ಜಿಯೋ ಟ್ರೇಲ್ ತಂತ್ರಜ್ಞಾನದ ಮೂಲಕ ಚಾಮುಂಡಿ ಬೆಟ್ಟದ ದುರಸ್ತಿ ಕಾಮಗಾರಿ
1 min read
ಮೈಸೂರು: ಭಾರಿ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ರಸ್ತೆ ಕುಸಿತ ಹಿನ್ನಲೆ ಘಟನಾ ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸಿಸಿ ಪಾಟಿಲ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರಸ್ತೆ ದುರಸ್ತಿ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

ಈ ವೇಳ ಮಾಧ್ಯಮಗಳೊಂದಿಗೆ ಮಾತನಾಡಿ ಜಿಯೋ ಟ್ರೇಲ್ ತಂತ್ರಜ್ಞಾನದ ಮೂಲಕ ಚಾಮುಂಡಿ ಬೆಟ್ಟದ ದುರಸ್ತಿ ಕಾಮಗಾರಿ ಮಾಡಲಾಗುವುದು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಹೆಚ್ಚು ವಿವಿರ ನೀಡುವಂತಿಲ್ಲ. ಮಣ್ಣಿನ ಹೀರಿಕೊಳ್ಳುವ ಸಾಮರ್ಥ್ಯ ಮೀರಿ ತೇವಾಂಶ ಹೆಚ್ಚಾದ ಕಾರಣ ರಸ್ತೆ ಕುಸಿದಿದೆ. ತಜ್ಞರ ವರದಿಯಂತೆ ರಸ್ತೆಯನ್ನ ಆಧುನಿಕ ತಂತ್ರಜ್ಞಾನ ಬಳಸಿ ರಿಪೇರಿ ಮಾಡುತ್ತೆವೆ. ಎಲ್ಲಿಎಲ್ಲಿ ರಸ್ತೆ ಕುಸಿಯ ಬಹುದು ಎನ್ನುವುದರ ಬಗ್ಗೆ ಚಾಮುಂಡಿ ಬೆಟ್ಟದಲ್ಲಿ ಸರ್ವೆ ಮಾಡಿಸಿಲ್ಲ ಎಂದು ಚಾಮುಂಡಿ ಬೆಟ್ಟದಲ್ಲಿ ಸಚಿವ ಸಿಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಬಿಟ್ ಕಾಯಿನ್ ಹಗರಣ ವಿಚಾರ. ಆರೋಪಿಯನ್ನು ಬಂದಿಸಿದ್ದು ಬಿಜೆಪಿ ಸರ್ಕಾರ. ತನಿಖೆ ಹಂತದಲ್ಲೂ ಯಾವುದೇ ಲೋಪ ಆಗಿಲ್ಲ.
ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಸಿಎಂ ಈಗಾಗಲೇ ಘೋಷಿಸಿದ್ದಾರೆ. ಪ್ರಕರಣ ಹಸ್ತಾಂತರ ಸಂದರ್ಭದಲ್ಲೂ ವಿಳಂಭವಾಗಿಲ್ಲ. ಪ್ರಿಯಾಂಕ ಖರ್ಗೆ ನೆನ್ನೆ ಪಂಚನಾಮೆ ಸರಿಯಾಗಿ ಮಾಡಿಲ್ಲ ಅಂತ ಆರೋಪ ಮಾಡಿದ್ದರು. ಅವರಿಗೆ ಕೋರ್ಟ್ ದಂಡ ವಿಧಿಸಿದೆ. ಚುನಾವಣೆ ಹತ್ತಿರ ಬಂದಿದೆ ಅಂತ ಕಾಂಗ್ರೆಸ್ ನವರು ಏನೇನೋ ಆರೋಪ ಮಾಡ್ಬಾರದು ಅಂತ ಮೈಸೂರಿನಲ್ಲಿ ಸಿಸಿ ಪಾಟೀಲ್ ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ವಿಚಾರ. ನಮ್ಮ ಪಕ್ಷ 4 ಆಧಾರ ಸ್ತಂಭಗಳ ಮೇಲೆ ನಿಂತಿದೆ. ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಪಕ್ಷಕ್ಕೆ ಗೊತ್ತಿದೆ. ಪಕ್ಷದ ವಿಚರ ಮಾತನಾಡುವಷ್ಟು ನಾನು ದೊಡ್ಡವನಲ್ಲ ಎಂದರು.
ಶಾಸಕರಾದ ಜಿಟಿ ದೇವೇಗೌಡ ಎಸ್.ಎ ರಾಮದಾಸ್, ಎಲ್. ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.