ಹೋಂ ಕ್ವಾರೆಂಟೈನ್ನಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್, ಮೆಡಿಸಿನ್ ವಿತರಿಸಿದ ಕೆಸಿವಿಟಿ
ಮೈಸೂರು: ಮೈಸೂರು ಜಿಲ್ಲಾ ಕೆಸಿವಿಟಿ ಕಡೆಯಿಂದ ಮೈಸೂರು ಜಿಲ್ಲೆ ಹೆಗ್ಗಡ ದೇವನ ಕೋಟೆ ತಾಲ್ಲೂಕಿನ ನಾಗನ ಹಳ್ಳಿ ಗ್ರಾಮದಲ್ಲಿ ಕೊರೋನ ಸೋಂಕಿಗೆ ತುತ್ತಾಗಿರುವ ಹೋಂ ಕ್ವಾರೆಂಟೈನ್ ಇರುವ 20 ಕುಟುಂಬಗಳಿಗೆ 10 ದಿನಕ್ಕಗುವ ಆಹಾರದ ದಿನಸಿ ಕಿಟ್ ಹಾಗೂ ವೈದ್ಯರಿಂದ ಸ್ಥಳದಲ್ಲಿಯೇ ಸಮಾಲೋಚನೆ ನಡೆಸಿ ಅಗತ್ಯ ಇರುವ ಮೆಡಿಸಿನ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವೈದ್ಯರಾದ Dr ಶ್ರೀ ರಾಮಪ್ಪ, ಮೋಹನ್ ಪಿರಿಯಾಪಟ್ಟಣ…ಮೈಸೂರು ಜಿಲ್ಲಾ ಸಂಯೋಜಕರು, ವಿನುತ ತಾಲ್ಲೋಕು ಸಂಯೋಜಕರು, ಸ್ಟನ್ನಿ ಬಿಟ್ಟೋ ತಾಲ್ಲೋಕು ಪಂಚಾಯ್ತಿ ಸದಸ್ಯರು ಹಾಗೂ kcvt ಸದಸ್ಯರು, ಜಯ ಶೀಲಾ, ಕಿರಣ್ ಕುಮಾರ್, ಸಚಿನ್ ಮುಂತಾದವರು ಹಾಜರಿದ್ದರು.