ನವೀಕೃತ ಶಕ್ತಿ ಮೂಲಕ ವಿದ್ಯುತ್  ಉತ್ಪಾದನೆ‌ಯಾಗಬೇಕು: ಕೇಂದ್ರ‌ ಸಚಿವ ಭಗವಂತ ಖೂಬಾ

1 min read

ಮೈಸೂರು,ಅ.1-ಸೂರ್ಯ ಪಥ್ ಯೋಜನೆ, ಸೋಲಾರ್ , ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ ವಾಹನಗಳಿಗೆ ಕೇಂದ್ರ ಸಚಿವ ಭಗವಂತ ಖೂಬಾ ಚಾಲನೆ ನೀಡಿದರು.
ಕೆ.ಆರ್.ಕ್ಷೇತ್ರದ 5 ಸಾವಿರ ಮನೆಗೆಳಿಗೆ ಸೋಲಾರ್ ಪ್ಯಾನಲ್ ಮುಖಾಂತರ ಸೋಲಾರ್ ಬೆಳಕು ನೀಡುವ ಕಾರ್ಯಕ್ರಮ ಇದಾಗಿದೆ.
ನಗರದ ವಿದ್ಯಾರಣ್ಯಪುರಂನಲ್ಲಿ ನಡೆದ ಮೋದಿ ಯುಗ್ ಉತ್ಸವ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವೀಕೃತ ಶಕ್ತಿ ಮೂಲಕ ವಿದ್ಯುತ್  ಉತ್ಪಾದನೆ‌ ಮಾಡಬೇಕು. 174 ಮೆಗಾ ವ್ಯಾಟ್ ನವೀಕರಣ ವಿದ್ಯುತ್ ತಯಾರು ಮಾಡುವ ಗುರಿ ಇದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಒತ್ತು ಕೊಡುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ವಿದ್ಯುತ್ ಬೆಲೆ ಕಡಿಮೆ ಆಗುವ ಸಾಧ್ಯತೆ ಇದೆ. ವಿದ್ಯುತ್  ಅಗತ್ಯ ಮಟ್ಟದಲ್ಲಿ ಉತ್ಪಾದನೆ ಆಗುತ್ತಿದೆ. ಕಳೆದ ಏಳು ವರ್ಷಗಳಿಂದ   ನಮ್ಮ ಮನೆ ಹಾಗೂ ಹೊಲಗಳಲ್ಲಿ ವಿದ್ಯುತ್ ಕಡಿತ ಇಲ್ಲ ಎಂಬ ಭಾವನ ಜನರಿಗೆ ಬಂದಿದೆ. ಕೇಂದ್ರ ಸರ್ಕಾರ, ಪ್ರಧಾನಿ‌ ಮೋದಿ ದೊಡ್ಡ ದೊಡ್ಡ ಯೋಜನೆ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಕಸ ಎಸ್.ಎ.ರಾಮದಾಸ್ ಪಾಲ್ಗೊಂಡಿದ್ದರು.

About Author

Leave a Reply

Your email address will not be published. Required fields are marked *