ಕೃಷ್ಣರಾಜ ಕ್ಷೇತ್ರದ 59ನೇ ವಾರ್ಡ್’ನ ವಿವಿಧ ಭಾಗಗಳಲ್ಲಿ ನೂತನ ಕಾಮಗಾರಿಗಳಿಗೆ ಚಾಲನೆ
1 min read
ಮೈಸೂರು: ಇಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ ಅವರು ಹಾಗೂ ಪೂಜ್ಯ ಮಹಾಪೌರರು ಹಾಗೂ ಸ್ಥಳೀಯ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಸುನಂದಾ ಪಾಲನೇತ್ರ ರವರ ನೇತೃತ್ವದಲ್ಲಿ ವಾರ್ಡ್ ನಂಬರ್ 59ರ ವಿವೇಕಾನಂದನಗರ ಭಾಗದ ಹಾಗೂ ವಾರ್ಡ್ ನಂಬರ್ 57ರ ಕುವೆಂಪುನಗರದ ಎಲ್ಲಾ ಪ್ರದೇಶಗಳಿಗೂ ವಾರ್ಡಿನ ಬೂತ್ ಅಧ್ಯಕ್ಷರು ಮನೆಗಳಿಗೆ ತೆರಳಿ ಮತ ಪಾಲಕರ ಕಾರ್ಯ ಮತ್ತು ಸಂಘಟನೆ ಹಾಗೂ ಸ್ಥಳೀಯ ನಿವಾಸಿಗಳ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ಭೇಟಿ ನೀಡಲಾಯಿತು ಹಾಗೂ ಇದೇ ಸಂದರ್ಭದಲ್ಲಿ ಈ ವಾರ್ಡ್ ನ ಭಾಗದಲ್ಲಿನ ಅಭಿವೃದ್ಧಿ ಹಿತದೃಷ್ಟಿಯಿಂದ ಹಲವು
ಗುದ್ದಲಿ ಪೂಜೆ ಕಾರ್ಯಕ್ರಮಗಳನ್ನು ನಡೆಸಲಾಯಿತು.
59ನೇ ವಾರ್ಡ್ ನ ಈ ಕೆಳಕಂಡ ಭಾಗಗಳಲ್ಲಿ ನೂತನ ಕಾಮಗಾರಿಗಳಿಗೆ ಚಾಲನೆ

1) ಕುವೆಂಪುನಗರದ 2ನೇ ಹಂತದ,
3ನೇ ಮುಖ್ಯ ರಸ್ತೆ ಡಾಂಬರಿಕಾರಣ* ಕಾಮಗಾರಿಗೆ ಚಾಲನೆ
2) ಕುವೆಂಪುನಗರದ M-ಬ್ಲಾಕ್ 6ನೇ ಕ್ರಾಸ್ ನಲ್ಲಿರುವ ‘ಭಾರತ ಮಾತ ಉದ್ಯಾನವನದ’* ಅತ್ತಿರ ನೂತನ “ಶುದ್ಧ ಕುಡಿಯುವ ನೀರಿನ” ಘಟಕದ ಭೂಮಿ ಪೂಜೆಗೆ ಚಾಲನೆ.
3)ವಿವೇಕಾನಂದನಗರದ ವೃತ್ತದ ಅತ್ತಿರ 8ನೇ ಕ್ರಾಸ್ ನಲ್ಲಿರುವ ‘ಕಲ್ಯಾಣ ಉದ್ಯಾನವನದಲ್ಲಿ’
“ಶುದ್ಧ ಕುಡಿಯುವ ನೀರಿನ ಘಟಕಕ್ಕೆ” ಚಾಲನೆ.
4)ವಿವೇಕಾನಂದ ವೃತದ ಮುಖ್ಯ ರಸ್ತೆಯ ವಾಣಿ ವಿಲಾಸ್ ನೀರು ಸರಬರಾಜು ಕಚೇರಿ ಹತ್ತಿರದ ನಾಗರೀಕರ ವೃತ್ತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ವಾರ್ಡ್ ನಂಬರ್ 57 ಮತ್ತು ವಾರ್ಡ್ ನಂಬರ್ 59ರ ಒಟ್ಟು 16 ಬೂತ್ ಅಧ್ಯಕ್ಷರುಗಳ ಮನೆ ಭೇಟಿ ನೀಡಿ ಬೂತ್ ಅಧ್ಯಕ್ಷರು ಮನೆಗಳಿಗೆ ನಾಮಫಲಕವನ್ನು ಅಳವಡಿಸಿ ಆಯಾ ಪ್ರದೇಶದ ನಿವಾಸಿಗಳೊಂದಿಗೆ ಸಂವಾದ ನಡೆಸಿ ಪೇಜ್ ಕಮಿಟಿಗಳನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ಬೆಳಗ್ಗೆ 7.30 ಗಂಟೆಯಿಂದ ನಿರಂತರವಾಗಿ ಎಲ್ಲ ಬೂತ್ ಅಧ್ಯಕ್ಷರು ಮನೆಗಳನ್ನು ಭೇಟಿ ನೀಡಿ ಪೇಜ್ ಕಮಿಟಿಗಳನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ಬೆಳಗ್ಗೆ 7.30 ಗಂಟೆಯಿಂದ ನಿರಂತರವಾಗಿ ಎಲ್ಲ ಬೂತ್ ಅಧ್ಯಕ್ಷರು ಮನೆಗಳನ್ನು ಭೇಟಿ ಮಾಡಲಾಗುತ್ತಿದೆ ಬಹಳ ವರ್ಷಗಳ ಕಾಲದಿಂದ ವಾರ್ಡ್ ನಂಬರ್ 57 ಹಾಗೂ ವಾರ್ಡ್ ನಂಬರ್ 59 ಭಾರತೀಯ ಜನತಾ ಪಕ್ಷಕ್ಕೆ ನಿರಂತರವಾಗಿ ಬೆಂಬಲ ನೀಡುತ್ತಿದೆ ನಗರಪಾಲಿಕೆ ವಿಧಾನಸಭೆ ಚುನಾವಣೆಗಳಲ್ಲಿ ಈ ವಾರ್ಡಿನ ಜನರು ಸದಾ ಭಾರತೀಯ ಜನತಾ ಪಾರ್ಟಿಗೆ ಆಶೀರ್ವಾದ ಮಾಡುತ್ತಾರೆ. ಭಾರತದ ಸುವರ್ಣ ವರ್ಷದ ಅಂಗವಾಗಿ ಇಡೀ ವಾರ್ಡ್ಗಳಲ್ಲಿ ಬರುವಂತಹ ರಸ್ತೆಗಳ ಅಭಿವೃದ್ಧಿ, ಆಗಸ್ಟ್ 15 ರ ಒಳಗೆ ಎಲ್ಲಾ ಮನೆಗಳಿಗೆ ಬೋರ್ವೆಲ್ ರಹಿತ ವಾದಂತಹ ಕುಡಿಯುವ ನೀರಿನ ಸರಬರಾಜು ಹಾಗೂ ಸ್ವಂತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಇಂಥಹ ಗುರಿಗಳನ್ನು ಕಳೆದೆರಡು ವರ್ಷಗಳ ಹಿಂದೆ ಸಂಕಲ್ಪಿಸಿ ಇದಕ್ಕೆ ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳು ನಿರಂತರವಾಗಿ ಶ್ರಮ ವಹಿಸಿರುವುದರಿಂದ ನಮ್ಮ ಗುರಿಯನ್ನು ತಲುಪಲು ಸಹಾಯವಾಗುತ್ತಿದೆ .

ಆಯಾ ವಾರ್ಡಿನಲ್ಲಿ ಬೂತ್ ನಲ್ಲಿ ಅಧ್ಯಕ್ಷರು, ಕಾರ್ಯದರ್ಶಿಗಳು, ಬಿಎಲ್ಏ-2 ಗಳು ಪೇಜ್ ಪ್ರಮುಖ ಗಳು ಇವರುಗಳ ಮುಖಾಂತರ ಆಯಾ ಬೂತಿನಲ್ಲಿ ಎಲ್ಲಾ ಮನೆಮನೆಗೆ ಸಂಪರ್ಕ ಹೊಂದುವುದರ ಜೊತೆಗೆ ಸರ್ಕಾರಿ ಅಧಿಕಾರಿಗಳನ್ನು ಸರ್ಕಾರಿ ಅಧಿಕಾರಿಗಳಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಅವರವರ ಮನೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮತದಾರರ ಪಟ್ಟಿಯಲ್ಲಿ ಒಂದು ಪೇಜಿನಲ್ಲಿ ಸುಮಾರು ಅಂದಾಜು 30 ಮತದಾರರ ವಿವರ ಇರುತ್ತದೆ ಇದರಲ್ಲಿ ಒಬ್ಬರನ್ನು ಪೇಜ್ ಪ್ರಮುಖ್ ಎಂದು ನೇಮಿಸಿ ಮತದಾರರ ಸಂಪರ್ಕ ಹೊಂದುವ ಮೂಲಕ ಸರ್ಕಾರದಿಂದ ಸಿಗಬಹುದಾದಂತ ಯೋಜನೆಗಳನ್ನು ಅಧಿಕಾರಿಗಳಿಂದ ಗೌರ್ಮೆಂಟ್ ಆನ್ ವ್ಹೀಲ್ಸ್ ಎಂಬ ಶೀರ್ಷಿಕೆಯಡಿಯಲ್ಲಿ ಸಾರ್ವಜನಿಕರಿಗೆ ಕಲ್ಪಿಸುವ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ನಡೆಯುತ್ತಿದೆ.
ಇವತ್ತಿನ ದಿನಗಳಲ್ಲಿ ಸರ್ಕಾರಿ ಯೋಜನೆಗಳನ್ನು ಸಾರ್ವಜನಿಕರಿಗೆ ಸಿಗುವಂತಹ ಕ್ಷೇತ್ರದಲ್ಲಿ ಭ್ರಷ್ಟಾಚಾರ ಇಲ್ಲದೆ ಫಲಾನುಭವಿಗಳಿಗೆ ಸಿಗುವುದು ಬಹಳ ಕಷ್ಟಕರವಾಗಿದೆ ಆದರೆ ನಮ್ಮ ಕ್ಷೇತ್ರದಲ್ಲಿ ಕಾರ್ಯಕರ್ತರೇ ಸ್ವತಹ ಖುದ್ದಾಗಿ ಅಧಿಕಾರಿಗಳ ಸಹಾಯದೊಂದಿಗೆ ನೇರವಾಗಿ ಫಲಾನುಭವಿಗಳಿಗೆ ಯೋಜನೆಗಳನ್ನು ಕಲ್ಪಿಸುತ್ತಿದ್ದಾರೆ.

ಇದೊಂದು ವಿಭಿನ್ನವಾದ ಯೋಜನೆ ಸರ್ಕಾರವನ್ನೇ ಸಾರ್ವಜನಿಕರ ಮನೆಬಾಗಿಲಿಗೆ ಕರೆದುಕೊಂಡು ಹೋಗುವಂತಹ ಯೋಜನೆ ಇದೇ ಮೊದಲು ಇದು ದೇಶದಲ್ಲಿ ಮಾದರಿ ಯೋಜನೆಯಾಗಿದ್ದು .
ಸಂಘಟನಾತ್ಮಕ ವಿಚಾರದಲ್ಲಿ ಕೃಷ್ಣರಾಜ ಕ್ಷೇತ್ರ ಮಾದರಿ ಕ್ಷೇತ್ರ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ ಇದೆಲ್ಲದಕ್ಕೂ ಕಾರಣೀಭೂತರಾದ ನಮ್ಮ ನೆಚ್ಚಿನ ಕಾರ್ಯಕರ್ತರಿಗೆ ಅಭಿನಂದನೆಗಳು ಇದರೊಂದಿಗೆ ನಮ್ಮ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ಅಧಿಕಾರಿಗಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದು ನಿಮಗೆ ಈಗಾಗಲೇ ತಿಳಿಸಿರುವಂತೆ “ಸಂಘಟನೆ, ಸರ್ಕಾರ, ಹಾಗೂ ಸುವಿಧ” .ಈ ಯೋಜನೆಯ ಎಲ್ಲಾ ಮಾಹಿತಿಯುಳ್ಳ ಒಂದು ಪುಸ್ತಕವನ್ನು ತಯಾರಿಸಿದ್ದು ಇದನ್ನು ಹಿಂದಿ ಭಾಷೆಗೆ ತರ್ಜುಮೆ ಮಾಡಿ ಹೊಸಪೇಟೆಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆಪಿ ನಡ್ಡಾ ಅವರು ಬಂದಂತ ಸಮಯದಲ್ಲಿ ಅವರ ಮುಖಾಂತರ ಈ ಪುಸ್ತಕದ ಬಿಡುಗಡೆ ಮಾಡಿಸಲಾಯಿತು
ಮುಂದಿನ ಮೂರು ವರ್ಷಗಳ ಕಾಲ ಬೂತ್, ವಾರ್ಡ್ ಅಧ್ಯಕ್ಷರು ನಿರಂತರವಾಗಿ ತಮ್ಮ ಬೂತಿನ ನಿವಾಸಿಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಅವರ ಆಗುಹೋಗುಗಳಲ್ಲಿ ತೊಡಗಿಸಿಕೊಂಡು ಆರೋಗ್ಯ ಯೋಗ ಕ್ಷೇಮ ವಿಚಾರಿಸಿಕೊಂಡು ವಿಶ್ವಾಸ ಬೆಳಸುವ ಸಂಕಲ್ಪವನ್ನು ಮಾಡಬೇಕಿದೆ
ಈ ಯೋಜನೆಯಲ್ಲಿ ಬಹುಮುಖ್ಯ ವಿಷಯವೇನೆಂದರೆ ಕೇವಲ ಶಾಸಕ, ನಗರ ಪಾಲಿಕೆ ಸದಸ್ಯ, ಜನ ಚುನಾಯಿತ ಪ್ರತಿನಿಧಿ ಮಾತ್ರ ಸಾರ್ವಜನಿಕರ ಕೆಲಸ ಮಾಡವುದಲ್ಲ ಸಾಮಾನ್ಯ ಕಾರ್ಯಕರ್ತರು ಸಹ ಸಾರ್ವಜನಿಕರ ಕೆಲಸ ಮಾಡಲು ಅವಕಾಶ ಈ ಯೋಜನೆಯಲ್ಲಿ ಸಿಗುತ್ತದೆ ಇದರ ಮೂಲಕ ರಾಜ್ಯದ, ದೇಶದ ಸೇವೆ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಸದರಿ ಕರ್ಯಕ್ರಮದಲ್ಲಿ ಮೈಸೂರು ನಗರದ ಪೂಜ್ಯ ಮಹಾಪೌರರಾದ ಶ್ರೀಮತಿ ಸುನಂದಾ ಪಾಲನೇತ್ರ ರವರು, ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್, ಬಿಜೆಪಿ ಉಪಾಧ್ಯಕ್ಷರಾದ ಸಂತೋಷ್ ಶಂಭು, ಕಾರ್ಯದರ್ಶಿ ಗಿರೀಶ್, ಆಶ್ರಯ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ಪ್ರಮುಖರಾದ ಸಂಪತ್, ಡಿಪೋ ರವಿ, ಮೈ ಪು ರಾಜೇಶ್, ರವಿ, ಮಾಯಾ ಜಗದೀಶ್, ಶ್ರೀಮತಿ ಸುವರ್ಣಮ್ಮ, ಆದರ್ಶ, ಪ್ರದೀಪ್ ಪ್ರಸಾದ್, ನಗರಪಾಲಿಕಾ ಅಧಿಕಾರಿಗಳು, ಬೂತ್ ಅಧ್ಯಕ್ಷರುಗಳು ಹಾಜರಿದ್ದರು.