Video: ಶಿಕ್ಷಕನ ಗಮನ ಬೇರೆಡೆ ಸೆಳೆದು ಹಣ ಲೂಟಿ
1 min read
ಚಾಮರಾಜನಗರ: ಶಿಕ್ಷಕನ ಗಮನ ಬೇರೆಡೆ ಸೆಳೆದು ಹಣ ಲೂಟಿ ಮಾಡಿರುವ ಘಟನೆ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕು ಕಾಳನಹುಂಡಿ ಹಿ.ಪ್ರಾ ಶಾ.ಶಿಕ್ಷಕ ಶಿವಕುಮಾರ್ ಬ್ಯಾಂಕಿನಿಂದ ಹಣ ಡ್ರಾ ಮಾಡಿ ಬಸ್ ಗಾಗಿ ಕಾದು ನಿಂತಿದ್ದರು. ಶಿಕ್ಷಕನ ಬೆನ್ನಿಗೆ ರಾಸಾಯನಿಕ ಸ್ಪ್ರೇ ಮಾಡಿದ ಖದೀಮರು. ಎರಡು ಲಕ್ಷ ರೂಪಾಯಿ ಎಗರಿಸಿದ್ದಾರೆ.
ಬೆನ್ನಿಗೆ ರಾಸಾಯನಿಕ ಸ್ಪ್ರೇ ಮಾಡಿದ್ದರಿಂದ ಉರಿ ತಾಳಲಾರದೆ ಹಣವಿದ್ದ ಬ್ಯಾಗ್ ಕೆಳಗಿಟ್ಟು ಷರ್ಟ್ ಬಿಚ್ಚಿದ ಶಿಕ್ಷಕ. ಶಿಕ್ಷಕನ ಬೆನ್ನಿಗೆ ನೀರು ಹಾಕುವ ನೆಪದಲ್ಲಿ ಮುಂದೆ ಕರೆದ ಓರ್ವ ಖದೀಮ. ಬೆನ್ನಿಗೆ ನೀರು ಹಾಕಿಸಿಕೊಂಡು ಹಿಂತಿರುಗಿ ನೋಡುವಷ್ಟರಲ್ಲಿ ಕ್ಷಣಾರ್ಧದಲ್ಲಿ ಹಣವಿದ್ದ ಬ್ಯಾಗ್ ಮಾಯವಾಗಿದೆ. ಹಣವಿದ್ದ ಬ್ಯಾಗ್ ಅನ್ನು ಮತ್ತೊಬ್ಬ ಖತರ್ನಾಕ್ ಖದೀಮ ಎಗರಿಸಿ ಪರಾರಿಯಾಗಿದ್ದಾನೆ.
ಮತ್ತಿಬ್ಬರು ಬೈಕ್ ನಲ್ಲಿ ಏಸ್ಕೇಪ್ ಆಗಿದ್ದು ಕೃತ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.