ಯೂಟ್ಯೂಬರ್ಸ್​ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಸಮಂತಾಗೆ ಬಿಗ್​ ಶಾಕ್​!

1 min read

ಹೈದರಾಬಾದ್​: ಅಕ್ಟೋಬರ್​ 2ರಂದು ಸಮಂತಾ-ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್​ ಘೋಷಣೆ ಮಾಡಿದ ಬೆನ್ನಲ್ಲೇ ಅನೇಕ ವದಂತಿಗಳು ಹರಿದಾಡುತ್ತಿವೆ. ಎರಡು ಕುಟುಂಬಗಳ ಇತಿಹಾಸ ಕೆದಕ್ಕುತ್ತಿರುವುದಲ್ಲದೆ, ಡಿವೋರ್ಸ್​ ಹಿಂದಿನ ಕಾರಣಗಳನ್ನು ತಿಳಿಯಲು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಯತ್ನಿಸಲಾಗುತ್ತಿದೆ. ಅದರಲ್ಲೂ ಯೂಟ್ಯೂಬ್​​ನಲ್ಲಿ ಕೆಲ ಯೂಟ್ಯೂಬರ್ಸ್​ ತೀರಾ ವೈಯಕ್ತಿಕ ವಿಚಾರಗಳಿಗೆ ಊಹಾಪೋಹಗಳನ್ನು ಸೇರಿಸಿ ಹರಿಬಿಡುತ್ತಿರುವುದು ಸಮಂತಾ ಮನಸ್ಸನ್ನು ಕದಡಿದೆ.

ಹೀಗಾಗಿಯೇ ಸ್ಯಾಮ್​ ನ್ಯಾಯಾಲಯದ ಮೆಟ್ಟಿಲೇರಿದ್ದು, ಕುಕ್ಕಟಪಲ್ಲಿ ಕೋರ್ಟ್​ನಲ್ಲಿ ಮೂರು ಯೂಟ್ಯೂಬರ್ಸ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಸಮಂತಾರಿಗೆ ಅಕ್ರಮ ಸಂಬಂಧ ಇದೆ. ಅವರು ಗರ್ಭಪಾತ ಮಾಡಿಸಿಕೊಂಡಿದ್ದಾರೆ. ಸಮಂತಾರ ಈ ನಡೆ ನಾಗಚೈತನ್ಯ ಕುಟುಂಬದ ಇರುಸು-ಮುರುಸಿಗೆ ಕಾರಣವಾಗಿದ್ದು, ಡಿವೋರ್ಸ್​ನೊಂದಿಗೆ ಅಂತ್ಯವಾಗಿದೆ ಎಂದು ಸಿ.ಎಲ್​. ವೆಂಕಟರಾವ್ ಎಂಬುವರು ಯೂಟ್ಯೂಬ್​ನಲ್ಲಿ ವದಂತಿ ಹರಿಬಿಟ್ಟಿದ್ದಾರೆ ಎಂಬುದು ಸಮಂತಾರ ವಾದವಾಗಿದ್ದು, ವೆಂಕಟರಾವ್​ ಸೇರಿದಂತೆ ಸುಮನ್​ ಟಿವಿ, ತೆಲುಗು ಪಾಪ್ಯುಲರ್​ ಟಿವಿ ಹೆಸರಿನ ಯೂಟ್ಯೂಬ್​ ಚಾನೆಲ್​ಗಳ ವಿರುದ್ಧ ಸಮಂತಾ ಮಾನನಷ್ಟ ಮೊಕದ್ದಮ್ಮೆ ದಾಖಲಿಸಿದ್ದಾರೆ.

ತಮ್ಮ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ಬೇಗ ವಿಚಾರಣೆ ನಡೆಸಬೇಕೆಂದು ನಿನ್ನೆ ಸಮಂತಾ ಪರ ವಕೀಲರು ನ್ಯಾಯಾಲಯವನ್ನು ಕೋರಿಕೊಂಡರು. ಇದರಿಂದ ಕೋಪಗೊಂಡ ನ್ಯಾಯಾಧೀಶರು, ಇಲ್ಲಿ ಸಾಮಾನ್ಯ ಜನ ಮತ್ತು ಸೆಲೆಬ್ರಿಟಿಗಳು ಎಲ್ಲರು ಒಂದೆ. ನ್ಯಾಯಾಲಯದ ಅಂತಿಮ ಸಮಯದಲ್ಲಿ ನಿಮ್ಮ ಅರ್ಜಿ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

About Author

Leave a Reply

Your email address will not be published. Required fields are marked *