ವಿಶ್ವ ಮಧುಮೇಹ ದಿನಾಚರಣೆ: ಮೈಸೂರಿನ ಭಾನವಿ ಆಸ್ಪತ್ರೆ ವತಿಯಿಂದ ವಾಕಾಥಾನ್
1 min read
ಮೈಸೂರು: ವಿಶ್ವ ಮಧುಮೇಹ ದಿನಾಚರಣೆ ಹಿನ್ನಲೆ ಮೈಸೂರಿನ ಭಾನವಿ ಆಸ್ಪತ್ರೆ ವತಿಯಿಂದ ಇಂದು ವಾಕಾಥಾನ್ ನಡೆಯಿತು. ವಾಕಾಥಾನ್ ಅನ್ನು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕಾರ್ ಅವರು ಉದ್ಘಾಟಿಸಿದರು.
ಮಧುಮೇಹ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಸ್ಪತ್ರೆಯಿಂದ ನಾಲ್ಕು ಕಿ.ಮಿ ವರೆಗೆ ನಡೆದ ವಾಕಾಥಾನ್ ನಲ್ಲಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗಿಯಾದರು.
ವಾಕಾಥಾನಲ್ಲಿ ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕಾರ್, ಭಾನವಿ ಆಸ್ಪತ್ರೆ ಎಂ.ಡಿ ಡಾ.ಎನ್.ವಿಜಯ್ ಚೆಲುವರಾಜ್ ನರಸೇಗೌಡ ಸಂಪೂರ್ಣಬಾಗಿ ಭಾಗಿಯಾದರು. ವಾಕಾಥಾನ್ ಬಳಿಕ ದೃಶ್ಯ ಮಾಧ್ಯಮದವರಿಗೆ ಭಾನವಿ ಆಸ್ಪತ್ರೆ ಎಂ.ಡಿ ಡಾ.ಎನ್.ವಿಜಯ್ ಚೆಲುವರಾಜ್ ನರಸೇಗೌಡ ಹೆಲ್ತ್ ಕಾರ್ಡ್ ವಿತರಿಸಿದರು.