ನಿಂತಿದ್ದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿ: ಮೂವರು ಸಾವು
1 min read
ಪಿರಿಯಾಪಟ್ಟಣ: ನಿಂತಿದ್ದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿಯಾಗಿ ಮೂವರ ಸಾವನ್ನಪ್ಪಿದ ಘಟನೆ ಮೈಸೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲ್ಲೂಕು ಕಂಪ್ಲಾಪುರ ಬಳಿ ಬೆಳಗಿನ ಜಾವ 4.30ಕ್ಕೆ ಘಟನೆ ನಡೆದಿದ್ದು, ರಸ್ತೆ ಬದಿಯಲ್ಲಿ ನಿಂತಿದ್ದ ಟ್ರ್ಯಾಕ್ಟರ್ಗೆ ಎರಡು ಕಾರು ಡಿಕ್ಕಿಯಾಗಿದೆ. ಪಿರಿಯಾಪಟ್ಟಣದಿಂದ ಹುಣಸೂರಿಗೆ ತೆರಳುವಾಗ ಅಪಘಾತವಾಗಿದೆ. ಎರಡು ಕಾರು ಡಿಕ್ಕಿಯಾಗಿ 3 ಮಂದಿ ಸಾವನ್ನಪ್ಪಿ ಮೂವರಿಗೆ ತೀವ್ರಗಾಯಗಳಾಗಿದೆ.
ಮುದಾಸೀರ್, ಮುಜಾಯಿದ್ ಅಹಮದ್ ಪಾಷಾ ಮೃತಪಟ್ಟ ದುರ್ದೈವಿಗಳು. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ಪರಿಶೀಲನೆ.
