ಎತ್ತಿನ ಗಾಡಿಯ ಮೇಲೆ ಮುರಿದು ಬಿದ್ದ ಮರದ ಕೊಂಬೆ: ಹೋರಿ ಸಾವು

1 min read

ಎಚ್.ಡಿ.ಕೋಟೆ: ಗಾಳಿ ಮಳೆಯಿಂದಾಗಿ ಎತ್ತಿನ ಗಾಡಿಯ ಮೇಲೆ ಮರದ ಕೊಂಬೆ ಮುರಿದು ಬಿದ್ದು ಹೋರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನಲ್ಲಿ ನಡೆದಿದೆ.

ಎಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದ ಬಳಿ ಇಂದು ಸಂಜೆ ಘಟನೆ ಸಂಭವಿಸಿದೆ. ಮುರಿದು ಬಿದ್ದ ಮರದ ಕೊಂಬೆಗೆ ಸುಲುಕಿ ಗಾಡಿ ಎಳೆದುತರುತ್ತಿದ್ದ ಹೋರಿ ಸ್ಥಳದಲ್ಲೇ ಮೃತಪಟ್ಟಿದೆ. ಮತ್ತೊಂದು ಹೋರಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದೆ.

ಹೈರಿಗೆ ಗ್ರಾಮದ ಜವರಯ್ಯ ಎಂಬುವವರಿಗೆ ಸೇರಿದ ಹೋರಿ ಇದಾಗಿದೆ. ಜವರಯ್ಯನವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜವರಯ್ಯ ಅವರು ಗಾಳಿ ಮಳೆಯಿಂದ ರಕ್ಷಣೆ ಪಡೆಯಲು ಎತ್ತಿನ ಗಾಡಿ ಜೊತೆ ರಸ್ತೆ ಮಾರ್ಗವಾಗಿ ಎತ್ತಿನ ಗಾಡಿ ಜೊತೆ ಸಾಗಿ ಬರುತ್ತಿದ್ದರು. ಈ ವೇಳೆ ಮರದ ತಳ ಭಾಗಕ್ಕೆ ಆಗಮಿಸುತ್ತಿದ್ದಂತೆಯೇ ಕೊಂಬೆ ಮುರಿದು ಬಿದ್ದು ಘಟನೆ ಸಂಭವಿಸಿದೆ. ಎಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಅವಗಡ.

About Author

Leave a Reply

Your email address will not be published. Required fields are marked *