ನೆನ್ನೆ ರಾತ್ರಿಯಿಂದ ಎಡೆಬಿಡದೇ ಸುರಿದ ಜಿಟಿ-ಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತ
1 min read
ಹುಣಸೂರು: ನೆನ್ನೆ ರಾತ್ರಿಯಿಂದ ಇಂದು ಮುಂಜಾನೆಯ ವರೆವಿಗೂ ಎಡೆಬಿಡದೇ ಸುರಿದ ಜಿಟಿ-ಜಿಟಿ ಮಳೆಯಿಂದಾಗಿ ಹುಣಸೂರಿನ ಮಂಜುನಾಥ ಬಡಾವಣೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹುಣಸೂರಿನ ಮಂಜುನಾಥ ಬಡಾವಣೆಯಲ್ಲಿ ಮಳೆಯ ನೀರು ಕೆರೆ ಅಂತೆ ನಿಂತಿದ್ದು ಕೆಲವು ಮನೆಯವರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಂದು ಮನೆಯಿಂದ ಹೊರತಂದಿದೆ. ಲಕ್ಷಾಂತರ ಸಾಮಾನು ಸರಂಜಾಮುಗಳು ನಷ್ಟವಾಗಿದೆ. ಹನಗೋಡು ಹುಣಸೂರು ಮುಖ್ಯ ರಸ್ತೆ ಹೊನ್ನೆನಹಳ್ಳಿ ಹತ್ತಿರ ಹೈರಿಗೆ ಕೆರೆ ಕೋಡಿ ಬಿದ್ದು ರಸ್ತೆ ಬಂದ್ ಮಾಡಲಾಗಿತ್ತು ಹಾಗೂ ಹೊಸದಾಗಿ ರಸ್ತೆ ಮಾಡಿರುವ ಹನಗೋಡಿನಿಂದ ಈರತ್ತಯ್ಯನಕೊಪ್ಪಲು ಮೂಲಕ ವೀರನ ಹೊಸಹಳ್ಳಿಗೆ ಸಂಪರ್ಕ್ ರಸ್ತೆ ಮಳೆಯ ರಭಸಕ್ಕೆ ಕೊಚ್ಚಿಹೋಗಿದೆ.

ಲಕ್ಷ್ಮಣತೀರ್ಥ ನದಿಯು ತುಂಬಿ ಧುಮ್ಮಿಕ್ಕುವ ಜಲಪಾತ ನೋಡಲು ಜನರು ಸಾಲುಗಟ್ಟಿ ಮಳೆಯನ್ನು ಲೆಕ್ಕಿಸದೆ ಬರುತ್ತಿದ್ದರು ಈ ಭಾಗದ ರೈತರಲ್ಲಿ ಆತಂಕ ಸೃಷ್ಟಿ ಮಾಡಿದ ಮಳೆ ಈ ಬಾರಿ ಮುಂಗಾರು ಬೇಗ ಪ್ರವೇಶ ಆಗಿದ್ದರಿಂದ ರೈತರು ಶುಂಠಿ ಹತ್ತಿ ಮುಸುಕಿನ ಜೋಳ ಬಿತ್ತನೆ ಜೋರಾಗಿ ನಡೆದಿತ್ತು ಆದರೆ ಈ ಮಳೆಯಿಂದ ಬೆಳೆಯೆಲ್ಲಾ ಮಳೆ ಕೊಚ್ಚಿಕೊಂಡು ಹೋಗಿದೆ ಏನು ಮಾಡಬೇಕು ಎಂದು ದೋಚುತ್ತಿಲ್ಲ ಸರ್ಕಾರ ಕೊಡುವ ಪರಿಪಾಠ ಬಿತ್ತನೆ ಬೀಜಕ್ಕೆ ಸಮಾನಾಗುವುದಿಲ್ಲ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.

ದ್ವಿಚಕ್ರ ವಾಹನ ಸವಾರರ ಸಂಚಾರವೂ ರಸ್ತೆಗಳಲ್ಲಿ ವಿರಳವಾಗಿತ್ತು. ಇಂದಿನಿಂದ 5 ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡದೆ ಈ ಸುತ್ತಮುತ್ತಲಿನ ಕೆರೆಗಳ ಕೋಡಿಗಳು ಬಿದ್ದಿದ್ದೂ ಮೀನು ಸಾಕಣೆದಾರರು ಸಾಕಿದ ಮೀನುಗಳು ದೊಡ್ಡಹೇಜ್ಜೂರು ಕೆರೆ ಹನಗೋಡು ಕುಂಠೇರಿಕೆರೆ ಚನ್ನಯ್ಯನಕೆರೆ ಹೈರಿಗೆ ಕೆರೆಗಳ ಸುತ್ತಮುತ್ತಲಿನ ಗ್ರಾಮಗಳ ಜನ ಹೊರಬಂದ ಮೀನುಗಳನ್ನು ಕೂಳಿಗಳಲ್ಲಿ ಹಿಡಿಯುತ್ತಿರುವ ದೃಶ್ಯ ಅಲ್ಲಲ್ಲಿ ಕಂಡುಬರುತ್ತಿತ್ತು.
