ಕೈವಾರದಲ್ಲಿ ಚಿಕ್ಕವರ ಅಪರೂಪದ ಮದುವೆ!
1 min read
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅನ್ನೋ ಮಾತಿದೆ. ಅದರಂತೆ ಇಂದು ಕಲ್ಯಾಣನಗರಿ ಶ್ರೀ ಕ್ಷೇತ್ರ ಕೈವಾರದಲ್ಲಿ ಅಪರೂಪದ ಮದುವೆಯೊಂದು ನಡೆಯಿತು. ಇವರನ್ನ ನೋಡಿ ಇದು ಮಕ್ಕಳ ಮದುವೆ ಎಂದುಕೊಳ್ಳಬೇಡಿ. ಯಾಕಂದ್ರೆ ಇಲ್ಲಿ ಗಂಡಿಗೆ 28 ವರ್ಷ ಹೆಣ್ಣಿಗೆ 25 ವರ್ಷ. ನೋಡಲು ವಾಮನ ಮೂರ್ತಿಗಳಂತೆ ಚಿಕ್ಕದಾಗಿ ಕಾಣುತ್ತಾರೆ ಅಷ್ಟೇ.

ಮೂಲತಹ ಹಸೆಮಣೆ ಏರಿದ ಗಂಡು ವಿಷ್ಣು ಬೆಂಗಳೂರಿನವರು. ಹೆಣ್ಣು ಜ್ಯೋತಿ ಕೋಲಾರ ಮೂಲದವರು. ಇಬ್ಬರೂ ಪದವೀಧರರಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ವಿಶೇಷವಾಗಿ ಕಂಡ ಅಪರೂಪದ ಜೋಡಿ ಕ್ಷೇತ್ರಕ್ಕೆ ಬಂದ ಭಕ್ತಾದಿಗಳನ್ನು ಆಕರ್ಷಿಸಿದರು ಇವರ ದಾಂಪತ್ಯ ಜೀವನ ಅನ್ಯೋನ್ಯವಾಗಿ ಸಂತೋಷವಾಗಿರಲಿ ಎಂದು ಹಾರೈಸಿದರು.

ಸದ್ಗುರು ತಾತಯ್ಯನವರ ಸನ್ನಿಧಿಯಲ್ಲಿ ಮದುವೆಯಾದದ್ದು ನಮ್ಮ ಸೌಭಾಗ್ಯವೆಂದ ನೂತನ ವಧು-ವರರು. ಅರಿಶಿನ ಸೇವೆಯಲ್ಲಿ ಭಾಗವಹಿಸಿ ತಾತಯ್ಯನವರ ಆಶೀರ್ವಾದವನ್ನು ಪಡೆದರು.