ವಿ.ಕೆ.ಎಸ್ ಫ಼ೌಂಡೇಶನ್ ನಿಂದ ‘ಸೇವ್ ಥಿಯೇಟರ್’ ಅಭಿಯಾನ

1 min read

ಮೈಸೂರು,ಸೆ.22-ಕೋವಿಡ್, ಲಾಕ್ ಡೌನ್ ಸಂಕಷ್ಟದಿಂದಾಗಿ ಚಿತ್ರಮಂದಿರಗಳು ಇತಿಹಾಸದ ಪುಟ್ಟ ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ವಿ.ಕೆ.ಎಸ್ ಫ಼ೌಂಡೇಶನ್  “ಸೇವ್ ಥಿಯೇಟರ್” ಅಭಿಯಾನವನ್ನು ಹಮ್ಮಿಕೊಂಡಿತ್ತು.
ನಿನ್ನೆಯಷ್ಟೇ ಮುಚ್ಚಿದ ನಗರದ ಸ್ವರಸ್ವತಿ ಚಿತ್ರಮಂದಿರದ ಮುಂಭಾಗ ಅಭಿಯಾನ ನಡೆಸಲಾಯಿತು.
ಸಂಸ್ಥೆಯ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಮಾತನಾಡಿ, ಕೋವಿಡ್ ಬಂದ ದಿನಗಳಿಂದ ಸಿನಿಮಾ ಥಿಯೇಟರ್ ಗಳು ಒಂದರ ಮೇಲೊಂದು ಮುಚ್ಚುತ್ತಾ ಬಂದಿರುವುದು ಬಹಳ ಬೇಸರದ ಸಂಗತಿ. ಲಕ್ಷ್ಮೀ, ಶಾಂತಲ ಹಾಗೂ ನಿನ್ನೆಯಷ್ಟೆ  ಸರಸ್ವತಿ ಚಿತ್ರಮಂದಿರ ಮುಚ್ಚಿಸುವುದು‌ ಸಿನಿಪ್ರಿಯರ ಮನಸ್ಸಿಗೆ ತೀವ್ರ ನೋವುಂಟಾಗಿದೆ. ಮುಂದಿನ ದಿನಗಳಲ್ಲಾದರೂ ಈ ಸಿನಿಮಾ ರಂಗಕ್ಕೆ ಸರ್ಕಾರ ತೆರಿಗೆ ವಿನಾಯಿತಿ ಹಾಗೂ ಇತರ ಸೌಲಭ್ಯಗಳನ್ನು ನೀಡಿ ಚಿತ್ರಮಂದಿರಗಳನ್ನು ರಕ್ಷಿಸಬೇಕೆಂದು ಮನವಿ ಮಾಡಿದರು.  
ಇಂತಹ ಚಿತ್ರಮಂದಿರಗಳೇ ಮೈಸೂರಿಗೆ ಹೆಮ್ಮೆಯ ಸಂಗತಿಯಾಗಿತ್ತು.  ಇಂತಹ ಹಳೆಯ ಚಿತ್ರಮಂದಿರಗಳು ಮುಚ್ಚಿದರೆ ಮುಂದಿನ ಪೀಳಿಗೆಗೆ ನಾವು ಕೇವಲ ಭಾವಚಿತ್ರ ತೋರಿಸಿ ಚಿತ್ರಮಂದಿರ ಹೀಗಿತ್ತು ಎನ್ನುವ ಪರಿಸ್ಥಿತಿ ಎದುರಾಗುತ್ತದೆ. ಚಿತ್ರಮಂದಿರಗಳನ್ನೇ ನಂಬಿ ಜೀವನ ನಡೆಸುತ್ತಿದ್ದ ಕಾರ್ಮಿಕ ವರ್ಗದ ಕಥೆಯನ್ನು ನೆನೆದರೆ ಮನಸ್ಸಿಗೆ ನೋವಾಗುತ್ತದೆ ಎಂದರು.
ಈ ಸಂದರ್ಭ ರಾಷ್ಟ್ರೀಯ ಹಿಂದೂ ಸಮಿತಿ ಪದಾಧಿಕಾರಿಗಳಾದ ತೇಜಸ್, ಗಗನ್, ವಿನಯ್, ವರುಣ್, ಚಂದನ್, ಪ್ರಜ್ವಲ್, ಮನೋಜ್, ಪ್ರದೀಪ್ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *