ಸಂತ ಶ್ರೇಷ್ಠ ಕವಿ ರವಿದಾಸ್ ಜೀ ಜಯಂತಿ ಆಚರಣೆ
1 min read
ಮೈಸೂರು,ಫೆ.16- ಸಂತ ಶ್ರೇಷ್ಠ ಕವಿ ರವಿದಾಸ್ ಜೀ ರವರ 572 ನೇ ಜಯಂತಿಯನ್ನು ನಗರದ ಭಾರತೀಯ ಜನತಾ ಪಾರ್ಟಿಯ ಕಾರ್ಯಲಯದಲ್ಲಿ ಆಚರಿಸಲಾಯಿತು.
ರವಿದಾಸ್ ಜೀ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಎಸ್ ಸಿ ಮೊರ್ಚಾ ರಾಜ್ಯ ಕಾರ್ಯದರ್ಶಿ ಪರಮಾನಂದ ರವಿದಾಸ್, 15 ರಿಂದ 16 ನೇ ಶತಮಾನದ ಅವಧಿಯಲ್ಲಿ ಭಕ್ತಿ ಚಳವಳಿಯ ಭಾರತೀಯ ಅತೀಂದ್ರಿಯ ಕವಿ-ಸಂತರಾಗಿದ್ದರು. ಅವರು ಕವಿ, ಸಮಾಜ ಸುಧಾರಕ ಮತ್ತು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರು ಎಂದು ಅವರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ನಗರ ಎಸ್ ಸಿ ಮೋರ್ಚಾ ಅಧ್ಯಕ್ಷ ಈಶ್ವರ್, ಗ್ರಾಮಾoತರ ಎಸ್ ಸಿ ಮೋರ್ಚಾ ಅಧ್ಯಕ್ಷ ಸಿಎಂ ಮಹಾದೇವಯ್ಯ, ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ್, ನರಸಿಂಹಮೂರ್ತಿ, ಕೃಷ್ಣಮೂರ್ತಿ, ಓ ಬಿ ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಜೋಗಿ ಮಂಜು, ಮಹಾನಗರ ಪಾಲಿಕೆ ಸದಸ್ಯರಾದ ರಮೇಶ್, ಬಿಲ್ಲಯ್ಯ, ಸೋಮಶೇಖರ್, ಅನಿಲ್ ಇತರರು ಉಪಸ್ಥಿತರಿದ್ದರು.