ಮತ್ತೇ ಮೂರನೇ ಪೀಠದ ಅಗತ್ಯವಿಲ್ಲ: ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಪಾದನೆ

1 min read

ಮೈಸೂರು,ಫೆ.4-ದೇಶಕ್ಕೆ ಒಬ್ಬರೇ ರಾಷ್ಟ್ರಪತಿ ಒಂದು ಸಮುದಾಯಕ್ಕೆ ಒಬ್ಬರೇ ಗುರು. ಮತ್ತೇ ಮೂರನೇ ಪೀಠ ಅಗತ್ಯವಿಲ್ಲ ಎಂದು ಕೂಡಲ ಸಂಗಮ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.


ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಷ್ಟ ಪಟ್ಟು 14 ವರ್ಷದಿಂದ ಸಮುದಾಯವನ್ನು ಒಗ್ಗೂಡಿಸಿದ್ದೇನೆ. ಮಳೆ ಬಿಸಿಲು ಗಾಳಿ ಎನ್ನದೆ ಇದನ್ನು ಕಟ್ಟಲಾಗಿದೆ. ಕೂಡಲಸಂಗಮ ಶ್ರೀಗಳ ಪ್ರಭಾವ ಹೆಚ್ಚಾಗುವ ಹೊಟ್ಟೆ ಕಿಚ್ಚಿಗಾಗಿ ಈ ರೀತಿ ಹುನ್ನಾರ ಮಾಡಿದ್ದಾರೆ. ಆದರೆ ಸದ್ಯದಲ್ಲೇ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಹೋರಾಟ ನಿಲ್ಲಲ್ಲ:
ಮೀಸಲಾತಿಯ ಸಂಪೂರ್ಣ ಲಾಭ ಯತ್ನಾಳ್, ಸಿ.ಸಿ.ಪಾಟೀಲ್, ಬೆಲ್ಲದ್ ಅವರಿಗೆ ಸಿಗುವ ಹೊಟ್ಟೆಕಿಚ್ಚಿನಿಂದ ಈ ರೀತಿ ಯತ್ನ ಮಾಡುತ್ತಿದ್ದಾರೆ. ಯಾರು ಏನೇ ಮಾಡಿದರು ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ. ಪಂಚಮಶಾಲಿ ಪೀಠವೇ ನಮ್ಮ ಪೀಠ ಅವರು ಬೇಕಾದರೆ ಮನೆಗೊಂದು ಊರಿಗೊಂದು ಮಾಡಿಕೊಳ್ಳಲಿ ಎಂದು ಹೇಳಿದರು.


ನಮಗೆ 2ಎ ಮೀಸಲಾತಿ ಕೊಡಿಸುವುದಷ್ಟೇ ನಮ್ಮ ಗುರಿ
ಈ ಹೋರಾಟವನ್ನು ತಡೆಯಲು ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ. ತಲೆ ಕೆಳಗೆ ಮಾಡಿದರು ಈ ಹೋರಾಟ ನಿಲ್ಲಲ್ಲ ಎಂದು ಸ್ಪಷ್ಟವಾಗಿ ನುಡಿದರು.


ಕೊಟ್ಟ ವಸ್ತುಗಳನ್ನು ವಾಪಸ್ಸು ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದನ್ನು ಹಿಂದಿರುಗಿಸುವ ವಿಚಾರಕ್ಕೆ ನಾನು ಈಗಲೂ ಬದ್ಧ. ನಾನು ನನಗೆ ಕೊಟ್ಟರು ಅಂತಾ ಎಲ್ಲೂ ಹೇಳಿಲ್ಲ. ನಾನು ಸ್ವಾಭಿಮಾನದಿಂದ ಬದುಕಿದ್ದೇನೆ ಅದಕ್ಕೆ ಧಕ್ಕೆಯಾಗಿದೆ. ನಾನು ಅವರನ್ನು ಕರೆಯುವುದಿಲ್ಲ. ಬೇಕಾದರೆ ಅವರೇ ಬಂದು ಮಾತನಾಡಲಿ ಎಂದರು.


ನಾನೇಕೆ ಅವರಿಗೆ ಕರೆ ಮಾಡಲಿ?:
ಗುರುಗಳ ಭೇಟಿ ಮಾಡಲು ಎಲ್ಲರಿಗೂ ಅವಕಾಶವಿದೆ. 24*7 ನನ್ನ ಮಠ ತೆರೆದಿದೆ. ನಾನೇಕೆ ಆಮಂತ್ರಣ ಕೊಡಲಿ ? ನಾವಿಬ್ಬರು ಗುರು ಶಿಷ್ಯರು ಅವರ ಮಠ ಅವರ ಗುರು ಅವರೇ ಭೇಟಿ ಮಾಡಲಿ ಎಂದು ಹೇಳಿದರು.

About Author

Leave a Reply

Your email address will not be published. Required fields are marked *