ಮಲ್ಲಿಗೆ ನಗರಿಯಲ್ಲಿ ವಿಶ್ವ ಭೂಮಿ ದಿನಾಚರಣೆ
1 min read
ಮೈಸೂರು : ಹಾರ್ಟ್ ಸಂಸ್ಥೆ, ನ್ಯೂ ಡಯಾಕೇರ್ & ಪಾಲಿಕ್ಲಿನಿಕ್ ಹಾಗೂ ಭೂವಿಜ್ಞಾನ ಅಧ್ಯಾಯನ ವಿಭಾಗ, ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಜಾಥಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ. ಪಿ. ಮಾದೇಶ್ ಈ ಭೂಮಿ ತಾಯಿಯ ದಿನವನ್ನು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ಕೂಡ ಆಚರಿಸಬೇಕು, ಏಕೆಂದರೆ ಈ ಭೂ ತಾಯಿಯು ಎಲ್ಲರಿಗೂ ಆಶ್ರಯ ನೀಡಿದ್ದಾಳೆ, ಅವಳನ್ನು ಗೌರವಿಸೋದು ಮತ್ತು ರಕ್ಷಿಸೋದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಹಾಗೂ ಈ ದಿನಾಚರಣೆಯು ಪರಿಸರ ದಿನ, ಅಂತರ್ಜಲ ದಿನ, ಜಲದಿನ, ಅರಣ್ಯ ದಿನ, ಓಝೋನ್ ದಿನ ಈ ಎಲ್ಲಾ ದಿನಗಳ ತಳಹದಿಯನ್ನು ಈ ವಿಶ್ವ ಭೂಮಿ ದಿನ ಹೊಂದಿರುವುದರಿಂದ ಇದನ್ನು ಜಿಲ್ಲೆಗಳ ಮಟ್ಟದಲ್ಲಿ ಎಲ್ಲಾ ಇಲಾಖೆಗಳ ಸಹಯೋಗ ಮತ್ತು ಸಹಭಾಗಿತ್ವದೊಂದಿಗೆ ಜಿಲ್ಲಾಡಳಿತ ಅಥವಾ ಜಿಲ್ಲಾ ಮಟ್ಟದ ಕಾರ್ಯಕ್ರಮವಾಗಿ ಪರಿಗಣಿಸಿದರೆ ಇನ್ನು ಹೆಚ್ಚಿನ ಜನ ಜಾಗೃತಿ ಮೂಡಿಸಲು ಅವಕಾಶವಾಗುತ್ತದೆ ಎಂದರು.
ಜಾಥಾಕ್ಕೆ ಚಾಲನೆ ನೀಡಿದ ಮೈಸೂರು ವಿಭಾಗದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ. ಮಾಂತೇಶ್ ಮಾತನಾಡಿ ಭೂವಿಜ್ಞಾನ ವಿದ್ಯಾರ್ಥಿಗಳೊಂದಿಗೆ ಹಾರ್ಟ್ ಸಂಸ್ಥೆಯು ಆಯೋಜಿಸಿರುವ ಈ ಜಾಥಾ ಕಾರ್ಯಕ್ರಮ ಶ್ಲಾóಘನೀಯ. ಇನ್ನು ಮುಂದೆ ಈ ರೀತಿಯ ಕಾರ್ಯಕ್ರಮಗಳು ವರ್ಷಪೂರ್ತಿ ನಡೆಯಬೇಕು ಅದಕ್ಕೆ ನಮ್ಮ ಇಲಾಖೆಯಿಂದಲ್ಲೂ ಸಹ ಸಹಕಾರವನ್ನು ನೀಡುತ್ತೇವೆ ಹಾಗೂ ಭೂವಿಜ್ಞಾನ ವಿದ್ಯಾರ್ಥಿಗಳಾಗಿ ಪ್ರತಿ ವಿದ್ಯಾರ್ಥಿಯು ಕೇವಲ ಪರೀಕ್ಷೆ ದೃಷ್ಟಿಯಿಂದ ಇದನ್ನು ಅಧ್ಯಾಯನ ಮಾಡದೆ, ಭೂ ಮಾಲಿನ್ಯದ ವಾಸ್ತವ ಸ್ಥಿತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಜವಬ್ಧಾರಿಯನ್ನು ತೆಗೆದುಕೊಳ್ಳಬೇಕು ಎಂದರು.
ಹಾರ್ಟ್ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ನ್ಯೂ ಡಯಾಕೇರ್ & ಪಾಲಿಕ್ಲಿನಿಕ್ ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎ.ಆರ್. ರೇಣುಕಾಪ್ರಸಾದ್ ಮಾತನಾಡಿ ನಮ್ಮ ಪೂರ್ವಜರು ಈ ಭೂಮಿಯನ್ನು ಮತ್ತು ಪರಿಸರವನ್ನು ಬಹಳ ಜೋಪಾನವಾಗಿ ಜವಬ್ಧಾರಿಯುತವಾಗಿ ನೋಡಿಕೊಂಡು ನಮ್ಮ ಪೀಳಿಗೆಗೆ ಬಿಟ್ಟುಕೊಟ್ಟಿದ್ದಾರೆ, ಹಾಗೆಯೇ ನಾವೂ ಕೂಡ ಈ ಪರಿಸರ ಮತ್ತು ಭೂಮಿಯನ್ನ ಸಂರಕ್ಷಿಸುವುದರ ಜೊತೆ ನಮ್ಮ ಮುಂದಿನ ತಲೆಮಾರಿಗೆ ಸುರಕ್ಷಿತವಾಗಿ ಹಸ್ಥಾಂತರಿಸುವುದು ನಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ ಎಂದು ಯುವಕರಿಗೆ ಸಂದೇಶವನ್ನು ರವಾನಿಸಿದರು.
ಜಾಥಾ ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಹೆಚ್ಚು ಸ್ನಾತ್ತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು ಹಾರ್ಟ್ ಸಂಸ್ಥೆಯ ಕಾರ್ಯಕಾರಿ ಸದಸ್ಯರಾದ ಶ್ರೀ ವಿ.ಜೆ. ಮಿಂಚು, ಶ್ರೀ ವರದನಾಯಕ ಮತ್ತಿತರರು ಹಾಜರಿದ್ದರು.