ಗಜಪಡೆಗೆ ಫಿರಂಗಿ ತಾಲೀಮು ಮುಂದೂಡಿಕೆ!
1 min read
ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ಇಂದಿನಿಂದ ಪ್ರಾರಂಭವಾಗಬೇಕಿದ್ದ ದಸರಾ ಫಿರಂಗಿ ತಾಲೀಮು ಮುಂದೂಡಲಾಗಿದೆ. ಹೌದು, ರಾಜ್ಯದಲ್ಲಿ 5ದಿನಗಳ ಶೋಕಾಚಾರಣೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಇಂದು ನಡೆಯಬೇಕಿದ್ದ ಪಿರಂಗಿ ತಾಲೀಮು ಮುಂದೂಡಿ, 5 ದಿನಗಳ ಶೋಕಾಚಾರಣೆ ಬಳಿಕ ಪಿರಂಗಿ ತಾಲೀಮು ಪ್ರಾರಂಭ ಮಾಡುವುದಾಗಿ ಅರಣ್ಯ ಇಲಾಖೆ ತಿಳಿಸಿದೆ.

ಅಲ್ಲದೆ ಇದೆ ಸೆ.12ಕ್ಕೆ ಪೋಸ್ಟ್ ಪೊನ್ ಮಾಡಿದ್ದು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆ, ಅಶ್ವದಳಕ್ಕಾಗಿ ಈ ಫಿರಂಗಿ ತಾಲೀಮು ನಡೆಯಲಿದೆ. ನೆನ್ನೆ ಅರಮನೆ ಆವರಣ ಪ್ರವೇಶ ಮಾಡಿರುವ 2ನೇ ತಂಡದ 5ಆನೆಗಳಿಗು ತಾಲೀಮು ಇರಲಿದ್ದು, ಸದ್ಯ ಎರಡು ದಿನಗಳಿಂದ ಮರದ ಅಂಬಾರಿ ಹೊತ್ತು 9 ಅಡನೆಗಳು ತಾಲೀಮು ನಡೆಸುತ್ತಿವೆ. ಇತ್ತ ನಿನ್ನೆ ಸಚಿವ ಉಮೇಶ್ ಕತ್ತಿ ನಿಧನ ಪರಿಣಾಮ ನೆನ್ನೆ 2ನೇ ಹಂತದ ಆನೆಗಳಿಗೆ ಸರಳವಾಗಿ ಸ್ವಾಗತ ಕೋರಿದ್ದಾರೆ ಅಧಿಕಾರಿಗಳು.