ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನ: ವಿವಿಧ ಕಾರ್ಯಕ್ರಮಗಳಿಗೆ ಶಾಸಕ ರಾಮದಾಸ್ ಚಾಲನೆ
1 min read
ಮೈಸೂರು,ಸೆ.25-ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನಚಾರಣೆ ಅಂಗವಾಗಿ ಅಂತ್ಯೋದಯದ 7 ದಿನದ ಕಾರ್ಯಕ್ರಮಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು.
ವಿದ್ಯಾರಣ್ಯಪುರಂನ ಶಾಸಕರ ಕಚೇರಿಯ ಮುಂಬಾಗದ ಪಾರ್ಕ್ ನಲ್ಲಿ ಚಾಲನೆ ನೀಡಲಾಯಿತು.

ಗೋವುಗಳಿಗೆ ಆರೋಗ್ಯ ತಪಾಸಣೆ, ಪಮ್ಡಿಟ್ ಜಿ ರವರ ಜೀವನದ ವಸ್ತು ಪ್ರದರ್ಶನ, ಕರಕುಶಲ ಕಾರ್ಯಕ್ಕೆ ಚಾಲನೆ, ಬಾಣಂತಿ ಮತ್ತು ಮಕ್ಕಳಿಗೆ ಆರೋಗ್ಯ ಕಿಟ್ ವಿತರಣೆ, ಪೌರಕಾರ್ಮಿಕರೊಂದಿಗೆ ಮಾತೃ ಭೋಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಸಕರು ಮಾತನಾಡಿ, ಗೋಪಾಲಕರಿಗೆ ಅನುಕೂಲವಾಗಲೆಂದು ಎಂದು ಗೋವುಗಳ ಆರೋಗ್ಯ ತಪಾಸಣಾ ಶಿಬಿರ ನಡೆಸಿ ಉಚಿತವಾಗಿ ಔಷಧಿಗಳನ್ನು ವಿತರಿಸಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜಸ್ಥಾನದಲ್ಲಿ ಗೋವುಗಳ ಬೈಪ್ರಾಡೆಕ್ಟ್ ಆದ ಸಗಣಿಯಲ್ಲಿ ಪೈಂಟ್ ತಯಾರಿಸಲಾಗುತ್ತಿದ್ದು, ಇದನ್ನು ಕೇಂದ್ರ ಸರ್ಕಾರದ ಸಹಾಯದಿಂದ ಮೈಸೂರು ಅರಗು ಹಾಗೂ ಬಣ್ಣದ ಕಾರ್ಖನೆಯಲ್ಲೂ ತಯಾರಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಮೈಸೂರು ಬಣ್ಣ ಹಾಗೂ ಅರಗು ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣೀಶ್ ಅವರ ಜೊತೆ ಚರ್ಚಿಸಿದ್ದೇನೆ ಎಂದರು.
ಗೋವು ರಕ್ಷಣೆ ಮಾಡುವವರಿಗೆ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಿಂದ ಪ್ರತಿಯೊಬ್ಬರಿಗೂ ಗೋವು ಪಡೆಯಲು 75 ಸಾವಿರ ರೂ. ಮಂಜೂರು ಮಾಡಲಾಗುವುದು. ಇದು 25 ಸಾವಿರ ಸಬ್ಸಿಡಿ ಹಾಗೂ 50 ಸಾವಿರ ಬ್ಯಾಂಕ್ ನಿಂದ ಸಾಲ ದೊರಕಲಿದೆ ಎಂದರು.
ಅಂತರಾಷ್ಟ್ರೀಯ ಮಟ್ಟದ ಉದ್ಯಮಿಯಾದಂತ ಛಾಯ ನಂಜಪ್ಪ ರವರು ಹುಡಿ ಕೈಗಾರಿಕೆಗಳ ಏಳಿಗೆಗೆ ದೇಶದ ಮಟ್ಟದಲ್ಲಿ ಜವಾಬ್ದಾರಿ ಪಡೆದು ಕಾರ್ಯ ನಿರ್ವಹಿಸುತಿದ್ದಾರೆ. ಮುಂಬರುವ 15ದಿನದೊಳಗೆ ಬಿದುರಿನಿಂದ ಬುಟ್ಟಿ ತಯಾರಿಸಿ ಜೀವನ ನಡೆಸುವ ಮಹಿಳೆಯರಿಗೆ ಸಹಕಾರ ಸಂಘ ನಿರ್ಮಿಸಲಾಗುವುದು, ಇವರಿಗೆ ಬೇಕಾಗಿರುವ ಬೊಂಬು ಒದಗಿಸುವ ಕಾರ್ಯ ಆಗಬೇಕಿದ್ದು, ಇದನ್ನು ವರ್ಷಕ್ಕೊಂದು ಬಾರಿ ಒದಗಿಸಲಾಗುವುದು. ಇವರಿಗೆ ಕೆಲಸ ಮಾಡಲು ಶೆಡ್ ನಿರ್ಮಿಸಿಕೊಡಲಾಗುವುದು ಇದನ್ನು ಕೃಷ್ಣರಾಜ ಕ್ಷೇತ್ರದಲ್ಲಿ ಚಿನ್ನಗಿರಿಕೊಪ್ಪಲು ಹಾಗೂ ಮೇದರಕೇರಿಯಲ್ಲಿ ನಿರ್ಮಿಸಲು 25 ಲಕ್ಷಗಳನ್ನು ನೀಡಲು ಸ್ಥಳದಲ್ಲಿ ಘೋಷಣೆ ಮಾಡಲಾಗುತ್ತಿದೆ. ಇವರು ತಯಾರಿಸುವ ಪದಾರ್ಥಗಳನ್ನು ಮಾರಲು ಅಂತರಾಷ್ಟ್ರಮಟ್ಟದಲ್ಲಿ ವೇದಿಕೆ ಕಲ್ಪಿಸುವ ಜವಾಬ್ದಾರಿ ನಿಮ್ಮದಾಗಿರುತ್ತದೆ ಎಂದು ಹೇಳಿದರು. ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷರಾದ ಎನ್.ವಿ.ಫಣೀಶ್ ರವರು ಮಾತನಾಡಿ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ 80 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಅಲ್ಲಿ ಗೋವಿನ ಸಗಣಿಯಿಂದ ಪೇಯಿಂಟ್ ತಯಾರಿಸುವ ಘಟಕವನ್ನು ಪ್ರಾರಂಭಿಸುವ ವಿಷಯವಾಗಿ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪ್ರಾರಂಭಿಸಲು ಕಾರ್ಯೋನ್ಮುಖರಾಗಲು ಶಾಸಕರು ನಮಗೆ ಮಾರ್ಗದರ್ಶನ ನೀಡಬೇಕೆಂದು ಕೋರಿದರು.
ಇದಕ್ಕೂ ಮೊದಲು ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜೀವನ ಚರಿತ್ರೆ ಕುರಿತು ಕಿರುಚಿತ್ರ ಪ್ರದರ್ಶನ ನಡೆಯಿತು. ಇದೇ ವೇದಿಕೆಯಲ್ಲಿ ಅಂತ್ಯೋದಯ ಯೋಜನೆಗೆ ಚಾಲನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಹಾಪೌರರಾದ ಸುನಂದಾ ಪಾಲನೇತ್ರ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷರಾದ ಎನ್.ವಿ.ಫಣೀಶ್, ಮೈಮುಲ್ ಅಧ್ಯಕ್ಷರಾದ ಪ್ರಸನ್ನ, ಅಂತರಾಷ್ಟ್ರೀಯ ಮಟ್ಟದ ಉದ್ಯಮಿ ಛಾಯ ನಂಜಪ್ಪ, ಶ್ರೀಮತಿ ಶೀಲಾ ಖರೆ, ಮೈಸೂರು ನಗರ ಭಾಜಪಾ ಅಧ್ಯಕ್ಷರಾದ ಶ್ರೀವತ್ಸ, ಭಾಜಪಾ ಕೆ.ಆರ್ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಭಾಜಪಾ ಕೆ.ಆರ್ ಕ್ಷೇತ್ರದ ಉಪಾಧ್ಯಕ್ಷರಾದ ಎಂ.ಆರ್ ಬಾಲಕೃಷ್ಣ,
ನಗರ ಪ್ರಧಾನ ಕಾರ್ಯದರ್ಶಿ ವಾಣೀಶ್ , ಅಂತ್ಯೋದಯ ಸಪ್ತಹಾ ಸಮಿತಿಯ ಸಂಚಾಲಕರಾದ ವಿದ್ಯಾ ಅರಸ್,ಕೆ.ಆರ್ ಕ್ಷೇತ್ರದ ಭಾಜಪಾ ನಗರಪಾಲಿಕಾ ಸದಸ್ಯರುಗಳು ಹಾಜರಿದ್ದರು.