ಛಾಯಾಗ್ರಹಣ ಕೇವಲ ವಿಜ್ಞಾನ ತಂತ್ರಜ್ಞಾನವಲ್ಲ ಅದೊಂದು ಸೃಜನಶೀಲ ಕಲೆ: ಎಂ ಕೆ ಸೋಮಶೇಖರ್

1 min read

ಮೈಸೂರು: ಜಿಲ್ಲಾ ಫೋಟೋಗ್ರಾಫರ್ಸ್ ಅಂಡ್ ವೀಡಿಯೋ ಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಜರುಗಿದ ವಿಶ್ವ ಛಾಯಾಗ್ರಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಜಿ ಟಿ ದೇವೇಗೌಡ ರವರು ಭಾಗವಹಿಸಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.

ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು.ಸಂಘದ ಅಧ್ಯಕ್ಷರಾದ ದಡದಹಳ್ಳಿ ಮಹೇಶ್,ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್,ಉಪಾಧ್ಯಕ್ಷರಾದ ಸುದರ್ಶನ್,ಕಾರ್ಯದರ್ಶಿ ಧನಂಜಯ್,ಸಹಕಾರ್ಯದರ್ಶಿ ಎಂ ಜೆ ಶ್ರೀನಿವಾಸ್,ಖಜಾಂಚಿ ಮಹದೇಶ್,ನಿರ್ದೇಶಕರುಗಳಾದ ಕಾಂತರಾಜು,ಚೈತನ್ಯ ರಾವ್,ಅರುಣ್ ಕುಮಾರ್,ಮಂಜುನಾಥ್ ಕುಪ್ಪಣ್ಣ,ವರ್ಗೀಸ್,ಪ್ರಮೋದ್,ಮತ್ತಿತರರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ,ಸಾಧಕರಿಗೆ ಸನ್ಮಾನ,ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಮಾಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕರು ಹಾಗೂ ಸಂಘದ ಗೌರವ ಅಧ್ಯಕ್ಷರೂ ಆದ ಎಂ ಕೆ ಸೋಮಶೇಖರ್ ಮಾತನಾಡಿ
ಒಂದು ಸಂಘದ ಯಶಸ್ಸಿಗೆ ಕೇವಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ ಬದಲಾಗಿ ಪ್ರತಿಯೊಬ್ಬ ಸದಸ್ಯರು ಒಗ್ಗಟ್ಟಿನಿಂದ ಕೈಜೋಡಿಸಿದಾಗ ಮಾತ್ರ ಸಂಘ ಯಶಸ್ವಿಯಾಗಿ ಮುನ್ನೆಡೆಯಲು ಸಾಧ್ಯ ಎಂದರು.

ಹಲವಾರು ವರ್ಷಗಳ ಕಾಲ ಛಾಯಗ್ರಾಹಕ ಪ್ರಪಂಚದಲ್ಲಿ ದುಡಿದ ಹಲವಾರು ಹಿರಿಯ ಛಾಯಗ್ರಾಹಕರಿಗೆ ಸನ್ಮಾನ ಮಾಡಿ ಅವರ ಜೀವನದ ಅವಿಸ್ಮರಣೀಯವಾಗಿಸಿದ್ದು ನನಗೆ ತುಂಬಾ ಖುಷಿ ತಂದಿದೆ.ಇವತ್ತು ಛಾಯಾಗ್ರಾಹಕ ಪ್ರಪಂಚ ಅತ್ಯಂತ ಸ್ಪರ್ಧೆಯಿಂದ ಕೂಡಿದೆ.ಆಗಾಗಿ ಬುದ್ಧಿವಂತಿಕೆ ಜೊತೆಜೊತೆಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಇವತ್ತಿನ ಕಾಲಘಟ್ಟದಲ್ಲಿ ಮುನ್ನೆಡೆಯಲು ಸಾಧ್ಯವಾಗುತ್ತದೆ.ಛಾಯಚಿತ್ರ ಕೇವಲ ವಿಜ್ಞಾನ ತಂತ್ರಜ್ಞಾನ ಮಾತ್ರವಲ್ಲ ಬದಲಾಗಿ ಅದೊಂದು ಸೃಜನಶೀಲ ಕಲೆ ಅದು ಬದುಕಿನ ಅನೇಕ ಸ್ತರಗಳಲ್ಲಿ ನೈಜ ಸಾಕ್ಷಿಯಾಗಿ ಹೊರಹೊಮ್ಮುತ್ತದೆ ಎಂದರು.

ಬಾಹ್ಯಾಕಾಶ,ಸಮುದ್ರದ ಆಳ,ಭೂಮಿಯ ಆಳದಲ್ಲೂ ಅಡಗಿರುವ ಅನೇಕ ವಿಸ್ಮಯಗಳನ್ನು ಅರಿಯಲು ಛಾಯಗ್ರಹಣ ಅನುಕೂಲ ಮಾಡಿಕೊಟ್ಟಿದೆ.ಆ ನಿಟ್ಟಿನಲ್ಲಿ ಇತ್ತೀಚಿಗಷ್ಟೇ ಕೊರೊನಾ ಸಂಕಷ್ಟಗಳಿಂದ ಹೊರಬಂದಿದ್ದೀರಿ.ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.ಸಂಘದ ಹಿರಿಯ ಸದಸ್ಯರಾದ ಎ ಎಸ್ ಮಂಜುನಾಥ್,ಶ್ರೀ ಬಾಲಾಜಿ ಕಾರ್ತಿಕೇಯನ್,ಶ್ರೀ ಎಂ ಪಿ ಮಹದೇವ್,ಶ್ರೀ ಎಂ ರಾಜಶೇಖರ್ ಮೂರ್ತಿ,ಶ್ರೀ ಮಹೇಶ್ ಡಿ,ಶ್ರೀ ದಾಮೋದರ್,ಶ್ರೀ ನಾಗೇಶ್,ಶ್ರೀ ರಾಜು,ಶ್ರೀ ಸುಭಾಷ್ ರವರುಗಳನ್ನು ಸನ್ಮಾನಿಸಲಾಯಿತು.

About Author

Leave a Reply

Your email address will not be published. Required fields are marked *