ಪರಿಸರ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು: ಡಾ. ಮಲ್ಲೇಶ್ ಗುರೂಜಿ

1 min read

ಚೆನ್ನಪಟ್ಟಣ: ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಗೌಡಗೆರೆ ಚಾಮುಂಡೇಶ್ವರಿ ಪುಣ್ಯಕ್ಷೇತ್ರದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಶ್ರೀ ಚಾಮುಂಡೇಶ್ವರಿ ಬಸವಪ್ಪ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಹಸ್ರ ಕೋಟಿ ವೃಕ್ಷ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಒಂದು ಕಾರ್ಯಕ್ರಮಕ್ಕೆ ಗೌಡಗೆರೆ ಚಾಮುಂಡೇಶ್ವರಿ ಪುಣ್ಯಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಡಾ. ಮಲ್ಲೇಶ್ ಗುರೂಜಿಯವರು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

ರಾಮನಗರ ಜಿಲ್ಲೆ ಮತ್ತು ಚೆನ್ನಪಟ್ಟಣ ತಾಲ್ಲೂಕಿನ ಸಾಮಾಜಿಕ ಅರಣ್ಯ ವಿಭಾಗ ಮತ್ತು ಸಾಮಾಜಿಕ ಅರಣ್ಯ ವಲಯದ ಸಹಯೋಗದೊಂದಿಗೆ ಶ್ರೀಗಂಧ, ಬೇವು, ಜಂಬು ನೇರಳೆ, ಕಾಡು ಬಾದಾಮಿ, ಮಹಾಘನಿ ಸೇರಿದಂತೆ ಸರಿಸುಮಾರು 13 ಪ್ರಭೇದದ ಗಿಡಗಳನ್ನು ನೆಡಲಾಯಿತು.

ಈ ವೇಳೆ ಮಾತಾನಾಡಿದ ಧರ್ಮದರ್ಶಿಗಳಾದ ಡಾ ಮಲ್ಲೇಶ್ ಗುರೂಜಿಯವರು ಪರಿಸರ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು, ಹಾಗೂ ಮುಂದಿನ‌ ಪೀಳಿಗೆಗೆ ಪರಿಶುದ್ಧವಾದ ಆಮ್ಲಜನಕ ಬೇಕೆಂದರೆ ಪ್ರತಿಯೊಬ್ಬರು ಗಿಡನೆಟ್ಟು, ಗಿಡ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಇದೇ ಉದ್ದೇಶದಿಂದಲೇ ನಮ್ಮ ಕ್ಷೇತ್ರದಲ್ಲಿ ಗಿಡ ಬೆಳೆಸುವ ಮೂಲಕ ಜನರಿಗೆ ಉತ್ತಮ ಸಂದೇಶ ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಮಾತಾನಾಡಿದ್ರು

ಇದೇ ಸಂಧರ್ಭದಲ್ಲಿ ಗೌಡಗೆರೆ ಧರ್ಮದರ್ಶಿಗಳಾದ ಡಾ ಮಲ್ಲೇಶ್ ಗೂರೂಜಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಮಲ್ಲೇಶ್, ಚನ್ನಪಟ್ಟಣ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಪ್ರಶಾಂತ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಸೇರಿದಂತೆ ಚೆನ್ನಪಟ್ಟಣ ತಾಲ್ಲೂಕಿನ KSRTC ಚಾಲಕ ನಿರ್ವಾಹಕರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *