ಮೈಸೂರು : ಶಾಸಕ ರಾಮದಾಸ್ ಒಬ್ಬ ಸಮಾಜ ಸೇವಕ- ಮಾದಾರ ಚನ್ನಯ್ಯ ಶ್ರೀಗಳ ಬಣ್ಣನೆ!

1 min read

ಮೈಸೂರು : ಶಾಸಕ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಕೆ.ಆರ್ ಕ್ಷೇತ್ರದಲ್ಲಿ 20 ದಿನಗಳ ಮೋದಿ ಯುಗ್ ಉತ್ಸವ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಇಂದು ಸಂಜೆ 4 ಗಂಟೆಗೆ ಅಶೋಕ ಪುರಂನಲ್ಲಿ ಕಾಂಕ್ರೀಟ್ ರಸ್ತೆಗೆ ಶಿಲಾನ್ಯಾಸ ನೆರವೇರಿಸಿ ಮತ್ತು ಎಸ್.ಸಿ ಎಸ್.ಟಿ ಮೈನಾರಿಟಿ ಪಂಗಡಗಳ ಅಭಿವೃದ್ಧಿ , ವಿವಿಧ ಯೋಜನೆಗಳ ಸಂಪೂರ್ಣ ಮಾಹಿತಿಗಳಿಗೆ ಚಾಲನೆಯನ್ನು ನೀಡಲಾಯಿತು.

ಅಶೋಕಪುರಂ ಪಾರ್ಕ್ ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವರಾದ ಶ್ರೀ ಎ.ನಾರಾಯಣಸ್ವಾಮಿ ಹಾಗೂ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ್ ಪೂಜಾರ್ ಹಾಗೂ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ಮಾಲಾರ್ಪಣೆ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಈಗಾಗಲೇ ಕಾರ್ಯಕ್ರಮಗಳಿಗೆ ಚಾಲನೆಯನ್ನು ಸಚಿವರಿಗಳು ನೀಡಿದ್ದಾರೆ. ಸುಮಾರು 6 ಸಾವಿರ ಜನ ಪರಿಶಿಷ್ಟ ಜಾತಿ, ಪಂಗಡಗಳ ನನ್ನ ಬಂಧುಗಳಿಗೆ ಪ್ರಯೋಜನವಾಗುವ ಯೋಜನೆಗಳಿಗೆ ಇಂದು ಚಾಲನೆ ನೀಡಿದ್ದೇವೆ. ನಾಲ್ಕು ಇಲಾಖೆಗಳ ಸಮ್ಮಿಲನವನ್ನು ಮಾಡಿ ಸಮಾಜದ ಎಲ್ಲಾ ವರ್ಗಗಳಿಗೆ ಸರ್ಕಾರ ತಲುಪಬೇಕು ಎಂಬುದಕ್ಕೆ ಯೋಜನೆ ರೂಪಿಸಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರುಗಳು ಉಪಸ್ಥಿತರಿದ್ದೀರಿ ನಿಮ್ಮ ಇಲಾಖೆಯಲ್ಲಿ ಒಂದು ಹೊಸ ರೂಪವನ್ನು ತನ್ನಿ ಎಂದು ನಾನು ಈ ಮೂಲಕ ಕೋರುತ್ತೇನೆ ಎಂದರು.

ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ್ ಪೂಜಾರ್ ಅವರು ಮಾತನಾಡಿ ಕೆಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಯಾವ ಯಾವ ಯೋಜನೆ ಇದೆ, ಅದನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವುದು ಹೇಗೆ ಎಂಬುವ ಅಂಶವನ್ನು ಇಟ್ಟುಕೊಂಡು ಈ 20 ದಿನದ ಕಾರ್ಯಕ್ರಮವನ್ನು ರಾಮದಾಸ್ ಅವರು ನಡೆಸುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತೆಯನ್ನು ನಾವೆಲ್ಲ ನೋಡಿದ್ದೇವೆ ಒಂದು ಕೈಯಲ್ಲಿ ಸಂವಿಧಾನದ ಪ್ರತಿ ಮತ್ತೊಂದು ಕೈ ಲೋಕಸಭೆಯ ಕಡೆ ಕೈ ತೋರಿಸುತ್ತದೆ ಅದರ ಅರ್ಥ ಏನೆಂದರೆ ನಾನು ನನ್ನ ಬದುಕನ್ನು ಸಮರ್ಪಣೆ ಮಾಡಿ ನನ್ನಂತೆ ಯೋಚನೆ ಮಾಡುವವರನ್ನು ಸಮಾನವಾಗಿ ಸ್ವೀಕರಿಸಿ ಪರಿಶ್ರಮ ಪಟ್ಟು ಈ ಉತ್ಕೃಷ್ಟವಾಗಿರುವ ಪ್ರಜಾಪ್ರಭುತ್ವ ವನ್ನು ಗಟ್ಟಿಮಾಡುವಂತಹ ಸಂವಿಧಾನವನ್ನು ಬರೆದಿದ್ದೇವೆ ಪಾರ್ಲಿಮೆಂಟ್ ನ ಒಳಗಿರುವವರು ಈ ಸಂವಿಧಾನದ ಆಶಯದಂತೆ ಕೆಲಸ ಮಾಡಿದರೆ ಈ ಸಂವಿಧಾನ ರಚನೆ ಮಾಡಿದ್ದು ಸಾರ್ಥಕವಾಗುತ್ತೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಿಳಿಸಿದ್ದಾರೆ. ಬೂಮಿಗೆ ಬಿದ್ದ ಬೀಜ ಹಾಗೂ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಹೇಗೆ ಫಲ ಕೊಡುತ್ತದೆಯೋ ಅದೇ ರೀತಿ ರಾಮದಾಸ್ ಅವರು ಹಾಕಿರುವ ಈ ಯೋಜನೆಗಳು ನಮ್ಮ ಸರ್ಕಾರಕ್ಕೆ ,ನಮ್ಮ ಸಮಾಜಕ್ಕೆ ಇಂದಲ್ಲಾ ನಾಳೆ ಫಲ ನೀಡುತ್ತದೆ ಎಂದರು.

ಮುಖ್ಯ ಅತಿಥಿ ಭಾಷಣ ಮಾಡಿದ ಕೇಂದ್ರ ಸಚಿವರಾದ ನಾರಾಯಣಸ್ವಾಮಿರವರು ಕಾರ್ಯಕ್ರಮದ ಕುರಿತು ದಿನಾಂಕ 17.09.2021 ರಿಂದ 06.10.2021 ರ ತನಕ ನಿರಂತರವಾಗಿ ಸಮಾಜಕ್ಕೆ ಯಾವುದಾದರೊಂದು ಯೋಜನೆಗಳನ್ನು ತಲುಪಿಸುವ ಮೋದಿ ಯುಗೋತ್ಸವ ಕಾರ್ಯಕ್ರಮವು ದೇಶದಲ್ಲೇ ಮೊದಲಿರಬಹುದು ಇದರಿಂದ ಎಲ್ಲಾ ಜನಪ್ರತಿನಿಧಿಗಳು ಕಲಿಯಬೇಕಾದದು ಬಹಳಷ್ಟಿದೆ. ಸರ್ಕಾರಿ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಯೋಜನೆಗಳ ಅನುಷ್ಟಾನದ ಜೊತೆಗೆ ಬ್ರಷ್ಟಾಚಾರ ರಹಿತವಾದ ಆಡಳಿತ ನಡೆಸುವ ಗುರಿಯನ್ನು ಹೊಂದಿದ್ದೇವೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ಯಾವುದಾದರು ಅಧಿಕಾರಿ ಬ್ರಷ್ಟಾಚಾರದಲ್ಲಿ ತೊಡಗಿದ್ದರೆ ಅವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಿದೆ. ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಯಾವುದೇ ಅನುದಾನದ ಬೇಡಿಕೆ ನೀಡಿದರು ಅದನ್ನು ಮಂಜೂರು ಮಾಡಿಕೊಡುತ್ತೇನೆ ಹಾಗೂ ರಾಮದಾಸ್ ರವರು ಯಾವ ಯೋಜನೆಗಳನ್ನು ತಂದರು ಅದನ್ನು ಸ್ವೀಕರಿಸುತ್ತೇನೆ ಎಂದರು.

ಮಾದಾರ ಚೆನ್ನಯ್ಯ ಶ್ರೀಗಳು ಆಶೀರ್ವಚನ ನೀಡಿ
ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ ನಾವು ಈ ಸಂದರ್ಭದಲ್ಲಿ ಸ್ವಾಭಿಮಾನಿಗಳಾಗಬೇಕು ಆಗ ಮಾತ್ರ ದೇಶ ಮುಂದೆ ಬರುತ್ತದೆ, ನಾವು ಸ್ವಾಭಿಮಾನಿಗಳಾಗಲಾಗಬೇಕೆಂದರೆ ಸರ್ಕಾರವೂ ಸಹ ಅದಕ್ಕೆ ಬೇಕಾದಂತಹ ಅವಕಾಶಗಳನ್ನು ನೀಡಬೇಕಾಗುತ್ತದೆ. ನಮ್ಮ ರಾಮದಾಸ್ ಅವರು 140 ಕ್ಕೂ ಹೆಚ್ಚು ಯೋಜನೆಗಳನ್ನು ಪರಿಚಯಿಸಿಕೊಟ್ಟಿದ್ದಾರೆ, ರಾಮದಾಸ್ ಅವರುಬೊಬ್ಬ ರಾಜಕಾರಣಿಗಿಂತ ಹೆಚ್ಚಾಗಿ ಓರ್ವ ಸಮಾಜ ಸೇವಕನ ರೀತಿ ದುಡಿಯುತ್ತಿದ್ದಾರೆ. ನಾವೆಲ್ಲಾ ಭಾರತದಲ್ಲಿ ಒಗ್ಗಟ್ಟಾಗಿ ಬದುಕುತ್ತಿದ್ದೇವೆ ಇದೇ ನಮ್ಮ ದೇಶದ ವಿಶೇಷ. ಸಾಧು ಸಂತರ ತತ್ವಾದರ್ಶಗಳನ್ನು ಇಟ್ಟುಕೊಂಡು ಮುನ್ನಡೆಯೋಣ ಎಂದರು.

ಸದರಿ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧ್ಯಕ್ಷರಾದ ಬಿಂಧ್ಯಾರವರು, ಕೆ.ಆರ್ ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಎಂ.ವಡಿವೇಲು, ಉಪಾಧ್ಯಕ್ಷರಾದ ಜೆ.ರವಿ, ಸಂತೋಷ್ ಶಂಭು,ನಗರಪಾಲಿಕಾ ಸದಸ್ಯರುಗಳು, ಕ್ಷೇತ್ರದ ಬಿ.ಎಲ್.ಎ 1 ಆದ ಪ್ರಸಾದ್ ಬಾಬು, ಆಶ್ರಯ ಸಮಿತಿ ಉಪಾಧ್ಯಕ್ಷರಾದ ಶ್ರೀಮತಿ ವಿದ್ಯಾ ಅರಸ್,ಆಶ್ರಯ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ಮೈ.ಪುರಾಜೇಶ್, ನಗರ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಸಿ.ಈಶ್ವರ್, ಕಾರ್ಯದರ್ಶಿ ನಾಗರಾಜ್ ಬಿಲ್ಲಯ್ಯ, ಒ.ಬಿಸಿ ಅಧ್ಯಕ್ಷರಾದ ಶಿವಪ್ಪ, ಎಸ್.ಟಿ.ಅಧ್ಯಕ್ಷರಾದ ನಾಗರಾಜು. ಪ್ರಧಾನ ಕಾರ್ಯದರ್ಶಿ ವಿಜಯ ನಾಯ್ಕ ಕೆಆರ್.ಕ್ಷೇತ್ರ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಮುರುಳಿದರ್, ಪ್ರಧಾನಕಾರ್ಯದಶಿಗಳಾದ ಎಂ. ರಾಜು, ಪುನೀತ್ ಯುವಮೋರ್ಚಾ ಅಧ್ಯಕ್ಷರಾದ ಮನು ಶೈವ(ಅಪ್ಪಿ) ಪ್ರಮುಖರಾದ ಮಧೂಸೂದನ್ , ರಾಜಣ್ಣ, ರಂಗಸ್ವಾಮಿ, ಮಹದೇವ್, ಮುಂತಾದವರು ಹಾಜರಿದ್ದರು.

About Author

Leave a Reply

Your email address will not be published. Required fields are marked *