ಅಧಿಕಾರಿಗಳಿಗೆ ಚಳಿ ಬಿಡಿಸಿದ ಶಾಸಕ ಎಂ.ಅಶ್ವಿನ್ ಕುಮಾರ್

1 min read

ತಲಕಾಡು: 8 ವರ್ಷದಿಂದ ಅಂಗನವಾಡಿ ಕೇಂದ್ರಕ್ಕೆ ವಿದ್ಯುತ್ ಪೂರೈಸದ ಹಿನ್ನಲೆ ಅಧಿಕಾರಿಗಳಿಗೆ ಶಾಸಕ ಎಂ.ಅಶ್ವಿನ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.

CDPO ಬಸವರಾಜು, PDO ಧರಣಿಶ್, ಯೋಜನಾಧಿಕಾರಿ ಮಹದೇವಯ್ಯ ರನ್ನ ತರಾಟೆಗೆ ತೆಗೆದುಕೊಂಡರು ಅಶ್ವಿನ್ ಕುಮಾರ್.

ತಲಕಾಡಿನ ಅಂಗನವಾಡಿ ಕೇಂದ್ರಕ್ಕೆ 8 ವರ್ಷದಿಂದ ವಿದ್ಯುತ್ ಪೂರೈಕೆ ಇಲ್ಲ ಎಂದು ಶಾಸಕರಿಗೆ ತಿಳಿಸಿದ ಗ್ರಾಮಸ್ಥರು. ಸ್ಥಳದಲ್ಲೇ ಇದ್ದ ಅಧಿಕಾರಿಗಳ ಬಳಿ ಮಾಹಿತಿ ಕೇಳಿದ ಅಶ್ವಿನ್ ಕುಮಾರ್. ಶಾಸಕರ ಪ್ರಶ್ನೆಗೆ ಉತ್ತರ ತಡಬಡಾಯಿಸಿದ CDPO ಬಸವರಾಜು. ನಾಚಿಕೆ ಮಾನ ಮರ್ಯಾದೆ ಇಲ್ವಾ ನಿಮಗೆ ಎಂದು ಗದರಿದರು. ಯಾವ್ ತರ ಕೆಲಸ ಮಾಡ್ತೀರಿ ನೀವು. 8 ವರ್ಷದಿಂದ ಅಂಗನವಾಡಿ ಕೇಂದ್ರಕ್ಕೆ ವಿದ್ಯುತ್ ಸಪ್ಲೈ ಕೊಡಿಸದ ನೀವು. ಏನ್ ಕೆಲಸ ಮಾಡ್ತಿದೀರಾ ಎಂದರು.

PDO, CDPO, ಯೋಜನಾಧಿಕಾರಿಗಳ ಮೇಲೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ತಹಸೀಲ್ದಾರ್ ಗೆ ತಾಕೀತು ಮಾಡಿದರು.

About Author

Leave a Reply

Your email address will not be published. Required fields are marked *