ಕೊಡಗಿನ ಹೆದ್ದಾರಿ ಅಭಿವೃದ್ಧಿಗೆ ಮುಖ್ಯಮಂತ್ರಿಗೆ ಪ್ರತಾಪ್ ಸಿಂಹ ಮನವಿ

1 min read

ಮೈಸೂರು,ಫೆ.7-ಕೊಡಗಿನ ಹೆದ್ದಾರಿ ಅಭಿವೃದ್ಧಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಸದ ಪ್ರತಾಪ್ ಸಿಂಹ ಯೋಜನಾ ವರದಿ ಮೂಲಕ ಮನವಿ ಮಾಡಿದ್ದಾರೆ.


ಮೈಸೂರು-ಕೊಡಗು ಕ್ಷೇತ್ರದಲ್ಲಿನ ರಸ್ತೆಗಳನ್ನು ಕೆಆರ್ ಡಿಸಿಎಲ್ ವತಿಯಿಂದ ಸಾರ್ವಜನಿಕ ಸಂಸ್ಥೆಗಳ ಸಹಯೋಗದಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಅಂಗೀಕಾರ ನೀಡಬೇಕೆಂದು ಹಾಗೂ ಈ ರಸ್ತೆಗಳ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‍ನಲ್ಲಿ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಬಳಿ ಯೋಜನಾ ವರದಿಯೊಂದಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.


ಹುಣಸೂರು ತಾಲ್ಲೂಕು ಯಶೋಧರ ಮರ ಹತ್ತಿರ ರಾಷ್ಟ್ರೀಯ ಹೆದ್ದಾರಿ-275ರ ಜಂಕ್ಷನ್ (ಕಲ್ಲುಬೆಟ್ಟ) ನಿಂದ ರಾಜ್ಯ ಹೆದ್ದಾರಿ-90 (ಹುಣಸೂರು-ವೀರಾಜಪೇಟೆ-ತಲಕಾವೇರಿ ರಸ್ತೆ) ತಿತಿಮತಿ-ಗೋಣಿಕೊಪ್ಪ-ಬಿಟ್ಟಂಗಾಲ-ಪೆರಂಬಾಡಿ(ರಾಜ್ಯ ಹೆದ್ದಾರಿ) ಕಂಡಿಮಕ್ಕಿ-ಮಾಕುಟ್ಟ ಮಾರ್ಗವಾಗಿ ಕರ್ನಾಟಕ-ಕೇರಳ ಗಡಿವರೆಗೆ ರಸ್ತೆ ಅಭಿವೃದ್ಧಿ-ಒಟ್ಟು 76 ಕಿ.ಮೀ. ಉದ್ದ. ರಾಜ್ಯ ಹೆದ್ದಾರಿ-89 (ಮಡಿಕೇರಿ-ಕುಟ್ಟ ರಸ್ತೆ) ಮಡಿಕೇರಿ-ಸಿದ್ದಾಪುರ-ಪಾಲಿಬೆಟ್ಟ-ಗೋಣಿಕೊಪ್ಪ-ಪೊನ್ನಂಪೇಟೆ-ಹುದಿಕೇರಿ-ಶ್ರೀಮಂಗಲ ಮಾರ್ಗವಾಗಿ ಕುಟ್ಟ ಸೇರುವ ರಸ್ತೆ ಅಭಿವೃದ್ಧಿ- ಒಟ್ಟು 85.00 ಕಿಮೀ ಉದ್ದ.ವಈ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *