ಅಪಘಾತದಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದಾರೆ
1 min read
ಮೈಸೂರು: ಸಿದ್ದರಾಮಯ್ಯ ಅಮೃತಮಹೋತ್ಸವ ಮುಗಿಸಿ ದಾವಣಗೆರೆಯಿಂದ ಹಿಂದಿರುಗುವ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮರಣ ಹೊಂದಿದ ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ 51 ವರ್ಷದ ಫಸಿ ಉದ್ದಿನ್ ಮನೆಗೆ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಇದೇ ಆಗಸ್ಟ್ 7 ರಂದು ಖುದ್ದು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ.

ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ. ಬಿಜೆ ವಿಜಯ್ ಕುಮಾರ್ ಮಾಜಿ ಮಂತ್ರಿ ಹಾಗೂ ಹಾಲಿ ಶಾಸಕರಾದ ಬೆಂಗಳೂರಿನ ಜಮೀರ್ ಅಹ್ಮದ್ ಅವರಿಗೆ ಕರೆ ಮಾಡಿ ಮೃತ ಬಡಕುಟುಂಬಕ್ಕೆ ಸೇರಿದವರಾಗಿದ್ದು, ಪತ್ನಿ ಹಾಗೂ 5 ಮಕ್ಕಳ ಭವಿಷ್ಯದ ನಿರ್ವಹಣೆಗೆಯ ಬಗ್ಗೆ ವಿವರಿಸಿದಾಗ ಸ್ವತಃ ಜಮೀರ್ ಅಹ್ಮದ್ 5,00.000 ಪರಿಹಾರ ಘೋಷಿಸಿದ್ದಾರೆ. ಆಗಸ್ಟ್ 17 ರಂದು ಹಲಗನಹಳ್ಳಿ ಮೃತರ ಕುಟುಂಬಕ್ಕೆ ಖುದ್ದು ಭೇಟಿ ನೀಡಿ ಸಿದ್ದರಾಮಯ್ಯನವರ ಪರವಾಗಿ ಐದು ಲಕ್ಷ ಪರಿಹಾರದ ಚೆಕ್ ವಿತರಿಸಲಿದ್ದಾರೆ. ಹಾಗೆಯೇ ಭವಿಷ್ಯದಲ್ಲಿ ಕುಟುಂಬದ ತುರ್ತು ಅನಿವಾರ್ಯತೆ ಇದ್ದಾಗ ಅಂತ ವಿಚಾರಗಳಿಗೂ ನಾನು ಆ ಕುಟುಂಬಕ್ಕೆ ಸ್ಪಂದಿಸುವುದಾಗಿ ದೂರವಾಣಿ ಕರೆ ಮೂಲಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ತಿಳಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಕೀಲ ಶಿವಪ್ರಸಾದ ತಿಳಿಸಿದ್ದಾರೆ.