ಮೈಸೂರು ಮತ್ತು ಹಾಸನ ಮಾರ್ಗವಾಗಿ ಸಂಚರಿಸುವ ಮಾರ್ಗ ಬದಲಾವಣೆ!
1 min read
ಮೈಸೂರು ಮತ್ತು ಹಾಸನ ಮಾರ್ಗವಾಗಿ ಸಂಚಾರ ಮಾಡುವವರಿಗೆ ಬದಲಿ ಮಾರ್ಗ ಕಲ್ಪಿಸಲಾಗಿದೆ. ಕೆ.ಆರ್. ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅರಕೆರೆ ಗ್ರಾಮದಲ್ಲಿ ಕಾಲುವೆಯ ಸೇತುವೆ ಕುಸಿದಿರುವುದರಿಂದ ಈ ಕ್ರಮ ಕೈಗೊಂಡು ಕೆಳಕಂಡಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.

–ಮೈಸೂರಿಗೆ ಹೋಗುವ ವಾಹನಗಳು ಕೆ.ಆರ್. ನಗರದಿಂದ ಡೋರ್ನಹಳ್ಳಿ ಲಾಳಂ ದೇವನಹಳ್ಳಿ ಮಾರ್ಗವಾಗಿ ಮೈಸೂರಿಗೆ ತೆರಳಬಹುದು.
–ಮೈಸೂರಿಂದ ಬರುವ ವಾಹನಗಳು ಕಡ್ಡಾಯವಾಗಿ ದೊಡ್ಡೆ ಕೊಪ್ಪಲು ಡಿಸಿಬಿ ಕನ್ವೆನ್ಷನ್ ಹಾಲ್ ಹತ್ತಿರ ಎಡಕ್ಕೆ ತಿರುಗಿ ಮುಳ್ಳೂರು ಮಾರ್ಗವಾಗಿ ಕೆ.ಆರ್. ನಗರಕ್ಕೆ ಬರುವುದು ಎಂದು ತಿಳಿಸಲಾಗಿದೆ.