ಪ್ರಯಾಣಿಕರಿಲ್ಲದೆ ಆಟೋ ಚಾಲಕರು ಹೈರಾಣು, ವ್ಯಾಪಾರಸ್ಥರು ಕಂಗಾಲು!
1 min read
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು ಅದರಂತೆ ಮೈಸೂರಿನಲ್ಲು ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಆದರೆ ಈ ವೀಕೆಂಡ್ ಕರ್ಫ್ಯೂ ಬಗ್ಗೆ ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ಆಟೋ ಚಾಲಕರು, ಬೇಸರ ಹೊರಹಾಕಿದ್ದಾರೆ. ಇಂದು ಬೆಳಗಿನಿಂದಲೇ ಆಟೋ ಚಾಲಕರು ಫೀಲ್ಡ್ಗೆ ಇಳಿದಿದ್ದು ಪ್ರಯಾಣಿಕರಿಲ್ಲದೆ ಆಟೋ ಸ್ಟ್ಯಾಂಡ್ಗಳಲ್ಲೇ ಸುಮ್ಮನ್ನೆ ಆಟೋ ನಿಲ್ಲಿಸಿಕೊಂಡಿರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹಬ್ಬವು ಇಲ್ಲದೆ, ಪ್ರಯಾಣಿಕರು ಬಾರದೆ ಸರ್ಕಾರ ಹಾಗೂ ಪ್ರಸ್ತುತ ಸ್ಥಿತಿಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಇತ್ತ ವ್ಯಾಪಾರಸ್ಥರು ಕೂಡ ಅರ್ದಂಬರ್ಧ ವ್ಯಾಪಾರದಿಂದ ಕಂಗೆಟ್ಟಿದ್ದಾರೆ. ಜನರೇ ಬಾರದಿದ್ರೆ ವ್ಯಾಪಾರ ಎಲ್ಲಿಂದ ನಡೆಯುತ್ತೆ ಸ್ವಾಮಿ ಎಂದು ನನ್ನೂರು ಮೈಸೂರು ಜೊತೆ ಮಾತನಾಡುತ್ತ ಬೇಸರ ಹೊರಹಾಕಿದ್ದಾರೆ. ಹಬ್ಬದ ವ್ಯಾಪಾರ ಮಾಡಿದ್ರೆ ನಾವು ಒಂದಷ್ಟು ಹಣ ನೋಡಿತ್ತೇವೆ. ಕಳೆದ ಮೂರು ವರ್ಷದಿಂದ ಕರೋನಾದಿಂದ ನಾವು ಸಾಕಷ್ಟು ನೊಂದಿದ್ದೇವೆ. ಸರ್ಕಾರ ನಮಗೆ ಮತ್ತಷ್ಟು ನೋವು ಕೊಡುವ ಕೆಲಸ ಮಾಡುತ್ತಿದೆ. ವೀಕೆಂಡ್ ಕರ್ಫ್ಯೂ ಇಲ್ಲದಿದ್ರೆ ನಮಗೆ ಉತ್ತಮವಾದ ವ್ಯಾಪಾರವಾದ್ರು ಆಗ್ತಿತ್ತು ಎಂದು ಆಕ್ರೋಶ ಹೊಹಾಕಿದ್ದಾರೆ.

ಮೈಸೂರಿನಲ್ಲಿ ಜನರ ಸಂಚಾರ ಕಡಿಮೆ!
ಮೈಸೂರಿನಲ್ಲಿ ಜನರ ಸಂಚಾರವು ಕಡಿಮೆ ಆಗಿದೆ. ಹಬ್ಬದ ಕಾರಣ ಹೊರಗೆ ಬಂದ್ರೆ ಫೈನ್ ಬೀಳುವ ಕಾರಣ ಮನೆಯಲ್ಲೇ ಇದ್ದು ಸಂಕ್ರಾಂತಿ ಪೂಜೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರಿಂದ ಜನರ ಓಡಾಟ, ವಾಹನ ಸಂಚಾರ ಕಡಿಮೆ ಇದೆ.