ಶಾಸಕ ಹರೀಶ್ಗೌಡರಿಗೆ ‘ಬಂಡೆ’ ಬಿರುದು!
1 min read
ಮೈಸೂರು : ಮೈಸೂರು ನಗರ ಕಾಂಗ್ರೆಸ್ ಮತ್ತು ಚಾಮರಾಜ ಕ್ಷೇತ್ರ ಪ್ರಚಾರ ಸಮಿತಿಯ ವತಿಯಿಂದ, ನೂತನವಾಗಿ ಶಾಸಕರಾಗಿ ಆಯ್ಕೆಯಾದಂತಹ ಕೆ ಹರೀಶ್ ಗೌಡರವರಿಗೆ ಮೈಸೂರು ಬಂಡೆ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಚಿತ್ರದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಮೂರ್ತಿಯವರು, ಪ್ರಚಾರ ಸಮಿತಿ ನಗರ ಅಧ್ಯಕ್ಷರಾದ ರಘುರಾಜೆ ಅರಸ್, ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಜಗದೀಶ್ ಆರ್, ಕೆಪಿಸಿಸಿ ಸಂಯೋಜಕರಾದ ಸಿ ಎಸ್ ರಘು, ನಗರ ಪಾಲಿಕೆ ಸದಸ್ಯರಾದ ಗೋಪಿ ಮತ್ತು ಗುಂಡಣ್ಣ ರವರು ಚಿತ್ರದಲ್ಲಿದ್ದಾರೆ.