ಪುನೀತ್ ನೆಚ್ಚಿನ ಶಕ್ತಿಧಾಮದಲ್ಲಿ ಭರದಿಂದ ಸಾಗಿದೆ ಕೆಲಸ!
1 min read
ಎಲ್ಲರ ಅಚ್ಚುಮೆಚ್ಚಿನ ನಟ ಪುನೀತ್ ರಾಜ್ಕುಮಾರ್ ಪ್ರೀತಿಯ ಮೈಸೂರಿನ ಶಕ್ತಿಧಾಮದ ನಿರ್ವಹಣೆ ಮುನ್ನಡೆಸುವ ಜವಾಬ್ದಾರಿ ಇದೀಗ ಸಹೋದರ ಶಿವರಾಜ್ ಕುಮಾರ್ ಹೆಗಲ ಮೇಲಿದೆ. ಖುದ್ದು ಶಕ್ತಿಧಾಮದ ನಿರ್ವಹಣೆ ಮಾಡುವುದಾಗಿ ಶಿವರಾಜ್ ಕುಮಾರ್ ಹೇಳಿದ್ದರು ಸಹ ಸಾಕಷ್ಟು ನೆರವು ಬರುತ್ತಿದೆ. ಇತ್ತ ವಿಶಾಲ್ ಕೂಡ ನಾನೂ ಶಕ್ತಿಧಾಮದ ನಿರ್ವಹಣೆ ಮಾಡುವುದಾಗಿ ತಿಳಿಸಿದ್ದರು.
ಆದರೆ ಈಗ ಶಕ್ತಿಧಾಮದಲ್ಲಿ ನೂತನವಾಗಿ ಹೈಟೆಕ್ ಕಟ್ಟಡಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಇದಕ್ಕಾಗಿ ಇನ್ಫೋಸಿಸ್ ಸಂಸ್ಥೆ ಕೈ ಜೋಡಿಸಿದೆ.

ಮೈಸೂರಿನ ನಂಜನಗೂಡು ಮುಖ್ಯ ರಸ್ತೆಯ ಪಕ್ಕದಲ್ಲಿರುವ ಶಕ್ತಿಧಾಮದಲ್ಲಿ ಡಾ.ರಾಜ್ ಕುಮಾರ್ ಅವರ ಮ್ಯೂರಲ್ ಆರ್ಟ್ ವರ್ಕ್ ಸಂಬಂಧ ಮೈಸೂರಿನ ಪ್ರತಿಭಾವಂತ ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ ಜೊತೆ ನಟ ಶಿವರಾಜ್ ಕುಮಾರ್ ಇಂದು ಮೈಸೂರಿನಲ್ಲಿ ಚರ್ಚೆ ನಡೆಸಿದರು.
ಅಲ್ಲದೆ ಹೇಗೆ ಆ ಆರ್ಟ್ ಮೂಡಿಬರಬೇಕು, ಏನೆಲ್ಲ ಕೆಲಸ ಇದೆ ಎಂಬುದರ ಬಗ್ಗೆ ನಟ ಶಿವರಾಜ್ ಕುಮಾರ್ ಚರ್ಚೆ ನಡೆಸಿದ್ದಾರೆ. ಅಲ್ಲದೆ ಖುದ್ರು ಶಿವಣ್ಣ ಇದರ ನೇತೃತ್ವ ವಹಿಸಿದ್ದು ಸಂಪೂರ್ಣ ಜವಬ್ದಾರಿ ಹೊತ್ತಿದ್ದಾರೆ