ಆನೆಗಳ ಸಹಾಯದಿಂದ ಹುಲಿ ಸೆರೆಗೆ ಕೊಂಬಿಂಗ್ ಕಾರ್ಯಚರಣೆ ಆರಂಭಿಸಿದ ಅರಣ್ಯ ಇಲಾಖೆ
1 min read
ಅಂತರಸಂತೆ : ಕಳೆದ 4 ದಿನಗಳಿಂದ ಅಂತರಸಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಬೋನು ಇರಿಸಿ ಸೆರೆ ಹಿಡಿಯುವ ಅರಣ್ಯ ಇಲಾಖೆಯ ಪ್ರಯತ್ನ ವಿಫಲವಾಗಿದ್ದು, ಇದೀಗಾ ಆನೆಗಳ ಸಹಾಯದಿಂದ ಹುಲಿ ಸೆರೆಗೆ ಕೊಂಬಿಂಗ್ ಕಾರ್ಯಚರಣೆ ಆರಂಭಿಸಿದ್ದಾರೆ.
ತಾಲ್ಲೂಕಿನ ಅಂತರಸಂತೆ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡಿತು ಎನ್ನಲಾದ ಹುಲಿಯ ಸೆರೆಗೆ ಅರಣ್ಯ ಇಲಾಖೆ ಬೋನು ಇರಿಸಿ ಕಾರ್ಯಚರಣೆ ಆರಂಭಿಸಿತ್ತು. ಆದರೆ ಹುಲಿ ಬೋನಿಗೆ ಬೀಳದ ಪರಿಣಾಮ ಬುಧವಾರ ಮಹೇಂದ್ರ ಮತ್ತು ಅರ್ಜುನ ಸಾಕಾನೆಗಳ ಸಹಾಯದಿಂದ ಕೊಂಬಿಂಗ್ ಕಾರ್ಯಚರಣೆ ಆರಂಭಿಸಿದ್ದೆ.
ಸ್ಥಳಕ್ಕೆ ಎಪಿಸಿಸಿಎಫ್ ಜಗತ್ ರಾಮ್, ಆರ್ ಎಫ್ಒ ಸಿದ್ದರಾಜು, ಬೀಚನಹಳ್ಳಿ ಪಿಎಸ್ಐ ಜಯಪ್ರಕಾಶ್, ಡಿಆರ್ ಎಫ್ಒಗಳಾದ ಆಂಥೋನಿ, ಮಂಜು ಆರಾಧ್ಯ, ಎನ್ ಜಿಒ ಪ್ರತಿನಿಧಿಗಳಾದ ಧನುಷ್, ಸೋಮೇಶ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಗ್ರಾಮಸ್ಥರು ಹಾಜರಿದ್ದರು.