ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಭೂಕಂಪನ!
ಹೊಸೂರು : ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ವ್ಯಾಪ್ತಿಯಲ್ಲಿ ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳಗಿನ ಜಾವ ೪.೧೫ ಸುಮಾರಿನಲ್ಲಿ ಭೂಮಿ ಕಂಪಿಸಿದ್ದು ಭೂಕಂಪನದ ಅನುಭವವಾಗಿದೆ. ಇದನ್ನು ಅಧಿಕಾರಿಗಳು ದೃಢ ಪಡಿಸಿದ್ದು ಭೂಮಿ ಕಂಪಿಸಿದಾಗ ನಿದ್ದೆಯಿಂದ ಎಚ್ಚರಗೊಂಡು ಕೆಲವರು ಮನೆಯಿಂದ ಹೊರ ಬಂದಿದ್ದಾರೆ. ಇವೆರಡು ತಾಲೂಕಿನಲ್ಲಿ ಎರಡನೇ ಬಾರಿಗೆ ಭೂ ಕಂಪಿಸಿದ ಅನುಭವವಾಗಿದೆ ಅಲ್ಲದೆ ಈ ಬಗ್ಗೆ ಜನರು ಆತಂಕಗೊಂಡಿದ್ದಾರೆ.