ಅಂಬೇಡ್ಕರ್ ಅವರಿಗೆ ಅಪಮಾನಗೈದ ನ್ಯಾಯಧೀಶರ ವಿರುದ್ಧ ಕ್ರಮಕೈಗೊಳ್ಳಿ: ಆರ್.ಧ್ರುವನಾರಾಯಣ್
1 min read
ಮೈಸೂರು,ಜ.29- ಗ್ಯಾಸ್ ಪೈಪ್ ಲೈನ್ ಯೋಜನೆ ಅತ್ಯಂತ ಮಹತ್ವವಾದದ್ದು. ಇದರಿಂದ ಜನರಿಗೆ 400 ರೂ. ಉಳಿತಾಯವಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಕೆಗೆ ಬಿಜೆಪಿ ಶಾಸಕರ ವಿರೋಧ ವಿಚಾರವಾಗಿ ಮಾತನಾಡಿ, ಗ್ಯಾಸ್ ಪೈಪ್ ಲೈನ್ ಅತ್ಯಂತ ಮಹತ್ವದ್ದು, ಸಿಲಿಂಡರ್ ಬೆಲೆ 904 ರೂಪಾಯಿ ಇದೆ. ಗ್ಯಾಸ್ ಪೈಪ್ ಲೈನ್ ಬಂದರೆ ಅದು 500 ರೂ. ಗೆ ಸಿಗುತ್ತದೆ. ಜನಕ್ಕೆ 400 ರೂಪಾಯಿ ಉಳಿತಾಯವಾಗುತ್ತೆ ಎಂದು ಹೇಳಿದರು.
ಗ್ಯಾಸ್ ಸಿಲಿಂಡರ್ ಅನ್ನು ಮನೆಗೆ ಸಾಗಿಸಲು ಪ್ರತ್ಯೇಕ ಬೆಲೆ ಇರುತ್ತದೆ. ಸಿಲಿಂಡರ್ ಸ್ಪೋಟದ ಪ್ರಕರಣ ಗಳು ಹಾಗಾಗ ನಡೆಯುತ್ತಿರುತ್ತದೆ. ಇದನ್ನು ತಪ್ಪಿಸಲು ನೀರು ಮನೆ ಮನೆಗೆ ನಲ್ಲಿಯಲ್ಲಿ ಬಂದಂತೆ ಗ್ಯಾಸ್ ಕೂಡ ಮನೆಗೆ ಬರಬೇಕು. ಮೈಸೂರು ನಗರ ಅತಿ ವೇಗವಾಗಿ ಬೆಳೆಯುತ್ತಿದೆ. ಮನೆ ಮಂದಿಯೆಲ್ಲಾ ದುಡಿಯುವ ಪರಿಸ್ಥಿತಿ ಇದೆ. ಎರಡು ಸಿಲಿಂಡರ್ ಇದ್ದರೂ ಅದನ್ನು ಪಡೆಯಲು ಮನೆಯಲ್ಲೊಬ್ಬರು ಇರಲೇಬೇಕಿದೆ. ಇವೆಲ್ಲಾ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಮೂಲಕ ಅನಿಲ ಪೂರೈಕೆ ಚಿಂತನೆ ಆರಂಭವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆ ಇದಾಗಿದ್ದು, ಗುಜರಾತ್ ನಲ್ಲಿ ಇದನ್ನು ಮೊದಲು ಆರಂಭಿಸಿದ್ದರು. ಇದೀಗ ಮೈಸೂರು ಸೇರಿದಂತೆ ರಾಜ್ಯದ ಹಲವಾರು ನಗರಗಳಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸುವ ಉದ್ದೇಶವಿದೆ. ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ತುಮಕೂರು, ಹಾಸನ, ಶಿವಮೊಗ್ಗ, ಹುಬ್ಬಳಿ ಧಾರಾವಾಡ, ಚಿತ್ರದುರ್ಗ, ಕಲಬುರ್ಗಿ ಹೀಗೆ ಹಲವು ಜಿಲ್ಲೆಗಳಲ್ಲಿ ಇದನ್ನು ಜಾರಿಗೆ ಕೊಡಲಾಗಿದೆ. ಗ್ರಾಸ್ ಲೈನ್ ಪೈಪ್ ಅಳವಡಿಕೆಯಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಗ್ಯಾಸ್ ಪೈಪ್ ಲೈನ್ ಗೆ ಬಳಸಿದ ಜಾಗಕ್ಕೆ ಅನುಗುಣವಾಗಿ ಪಾಲಿಕೆಗೆ ಹಣ ಕೊಡುತ್ತೇವೆ. ಲೈನ್ ಹಾಕಲು ತೆಗೆದ ತಗ್ಗನ್ನು 24 ಗಂಟೆಯೊಳಗೆ ಮುಚ್ಚಬೇಕು. ಖಾಸಗಿ ಮೊಬೈಲ್ ಕಂಪನಿಗಳು ರಸ್ತೆ ಅಗೆದಾಗ ಈಗ ಮಾತಾಡುತ್ತಿರುವವರು ಯಾಕೆ ಸುಮ್ಮನೆ ಇದ್ದರು ಎಂದು ಗ್ಯಾಸ್ ಪೈಪ್ ಲೈನ್ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿರುವ ಸ್ವಪಕ್ಷದ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಈ ಹಿಂದೆಯೂ ಖಾಸಗಿ ಕಂಪನಿಯವರು ಮನಬಂದಂತೆ ರಸ್ತೆಗಳನ್ನು ಅಗೆದಿದ್ದಾರೆ. ಜಸ್ಕೋದವರು ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆದಿದ್ದಾರೆ. ಆಗ ಜನಪ್ರತಿನಿಧಿಗಳು ಏಕೆ ಸುಮ್ಮನಿದ್ದರು. ಈಗ ಗ್ಯಾಸ್ ಪೈಪ್ ಲೈನ್ ಕಾಮಗಾರಿಯನ್ನು ಏಕೆ ವಿರೋಧಿಸುತ್ತಿದ್ದಾರೆ. ಶಾಸಕ ರಾಮದಾಸ್ ಅವರು ಯೋಜನೆ ವಿರೋಧಿಸಿ ಪತ್ರ ಬರೆಯುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಶಾಸಕ ಎಲ್.ನಾಗೇಂದ್ರ ಮಾಡಿರುವ ಟೀಕೆಗೂ ತಿರುಗೇಟು ನೀಡಿರುವ ಅವರು, ಈ ವಿಚಾರದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಸಾಧಕ ಬಾಧಕಗಳನ್ನು ಪರಿಶೀಲಿಸಿ ಈ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಶಾಸಕ ರಾಮದಾಸ್ ಪ್ರಧಾನಿ ನರೇಂದ್ರ ಮೋದಿಗಿಂತ ಸೀನಿಯರ್ ಲೀಡರ್. ಮೋದಿ ಮುಖ್ಯಮಂತ್ರಿ ಆಗುವುದಕ್ಕಿಂತಲೂ ಮೊದಲೇ ಇವರು ಜನಪ್ರತಿನಿಧಿಗಳಾಗಿದ್ದವರು. ಶಾಸಕ ಎಲ್.ನಾಗೇಂದ್ರ ಕೂಡ ಪಾಲಿಕೆ ಸದಸ್ಯರಾಗಿದ್ದವರು. ಪಾಲಿಕೆ ಕೌನ್ಸಿಲ್ ಸಭೆಗೆ ಭಾಗಿಯಾಗದೇ ನಮ್ಮ ಪಕ್ಷದ ಮೇಯರ್ ಸುನಂದಾ ಪಾಲನೇತ್ರ ಅವರಿಗೆ ಅಗೌರವ ತೋರಲಾಗಿದೆ. ನಮ್ಮ ಪಕ್ಷದ ಮೇಯರ್ ಗೆ ಅಗೌರವ ತೋರಿದ್ದು ಸರಿಯಾದ ನಿಲುವೇ? ಎಂದು ಪ್ರಶ್ನಿಸಿದ್ದಾರೆ.
ಅಭಿವೃದ್ಧಿ ಬಗ್ಗೆ ನನಗೆ ಪಾಠ ಹೇಳಬೇಡಿ:
ರಾಜಕಾರಣ ಕ್ಕೆ ಯಾರು ಬೇಕಾದರೂ ಬರಬಹುದು. ರಿಯಲ್ ಎಸ್ಟೇಟ್ ಮಾಡುವವರು, ಬಡ್ಡಿ ವ್ಯವಹಾರ ಮಾಡುವವರು ಯಾರು ಬೇಕಾದರೂ ರಾಜಕೀಯಕ್ಕೆ ಬರಬಹುದು. ಬಂದ ಮೇಲೆ ಹೇಗೆ ಕೆಲಸ ಮಾಡುತ್ತಾರೆ ಎನ್ನುವುದರ ಮೇಲೆ ಜನ ತೀರ್ಮಾನ ಮಾಡುತ್ತಾರೆ. ನನ್ನ ಗೆಲವಿಗೆ ಕಾರ್ಯ ಕರ್ತರು ಶ್ರಮಿಸಿದ್ದಾರೆ. ಪಾಲಿಕೆ ಮಾಜಿ ಹಾಲಿ ಸದಸ್ಯರು ಶ್ರಮಿಸಿದ್ದಾರೆ. ಮೋದಿ ಅವರ ಅಭಿಮಾನಿಗಳು ಎಲ್ಲಾ ಪಕ್ಷದಲ್ಲೂ ಇದ್ದಾರೆ. ಅವರೆಲ್ಲಾ ನನಗೆ ಮತ ಹಾಕಿದ್ದಾರೆ. ನಾಗೇಂದ್ರ ಅವರು ಹುಟ್ಟಿ ಬೆಳೆದ ಕೆ.ಜಿ.ಕೊಪ್ಪಲಿನಲ್ಲೇ ಅವರು ಚುನಾವಣೆಯಲ್ಲಿ ಲೀಡ್ ಬರಲಿಲ್ಲ. ಇದು ನೆನಪಿರಲಿ. ನಾಗೇಂದ್ರ ಅವರು ಎದುರು ಸೋತ ಕಾಂಗ್ರೆಸ್ ವಾಸು ಅವರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರು ಯಾವತ್ತೂ ಅಹಂ ಪ್ರದರ್ಶಿಸಲಿಲ್ಲ. ನಿಮಗೆ ನೀವೆ ಅಭಿವೃದ್ಧಿ ಹರಿಕಾರ ಎಂದು ಕೊಳ್ಳಬೇಡಿ. ಚಾಮರಾಜ ಕ್ಷೇತ್ರದಲ್ಲಿ ನಾನು ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಅಭಿವೃದ್ಧಿ ಬಗ್ಗೆ ನನಗೆ ಪಾಠ ಹೇಳಬೇಡಿ ಎಂದು ಕಿಡಿಕಾರಿದ್ದಾರೆ.
ಗೋವಾಕ್ಕೆ ಕೆಲವರು ಪಾರ್ಟಿ ಮಾಡಲು ತಮ್ಮ ಕಾರ್ಯಕರ್ತರನ್ನು ಕರೆದು ಕೊಂಡು ಹೋಗಿದ್ದರು. ಆ ವಿಮಾನ ತರಿಸಿದ್ದೆ ನಾನು. ಅತಿ ಹೆಚ್ಚು ಮತಗಳಿಂದ ನಾನು ಗೆದ್ದಿದ್ದೇನೆ. ನಾನು ಕೆಲಸ ಮಾಡಿದ್ದಕ್ಕೆ ನನಗೆ ಜನ ಮತ ಹಾಕಿದ್ದಾರೆ. ಇದು ಪ್ರತಿಷ್ಠೆಯ ಪ್ರಶ್ನೆ ಅಲ್ಲ. ಕ್ಷೇತ್ರಗಳು ಶಾಸಕರ ಖಾಸಗಿ ಬಡಾವಣೆಗಳಲ್ಲ. ಅವರು ಬೇಕಾದರೆ ರಿಯಲ್ ಎಸ್ಟೇಟ್ ಮಾಡಿಕೊಳ್ಳಲಿ. ಅದು ನನಗೆ ಸಂಬಂಧವಿಲ್ಲ. ನನಗೆ ವಿಚಾರ ಮುಖ್ಯ. ವಿವಾದ ಬೇಕಾದರೆ ನೀವು ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.