ಹೈದರಾಬಾದಿನ ಶ್ರೀ ರಾಮಾನುಜಾಚಾರ್ಯರ ಪ್ರತಿಮೆ ಸ್ಥಳಕ್ಕೆ ಸುತ್ತೂರು ಶ್ರೀ ಭೇಟಿ
1 min read
ಹೈದರಾಬಾದ್: ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹೈದರಾಬಾದ್ ಮುಚಿಂತಲ್ ನಲ್ಲಿರುವ ಸಮಾನತೆಯ ಪ್ರತಿಮೆ (ರಾಮಾನುಜ ಪ್ರತಿಮೆ)ಗೆ ಭೇಟಿ ನೀಡಿದರು.
ಸಮಾನತೆಯ ಪರಿಕಲ್ಪನೆಯನ್ನು ಪ್ರಚಾರ ಮಾಡಲು ಭಗವಾಡ ರಾಮಾನುಜಾಚಾರ್ಯರ ಪ್ರತಿಮೆ ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿದ ಶ್ರೀ ಎಚ್ ತ್ರಿದಂಡಿ ಚಿನ್ನ ಜೀಯರ್ ಸ್ವಾಮೀಜಿಯವರೊಂದಿಗೆ ಪೂಜ್ಯ ಸ್ವಾಮೀಜಿ ಸಂವಾದ ನಡೆಸಿದರು.

ಸರ್ವರಿಗೂ ಸಮಾನತೆಯನ್ನು ಸಾರಿದ 11ನೇ ಶತಮಾನದ ವೈಷ್ಣವ ಸಂತ ರಾಮಾನುಜಾಚಾರ್ಯರಿಗೆ ಸಮರ್ಪಿತವಾದ ಸ್ಟ್ಯಾಚು ಆಫ್ ಇಕ್ವಾಲಿಟಿ. ಇದು ಪಂಚಲೋಹದ ವಿಗ್ರಹ ಮತ್ತು ವಿಶ್ವದ ಎರಡನೇ ಅತಿದೊಡ್ಡ ಕುಳಿತ ವಿಗ್ರಹವಾಗಿದ್ದು ಇಲ್ಲಿಯೇ ತಮ್ಮ ಶಿಷ್ಯರು ಹಾಗೂ ಭಕ್ತರ ಜೊತೆ ಫೋಟೋ ತೆಗೆಸಿಕೊಂಡರು.