲ್ದಾಣದ ಬಳಿ ರೈಲಿಗೆ ಸಿಲುಕಿದ್ದ ವ್ಯಕ್ತಿ ಅರುಣ್​​ ಕುಮಾರ್​​​ ಸಾವನ್ನಪ್ಪಿದ್ದನು. ಈ ವೇಳೆ, ಅವರ ಮೊಬೈಲ್​​ನ ಜ್ಯೋತಿ ಕುಮಾರ್​ ಕಳ್ಳತನ ಮಾಡಿದ್ದರು ಎನ್ನಲಾಗಿದೆ. ಇದೀಗ ತನಿಖಾ ತಂಡದ ವರದಿ ಆಧಾರದ ಮೇಲೆ ಎಸ್​ಐ ಅಮಾನತುಗೊಳಿಸಿ ಆದೇಶಿಸಲಾಗಿದೆ.

About Author

Leave a Reply

Your email address will not be published. Required fields are marked *