PSI ಪರೀಕ್ಷೆ ಹಗರಣದಲ್ಲಿ 300 ಕೋಟಿ ಹಣ ಪಡೆಯಲಾಗಿದೆ: ಸಿದ್ದರಾಮಯ್ಯ ಆರೋಪ
1 min read
ಮೈಸೂರು: ಪಿಎಸ್ಐ ಪರೀಕ್ಷೆ ಹಗರಣದಲ್ಲಿ ಸುಮಾರು 300 ಕೋಟಿ ಹಣ ಪಡೆಯಲಾಗಿದೆ ಅಂತ ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಒಬ್ಬೊಬ್ಬ ಅಭ್ಯರ್ಥಿಯಿಂದ 40 ಲಕ್ಷದಿಂದ 1 ಕೋಟಿವರೆಗೂ ವಸೂಲಿ ಮಾಡಲಾಗಿದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ದರ್ಶನ್ ಗೌಡ ಯಾವ ರೀತಿ ಅಕ್ರಮ ಮಾಡಿದ ಎಂದು ವಿವರಿಸಿದ ಸಿದ್ದರಾಮಯ್ಯ ಅವರು ಮೊದಲ ಪತ್ರಿಕೆಯಲ್ಲಿ ಕಡಿಮೆ ಅಂಕ, ಎರಡನೇ ಪತ್ರಿಕೆಯಲ್ಲಿ ಹೆಚ್ಚು ಅಂಕ, ಆತ ಕಿವಿಗೆ ಬ್ಲೂ ಟೂಥ್ ಹಾಕ್ಕೊಂಡು ಬರೆದಿದ್ದಾರೆ. ಖಾಲಿ ಪೇಪರ್ ಕೊಟ್ಟು ಆಮೇಲೆ ಬರೆಸಿದ್ದಾರೆ. ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಇದು ಮಾತ್ರವಲ್ಲ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಇದಕ್ಕೆಲ್ಲಾ ಯಾರು ಜವಾಬ್ದಾರರು ಅದಕ್ಕೆ ನ್ಯಾಯಾಂಗ ತನಿಖೆಯಾಗಬೇಕು. ಸತ್ಯ ಹೊರಗೆ ಬರಬೇಕಾದರೆ ಕಳ್ಳರಿಗೆ ಶಿಕ್ಷೆಯಾಗಬೇಕಾದರೆ ನಿಷ್ಪಕ್ಷಪಾತ ತನಿಖೆಯಾಗಬೇಕು ಅಂತ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ತಿರುಗುತ್ತಾರೆ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ ವಿಚಾರ: ಕಳ್ಳರು ಇನ್ನೇನು ಹೇಳುತ್ತಾರೆ ? ಕಳ್ಳ ಸತ್ಯ ಒಪ್ಪಿಕೊಳ್ಳುತ್ತಾನಾ ? ಸಚಿವ ಎಂ ಎಲ್ ಸಿಗಳು ಪತ್ರ ಬರೆದಾಗ ಏಕೆ ತನಿಖೆ ಮಾಡಲಿಲ್ಲ. ಮರು ಪರೀಕ್ಷೆ ಏಕೆ ಮಾಡಿದ್ರಿ ? ವರ್ಗಾವಣೆ ಏಕೆ ಮಾಡಿದ್ರಿ ಇವರು ಮಂತ್ರಿಯಾಗಲು ಲಾಯಕ್ಕಾ ನಾಲಾಯಕ್ಕಾ ? ಒಬ್ಬ ಸಚಿವ ಪತ್ರ ಬರೆದಿದ್ದಾ ಬೇರೆ ಅವರಲ್ಲ ಮೊದಲ ಇಲ್ಲ ಅಂದು ಈಗ ಅಕ್ರಮ ಆಗಿದೆ ಅಂದರೆ.
ರಾಜ್ಯದಲ್ಲಿ ಮನೆ ನೀಡುವ ವಿಚಾರ: ನಾನು ಕೇಳಿದ್ದು ಜನರಿಗೆ ಕಟ್ಟಿಕೊಟ್ಟ ಮನೆ ಬಗ್ಗೆ ನೀವು ಕಟ್ಟಿಸಿಕೊಂಡ ಮನೆಗಳ ಬಗ್ಗೆ ಅಲ್ಲ ಅಂತ ವಸತಿ ಸಚಿವ ವಿ ಸೋಮಣ್ಣಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ನಾನು ಕಟ್ಟಿಸಿದ ಮನೆಯನ್ನು ನಾನೇ ಏಕೆ ನೋಡಲಿ ನೀವು ಕಟ್ಟಿಸಿರುವ ಮನೆ ಬಗ್ಗೆ ಒಂದು ದಾಖಲೆ ತಂದು ಕೊಡಿ ಸಾಕು. ಇವರು ಯಡಿಯೂರಪ್ಪ ಅವಧಿಯಲ್ಲಾಗಲಿ ಬಸವರಾಜ ಬೊಮ್ಮಾಯಿ ಅವಧಿಯಾಗಲಿ ಒಂದು ಮನೆ ನೀಡಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬಸವರಾಜ ಬೊಮ್ಮಾಯಿ ಆಯ್ಕೆಯಾದ ಸಿಎಂ ಅಲ್ಲ: ಬಸವರಾಜ ಬೊಮ್ಮಾಯಿ ನೇಮಕವಾದ ಸಿಎಂ ಯಡಿಯೂರಪ್ಪ ಸಹಾ ನೇಮಕವಾದ ಸಿಎಂ. ಇವರಿಗೆ ಜನ ಬಹುಮತ ಕೊಟ್ಟಿರಲಿಲ್ಲ. ಹಣ ಬಳಸಿ ಚುನಾವಣೆ ಮಾಡಿ ಅಧಿಕಾರಕ್ಕೆ ಬಂದರು. ಇವರು ಯಾವ ರೀತಿ ಬಂದರು ಅಂತಾ ಗೊತ್ತಿದೆ ಎಂದರು.
ರಾಜ್ಯದಲ್ಲಿ ಅಜಾನ್ ವಿಚಾರ: ಹಗರಣವನ್ನು ಪಕ್ಕಕ್ಕೆ ಸರಿಸಲು ಈ ರೀತಿ ವಿಚಾರ, ಕೋಮುವಾದಿ ವಿಚಾರ ಇಟ್ಟುಕೊಂಡು ಹೋಗುತ್ತಾರೆ. ಇವರ ಬಳಿ ಮಾಡಿರುವ ಕೆಲಸ ಸಾಧನೆ ಏನು ಇಲ್ಲ ಅದಕ್ಕಾಗಿ ಈ ರೀತಿಯ ವಿಚಾರಗಳನ್ನು ತರುತ್ತಾರೆ ಎಂದು ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ಪಿ ಎಸ್ ಐ ಪರೀಕ್ಷೆ ಅಕ್ರಮ ವಿಚಾರ: ಇದರಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ರಾಜಕಾರಣಿಗಳು ಇದ್ದಾರೆ ಸರ್ಕಾರವು ಭಾಗಿಯಾಗಿದೆ. ಹಿರಿಯ ಅಧಿಕಾರಿಗಳು ವರ್ಗಾವಣೆ ಆಗಿದ್ದಾರೆ. ಅರಗ ಜ್ಞಾನೇಂದ್ರ ನಡೆದುಕೊಂಡಿರುವ ರೀತಿ ಅಕ್ರಮ ನಡೆದಿದೆ ಅಂತಾ ಅವರ ಪಕ್ಷದವರೇ ಹೇಳಿದ್ದರು. ಆಗ ಅಕ್ರಮ ನಡೆದಿಲ್ಲ ಅಂತಾ ಹೇಳಿದ್ದರು. ಬೇಜವಬ್ದಾರಿ ತನ ಸದನಕ್ಕೆ ಸುಳ್ಳು ಹೇಳಿದ್ದಾರೆ. ಸದನವನ್ನು ತಪ್ಪು ದಾರಿಗೆ ಎಳೆದಿದ್ದಾರೆ. ಅಧಿಕಾರದಲ್ಲಿ ಒಂದು ಕ್ಷಣ ಇರಲು ಲಾಯಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಎಸ್ಐ ಪರೀಕ್ಷೆ ಹಗರಣವನ್ನ ಸರ್ಕಾರ ಇದನ್ನ ಮುಚ್ಚಿಹಾಕಲು ಪ್ರಯತ್ನಿಸಿತ್ತು. ಈಗ ಬಂಧಿಸಿರುವವರೆಲ್ಲಾ ಮಧ್ಯವರ್ತಿಗಳು. ಮುಖ್ಯವಾದವರನ್ನು ಪತ್ತೆ ಹಚ್ಚಬೇಕಿದೆ. ಪೊಲೀಸರು ಸರ್ಕಾರದ ವಿರುದ್ದ ತನಿಖೆ ಮಾಡಲು ಸಾಧ್ಯವಿಲ್ಲ. ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ವಹಿಸಬೇಕು. ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ವೀಕ್ಷಣೆಯಲ್ಲಿ ತನಿಖೆಯಾಗಬೇಕು ಎಂದರು.
ಪಿಎಸ್ಐ ಪ್ರಕರಣದಲ್ಲಿ ಸಚಿವ ಅಶ್ವತ್ಥ ನಾರಾಯಣ್ ಕಡೆಯವರು ಇಬ್ಬರಿದ್ದಾರೆ. ಒಂದು ದರ್ಶನ್ ಗೌಡ ಇನ್ನೊಬ್ಬ ನಾಗೇಶ್ ಗೌಡ ಅವರಿಬ್ಬರು ಅಶ್ವಥ್ ನಾರಾಯಣ್ ಸಂಬಂಧಿಕರು. ಇವರಿಗೆ ಅಂಕಗಳನ್ನು ಜಾಸ್ತಿ ಕೊಡಲಾಗಿದೆ. ಅವರನ್ನು ಕರೆದು ಬಿಟ್ಟು ಬಿಟ್ಟಿದ್ದಾರೆ. ಅವರು ಏನು ಹೇಳಿಕೆ ಕೊಟ್ಟಿದ್ದಾರೆ ಬಹಿರಂಗಪಡಿಸಿ ಅಂತ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ
ಕೇಂದ್ರದ ನಾಯಕರು ಇವರನ್ನು ಸಮರ್ಥಿಸುತ್ತಿದ್ದಾರೆ. ಇವರ ಭ್ರಷ್ಟಾಚಾರಕ್ಕೆ ಪರ ಮುದ್ರೆ ಒತ್ತುತ್ತಿದ್ದಾರೆ. ನೋಟಿಸ್ ಕೊಡಲು ಅಧಿಕಾರ ಇಲ್ಲ. ಅವರೇನು ಸಾಕ್ಷಿದಾರರಾ ಅಪರಾಧಿನಾ ?ಅವನ ಮೇಲೆ ಕ್ರಿಮಿನಲ್ ಮೊಕದಮ್ಮೆ ಇದೆಯಾ? ಅವರು ನೋಟಿಸ್ ಕೊಟ್ಟ ತಕ್ಷಣ ಹೋಗುವುದಕ್ಕಾಗುತ್ತಾ. ಇದು ರಾಜಕೀಯ ಜನರ ಗಮನ ಬೇರೆ ಸೆಳೆಯಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದರು.
ಸಿದ್ದರಾಮಯ್ಯ ವಾಚ್ ಪ್ರಕರಣದ ಬಗ್ಗೆ ಆರೋಪದ ವಿಚಾರ: ಮಾತೆತ್ತಿದರೆ ವಾಚ್ ಬಗ್ಗೆ ಮಾತನಾಡುತ್ತಾರೆ. ವಾಚ್ ಎಸಿಬಿ ತನಿಖೆಯಾಗಿ ಇತ್ಯರ್ಥವಾಗಿದೆ. ಸರ್ಕಾರಕ್ಕೆ ವಾಪಸ್ಸು ಕೊಟ್ಟಿ ಆಗಿದೆ. ಯಾರೋ ಡಾಕ್ಟರ್ ವರ್ಮಾ ಕುಮಾರಸ್ವಾಮಿ ಕಳ್ಳತನದ ವಾಚ್ ಅಂದರು. ಎಸಿಬಿಗೆ ನಾನೇ ವಹಿಸಿದೆ ಅವರೇ ಬಂದು ರಸೀದಿ ಕೊಟ್ಟು ಮುಗಿದಿದೆ. ನಾನು ಕಟ್ಟಿಕೊಂಡಿದ್ದೇ 35 ರಿಂದ 40 ಲಕ್ಷ ಇರಬಹುದು. ಕಟ್ಟಿಕೊಂಡಿದ್ದರೆ ಏನು ? ಅದೇನು ನಿಮ್ಮಂತೆ 300 ಕೋಟಿ ವ್ಯವಹಾರನಾ ? ಆದರೆ ನಾನು ಇದನ್ನು ಸಮರ್ಥಿಸುತ್ತಿಲ್ಲ. ವಾದಕ್ಕಾಗಿ ಹೇಳುತ್ತಿದ್ದೇನೆ ಅಷ್ಟೇ ಎಂದರು.
ಇದಕ್ಕೆ ಕುಮಾರಸ್ವಾಮಿ ಪುಷ್ಟಿ ವಿಚಾರ: ಕುಮಾರಸ್ವಾಮಿ ಬಿಜೆಪಿ ಸಂಬಂಧ ಏನು ನನಗೆ ಗೊತ್ತಿಲ್ಲ. ಬಿಜೆಪಿಯಿಂದ ನಿಮ್ಮ ಕಾಲದಲ್ಲಿ ಆಗಿಲ್ವಾ ಪ್ರಶ್ನೆ ವಿಚಾರ. ರಾಜಕಾರಣದಲ್ಲಿ ಹೋಲಿಕೆ ಮಾಡುವುದು ಸರಿಯಲ್ಲ. ಜನ ನಿಮಗೆ ದುಡ್ಡು ಕೊಡುತ್ತಾರೆ. ಜನರ ಹಣ ಲೂಟಿ ಮಾಡುತ್ತಿರುವುದಕ್ಕೆ ಉತ್ತರ ಕೊಡಿ. ಆಗಲೂ ನೀವೆ ಅಧಿಕಾರದಲ್ಲಿದ್ದಿರೀ ಈಗಲೂ ನೀವೆ ಅಧಿಕಾರದಲ್ಲಿದ್ದೀರಾ ಈ ರೀತಿ ನಾನು ಯಾವಾಗಲೂ ನೋಡಿಲ್ಲ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.