ಮೈ.ವಿ.ರವಿಶಂಕರ್ ಪರ ರಾಮದಾಸ್ ಭರ್ಜರಿ ಪ್ರಚಾರ!

1 min read

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ನಿಮಿತ್ತ
ಕೃಷ್ಣರಾಜ ಕ್ಷೇತ್ರದಲ್ಲಿ ನಾಲ್ಕು ದಿನದ ಮತಯಾಚನೆ ಕಾರ್ಯಕ್ರಮವು ಶಾಸಕರಾದ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು ಮೊದಲನೇ ದಿನವಾದ ಇಂದು ವಾರ್ಡ್ ನಂ 57,59, 47,57 ರಲ್ಲಿ ಮತಯಾಚನೆಯನ್ನು ಮಾಡಲಾಯಿತು.

ಸರಸ್ವತಿ ಸಮ್ಮಾನ್ ಪುರಸ್ಕೃತ ಶ್ರೀ ಎಸ್.ಎಲ್.ಭೈರಪ್ಪ ಅವರ ಮನೆಗೆ ಶಾಸಕರಾದ ಎಸ್.ಎ.ರಾಮದಾಸ್ ಅವರು ಹಾಗೂ ಮೈ.ವಿ.ರವಿಶಂಕರ್ ಅವರು ತೆರಳಿ ಮತಯಾಚನೆ ಮಾಡಿದರು.

ಗೌರಿಶಂಕರ ಫಂಕ್ಷನ್ ಹಾಲ್ ನಲ್ಲಿ ಪ್ರಮುಖರ ಸಭೆ ನಡೆಯಿತು, ಸಭೆಯಲ್ಲಿ ಶಾಸಕರಾದ ಎಸ್.ಎ.ರಾಮದಾಸ್ ಅವರು ಮಾತನಾಡಿ ನಾವು ಈಗಾಗಲೇ ನಮಗೆ ತಿಳಿದಿದೆ ಜೂನ್ 13 ರಂದು ಚುನಾವಣೆ ಇದೆ, ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಒಬ್ಬಬ್ಬರನ್ನು ಗುರುತಿಸಿ ಅವರಿಗೆ 2 ಮತಗಳ ಜವಾಬ್ದಾರಿಯನ್ನು ನೀಡಿದ್ದೇವೆ, ಕಳೆದ ಬಾರಿ 47% ಆಗಿತ್ತು ಆದರೆ ಇನ್ನೊಂದು ಸ್ವಲ್ಪ ಮತದಾನ ಆಗಿದ್ದರೆ ಮೈ.ವಿ.ರವಿಶಂಕರ್ ಅವರು ಗೆದ್ದು ಬಿಡುತ್ತಿದ್ದರು. ಚುನಾವಣೆ ಮುಗಿಯುವವರೆಗೂ ಕೂಡಾ ನಾವು ನಮಗೆ ಕೊಟ್ಟಿರುವ ಮನೆಗಳಿಗೆ ತೆರಳಬೇಕು ಪದೇ ಪದೇ ನಮ್ಮ ಪಕ್ಷದ ಬಗ್ಗೆ ಹಾಗೂ ಅಭ್ಯರ್ಥಿಯ ಬಗ್ಗೆ ಮತದಾರರಲ್ಲಿ ಮತ ಹಾಕುವಂತೆ ಮನವಿ ಮಾಡಬೇಕು. ಯಾವ ವಿಶ್ವಾಸವನ್ನು ಮೈ.ವಿ.ರವಿಶಂಕರ್ ಅವರು ಇಟ್ಟಿದ್ದಾರೋ ಆ ವಿಶ್ವಾಸವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಿದೆ. ಕಳೆದ ಬಾರಿ ಸಣ್ಣ ಅಂತರದಲ್ಲಿ ನಾವು ಗೆಲ್ಲಲು ಸಾಧ್ಯವಾಗಲಿಲ್ಲ ಆ ತಪ್ಪು ಈ ಸಲ ಆಗಬಾರದು. ನಾವು ಕೆ.ಆರ್.ಕ್ಷೇತ್ರದಲ್ಲಿ ಪೇಜ್ ಪ್ರಮುಖರನ್ನು ಆಯ್ಕೆ ಮಾಡಿದ್ದೇವೆ ಅವರ ಮೂಲಕ ನಾವು ಈ ಚುನಾವಣೆಯಲ್ಲಿ ಕೆ.ಆರ್.ಕ್ಷೇತ್ರದಲ್ಲಿ ಅತೀ ಹೆಚ್ಚು ಮತವನ್ನು ರವಿಶಂಕರ್ ಅವರಿಗೆ ಕೊಡಿಸೋಣ ಎಂದರು.

ದಕ್ಷಿಣ ಪದವೀಧರ ಕ್ಷೇತ್ರದ ಭಾಜಪಾ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರು ಮಾತನಾಡಿ ನಾನು ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದು ಪಕ್ಷ ನನಗೆ ಎರಡು ಬಾರಿ ಟಿಕೆಟ್ ನೀಡಿದೆ. ದೇವದುರ್ಲಭ ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಬಿಜೆಪಿ, ಅದು ನಮ್ಮ ಪುಣ್ಯ, ನಾನೂ ಕೂಡಾ ಕೆ.ಆರ್.ಕ್ಷೇತ್ರದವನೆ ಕಾರ್ಯಕರ್ತರುಗಳು ಮುಂಚೂಣಿಯಲ್ಲಿ ಕೆಲಸ ನಿರ್ವಹಿಸಿ ಗೆಲ್ಲಿಸಲು ಸಹಕರಿಸಬೇಕಾಗಿ ಕೋರುತ್ತೇನೆ ಎಂದರು.

ವಾರ್ಡ್ ನಂ. 57,59, 47,57 ರ ವ್ಯಾಪ್ತಿಗೆ ಬರುವ ಗೋಕುಲ್ ಸ್ಕೊಲ್ , ಕೆಪಿಯು ಕಾಲೇಜ್ , ಜ್ಯೋತಿ ಸ್ಕೂಲ್ , ಕುವೆಂಪು ಶಾಲೆ, ಬಾಸುದೇವ ಸೋಮಾನಿ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು, ಕುವೆಂಪು ಶಾಲೆ, ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳನ್ನು , ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್ ಗಳಿಗೆ ತೆರಳಿ ಮತಯಾಚನೆಯನ್ನು ಮಾಡಿದರು.

ಸದರಿ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರದ ಮೇಯರ್ ಶ್ರೀಮತಿ ಸುನಂದಾ ಪಾಲನೇತ್ರ, ರಾಜ್ಯ ಬಿಜೆಪಿ ಪ್ರಧಾನಕಾರ್ಯದರ್ಶಿ ಸಿದ್ದರಾಜು, ಮೈಸೂರು ನಗರ ಪ್ರಭಾರಿ ಹೀರೇಂದ್ರ ಶಾ, ಕೆ.ಆರ್.ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನಕಾರ್ಯದರ್ಶಿಗಳಾದ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್, ಮೈಸೂರು ಮಹಾನಗರದ ಪ್ರಧಾನಕಾರ್ಯದರ್ಶಿ ವಾಣೀಶ್, ನಗರಪಾಲಿಕಾ ಸದಸ್ಯರಾದ ಶಿವಕುಮಾರ್,
ದಕ್ಷಿಣ ಪದವೀಧರ ಕೆ.ಆರ್.ಕ್ಷೇತ್ರದ ಚುನಾವಣಾ ಸಂಚಾಲಕರಾದ ರವಿ ಹಾಗೂ ಸಹ ಸಂಚಾಲಕರಾದ ನಾಗಶಂಕರ್, ಬಿ ಎಲ್ ಎ 2 1 ಪ್ರಸಾದ್ ಬಾಬು, ಕೆ.ಆರ್.ಕ್ಷೇತ್ರದ ಆಶ್ರಯ ಸಮಿತಿಯ ಸದಸ್ಯರಾದ ಹೇಮಂತ್ ಕುಮಾರ್, ಪ್ರಮುಖರಾದ ಜಗದೀಶ್ ,ಅನ್ನಪೂರ್ಣ, ರವಿ, ಸಂತೋಷ್ ಸೇರಿದಂತೆ ಇನ್ನಿತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *