ದೇಶದಲ್ಲಿ ಯೋಜಿತ ರೀತಿಯಲ್ಲಿ ವ್ಯಾಕ್ಸಿನ್ ಅನ್ನು ನೀಡಲಾಗುತ್ತಿದೆ: ಶಾಸಕ ರಾಮದಾಸ್
1 min read
ಮೈಸೂರು: ಬಹಳಷ್ಟು ವಿಚಾರದಲ್ಲಿ ಭಾರತ ಪ್ರಥಮದಲ್ಲಿದೆ. ಕೊರೊನಾ ಇಡೀ ಪ್ರಪಂಚವನ್ನು ಕಷ್ಟಕ್ಕೆ ಸಿಲುಕಿಸಿತ್ತು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ಕೋವಿಡ್ ನಿಂದ ತತ್ತರಿಸಿ ಹೋಗಿದ್ದವು. ಪುಟ್ಟ ಪುಟ್ಟ ರಾಷ್ಟ್ರಗಳಲ್ಲೂ ಕೂಡಾ ಕೋವಿಡ್ ದೊಡ್ಡ ಸಮಸ್ಯೆಯನ್ನೇ ಮಾಡಿತ್ತು. ಇದೀಗ ಭಾರತ 100 ಕೋಟಿ ಲಸಿಕಾ ಡೋಸ್ ಅನ್ನು ನೀಡಿ ಒಂದು ದಾಖಲೆ ನಿರ್ಮಿಸಿದೆ, ಇದು ಸಾಕಾರವಾಗಬೇಕಾದರೆ ಆರೋಗ್ಯ ಕಾರ್ಯಕರ್ತರುಗಳು ಎಷ್ಟು ಮುಖ್ಯವೋ ಅದೇ ರೀತಿ ಸಮರ್ಥ ನಾಯಕತ್ವವೂ ಮುಖ್ಯವಾದದ್ದು. ಈ ದೇಶದಲ್ಲಿ ಯೋಜಿತ ರೀತಿಯಲ್ಲಿ ವ್ಯಾಕ್ಸಿನ್ ಅನ್ನು ನೀಡಲಾಗುತ್ತಿದೆ ಅಂತ ಶಾಸಕ ರಾಮದಾಸ್ ಹೇಳಿದ್ದಾರೆ.

ಅದೇ ರೀತಿ ನಮಗೂ ಕರ್ನಾಟಕದ 224 ವಿಧಾನಸಭಾ ಕ್ಷೇತ್ರದಲ್ಲಿ ಕೆ.ಆರ್ ಕ್ಷೇತ್ರದಲ್ಲಿ ಬೂತ್ ಬೂತ್ ನಲ್ಲಿ ಲಸಿಕೆ ನೀಡಿದ್ದೇವೆ ಹಾಗಾಗಿ ಕೆ.ಆರ್ ಕ್ಷೇತ್ರ ಲಸಿಕಾಕರಣದಲ್ಲಿ ರಾಜ್ಯಕ್ಕೆ ಪ್ರಥಮ ಎಂದು ರಾಜ್ಯದ ಆರೋಗ್ಯ ಸಚಿವರಾದ ಡಾ.ಸುಧಾಕರ್ ಅವರು ಘೋಷಣೆ ಮಾಡಿದ್ದಾರೆ. ಕೆ.ಆರ್ ಕ್ಷೇತ್ರದಲ್ಲಿ ಇದು ಸಾಕಾರವಾಗಿದ್ದು ನಮ್ಮ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ಸಂಘಟನೆಯಲ್ಲಿರುವ ವಾರ್ಡ್, ಬೂತ್ ಅಧ್ಯಕ್ಷರುಗಳ ಶ್ರಮದಿಂದ. 123% ವ್ಯಾಕ್ಸಿನ್ ಅನ್ನು ಕೆ.ಆರ್ ಕ್ಷೇತ್ರದಲ್ಲಿ ನೀಡಲಾಗಿದೆ ಅಂದರೆ ಕೆ.ಆರ್ ಕ್ಷೇತ್ರದ 100% ಜನ ಹಾಗೂ 23% ಬೇರೆ ಬೇರೆ ಕಡೆಯಿಂದ ಬಂದಂತಹ ಜನರಿಗೆ ಲಸಿಕೆ ನೀಡಿದ್ದೇವೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ, ಕ್ಯಾಬಿನೆಟ್ ಸಚಿವರುಗಳಿಗೆ, ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ, ಆಶಾ ಕಾರ್ಯಕರ್ತರಿಗೆ ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.