“ಚೆಂಬೆಳಕಿನ” ಖ್ಯಾತಿಯ ಕವಿ, ನಾಡೋಜ ಚನ್ನವೀರ ಕಣವಿ ಇನ್ನಿಲ್ಲ

1 min read

ಧಾರವಾಡ,ಫೆ.16- “ಚೆಂಬೆಳಕಿನ” ಖ್ಯಾತಿಯ ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ (93) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿ ಕಳಚಿದಂತಾಗಿದೆ.


ಇವರು ವಯೋಸಹಜ ಕಾಯಿಲೆಯಿಂದ ಜನವರಿ 14ರಂದು ಧಾರವಾಡದ ಎಸ್ ಡಿ ಎಂ‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 9. 15ಕ್ಕೆ ಕೊನೆಯುಸಿರೆಳೆದಿದ್ದಾರೆ.


ಕಣವಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.


ಕಣವಿ ಅವರು ಜನಸಾಮಾನ್ಯರಿಗೆ ಸರಳವಾಗಿ ಕಾವ್ಯದ ರುಚಿ ಉಣಬಡಿಸಿದ ಶ್ರೇಷ್ಟಕವಿ ಮಾತ್ರವಲ್ಲ ಒಬ್ಬ ವಿಮರ್ಶಕರೂ ಕೂಡ.


ನಾಡಿನ ಅಪೂರ್ವ ಸಾಹಿತಿಗಳಲ್ಲಿ ಒಬ್ಬರಾದ ಚೆಂಬೆಳಕಿನ ಕವಿ ಡಾ. ಚೆನ್ನವೀರ ಕಣವಿ ಹೊಸಗನ್ನಡ ಕಾವ್ಯದ 2ನೇ ತಲೆಮಾರಿನ ಕವಿ. ಪ್ರಕೃತಿಲೀಲೆ, ಪ್ರಣಯ, ದಾಂಪತ್ಯ, ವಾತ್ಸಲ್ಯದಂತಹ ರಮ್ಯ ಪರಂಪರೆಯ ನವ್ಯ ವಿಷಯಗಳು ಅವರ ಕೃತಿಗಳಲ್ಲಿವೆ.

About Author

Leave a Reply

Your email address will not be published. Required fields are marked *